ಫೋರ್ಡ್ ಸಂಸ್ಥೆಯ ಕಾರು 
ದೇಶ

ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ ಫೋರ್ಡ್: ಚೆನ್ನೈ ನಲ್ಲಿ 3.3 ಸಾವಿರ ಮಂದಿಯ ಜೀವನ ಅತಂತ್ರ

ಅಮೆರಿಕದ ಆಟೋಮೊಬೈಲ್ ಸಂಸ್ಥೆ ಫೋರ್ಡ್ ಭಾರತದಲ್ಲಿನ ತನ್ನ ಎರಡು ಉತ್ಪದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದು ಚೆನ್ನೈ ನಲ್ಲಿರುವ 3,300 ಮಂದಿ ಉದ್ಯೋಗಿಗಳ ಜೀವನವನ್ನು ಡೋಲಾಯಮಾನ ಸ್ಥಿತಿಗೆ ದೂಡಿದೆ.

ಚೆನ್ನೈ: ಅಮೆರಿಕದ ಆಟೋಮೊಬೈಲ್ ಸಂಸ್ಥೆ ಫೋರ್ಡ್ ಭಾರತದಲ್ಲಿನ ತನ್ನ ಎರಡು ಉತ್ಪದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದು ಚೆನ್ನೈ ನಲ್ಲಿರುವ 3,300 ಮಂದಿ ಉದ್ಯೋಗಿಗಳ ಜೀವನವನ್ನು ಡೋಲಾಯಮಾನ ಸ್ಥಿತಿಗೆ ದೂಡಿದೆ.

ಮರಿಮಲೈ ನಗರ್ ನಲ್ಲಿ ಫೋರ್ಡ್ ನ ಉತ್ಪದನಾ ಘಟಕವಿದ್ದು ಈ ಘಟಕ ಮುಂದಿನ ವರ್ಷದ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

"ಸೆಮಿ ಕಂಡ್ಕ್ಟರ್ ಕೊರತೆಯ ಕಾರಣ ನೀಡಿ ಈ ವಾರ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ ಈಗ ಏಕಾಏಕಿ 2022 ರ ಎರಡನೇ ತ್ರೈಮಾಸಿಕದಲ್ಲಿ ಘಟಕವನ್ನೇ ಮುಚ್ಚುವುದಾಗಿ ಸಂಸ್ಥೆ ಘೋಷಿಸಿದೆ" ಎಂದು ಮೆಟೀರಿಯಲ್ ಹಾಗೂ ಪ್ಲಾನಿಂಗ್ ವಿಭಾಗದಲ್ಲಿರುವ ಪ್ರೊಡಕ್ಷನ್ ಅಸೋಸಿಯೇಟ್ ಸೆಲ್ವಾ ಹೇಳುತ್ತಾರೆ.

"ಈ ಘೋಷಣೆಯ ಬಗ್ಗೆ ಸಂಸ್ಥೆಯವರಿಗೆ ಈ ಹಿಂದೆಯೇ ಮಾಹಿತಿ ಇತ್ತು. ಆದ್ದರಿಂದ ಒಂದು ದಿನ ರಜೆಯನ್ನು ಘೋಷಿಸಿ ನಂತರ ಸ್ಥಗಿತಗೊಳಿಸುವ ಘೋಷಣೆಯನ್ನು ಮಾಡಿದ್ದಾರೆ. ನಮಗೆ ಪ್ರತಿಭಟನೆ ನಡೆಸುವುದಕ್ಕೂ ಅವಕಾಶವಿರಲಿಲ್ಲ. ವಾರದ ಹಿಂದೆಯಷ್ಟೇ ನಮಗೆ ವೇತನವನ್ನು ಹೆಚ್ಚಿಸಿದ್ದರು" ಎಂದು ಸೆಲ್ವಾ ಮಾಹಿತಿ ನೀಡಿದ್ದಾರೆ.

ಪ್ರತಿ ಬಾರಿ ಮೂರು ವರ್ಷಗಳ ಕಾಂಟ್ರಾಕ್ಟ್ ನಮಗೆ ಸಿಗುತ್ತಿತ್ತು. ಆದರೆ ಈ ಬಾರಿ ಕಾಂಟ್ರಾಕ್ಟ್ ನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಿದ್ದರು. ಆಗಲೇ ನಮಗೆ ಏನೋ ಆಗಲಿದೆ ಎಂಬ ಮುನ್ಸೂಚನೆ ಇತ್ತು. ಉದ್ಯೋಗಿಗಳ ವಲಯದಲ್ಲಿ "ಉತ್ಪಾದನಾ ಘಟಕವನ್ನು ಮಾರಾಟ ಮಾಡಲಿದ್ದಾರೆ ಅಥವಾ ಮತ್ತೊಂದು ಸಂಸ್ಥೆಯ ಸಹಯೋಗದಲ್ಲಿ ಉತ್ಪದನಾ ಘಟಕ ನಡೆಯಲಿದೆ ಎಂಬ ಊಹಾಪೋಹಗಳು, ವದಂತಿಗಳಿದ್ದವು. ಆದರೆ ನಾವು ಎಂದಿಗೂ ಉತ್ಪದನಾ ಘಟಕ ಮುಚ್ಚಲ್ಪಡುತ್ತದೆ ಎಂದು ಊಹಿಸಿರಲಿಲ್ಲ. ನೌಕರರನ್ನು, ಉದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇಂತಹ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಉದ್ಯೋಗಿಯೊಬ್ಬರು ಪ್ರಶ್ನಿಸಿದ್ದಾರೆ.

ಫೋರ್ಡ್ ನ ಈ ನಿರ್ಧಾರದಿಂದ 2,700 ಉದ್ಯೋಗಿಗಳು, ತಾಂತ್ರಿಕ ವರ್ಗದವರು ಹಾಗೂ 600 ಮಂದಿ ಇತರ ಸಿಬ್ಬಂದಿಗಳ ಭವಿಷ್ಯ ಅತಂತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India vs South Africa: ತವರಿನಲ್ಲಿ ಭಾರತಕ್ಕೆ ಮುಖಭಂಗ: ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬವುಮಾ ಪಡೆ!

‘ಭಾರತದ ಒಂದೇ ಜಿಲ್ಲೆಗೆ 2,20,000 H-1B ವೀಸಾ ಮಂಜೂರು’: ದೊಡ್ಡ ಪ್ರಮಾಣದ ಹಗರಣ, ಯುಎಸ್ ಅರ್ಥಶಾಸ್ತ್ರಜ್ಞ ಡಾ.ಡೇವ್ ಬ್ರಾಟ್ ಆರೋಪ

ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ: ವಿಐಟಿ ಭೋಪಾಲ್ ವಿವಿ ಕ್ಯಾಂಪಸ್ ಧ್ವಂಸ, ವಾಹನಗಳಿಗೆ ಬೆಂಕಿ

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಜನಸ್ನೇಹಿ ಅಧಿಕಾರಿ ಪ್ರಾಣ ಕಸಿದ ಶ್ವಾನ: ಮುಗಿಲು ಮುಟ್ಟಿದ ಬೀಳಗಿ ಕುಟುಂಬಸ್ಥರ ಆಕ್ರಂದನ; ಬಡತನದಲ್ಲಿ ಅರಳಿದ್ದ ಧೀಮಂತ ಪ್ರತಿಭೆ

SCROLL FOR NEXT