ಗಣೇಶೋತ್ಸವದ 10ನೇ ದಿನ ಗಣೇಶ ವಿಸರ್ಜನೆ ಮಾಡುತ್ತಿರುವ ಸ್ವಯಂ ಸೇವಕರು (ಎಎನ್ಐ ಚಿತ್ರ) 
ದೇಶ

ಮುಂಬೈನಲ್ಲಿ 10 ದಿನಗಳ ಗಣೇಶೋತ್ಸವಕ್ಕೆ ತೆರೆ: ಒಂದೇ ದಿನ 34,000 ವಿಗ್ರಹ ವಿಸರ್ಜನೆ, 3 ಯುವಕರು ನೀರು ಪಾಲು 

ಸಾರ್ವಜನಿಕ ಗಣೇಶೋತ್ಸವಕ್ಕೆ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಮುಂಬೈ ನಲ್ಲಿ ಗಣೇಶೋತ್ಸವದ ಕೊನೆಯ ದಿನದಂದು ಬರೋಬ್ಬರಿ 34,452 ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿದೆ. ಎರಡನೇ ವರ್ಷ ಕೋವಿಡ್ ಕರಿನೆರಳಿನಲ್ಲಿ ಗಣೇಶ ಹಬ್ಬ ನಡೆದಿದೆ.

ಮುಂಬೈ: ಸಾರ್ವಜನಿಕ ಗಣೇಶೋತ್ಸವಕ್ಕೆ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಮುಂಬೈ ನಲ್ಲಿ ಗಣೇಶೋತ್ಸವದ ಕೊನೆಯ ದಿನದಂದು ಬರೋಬ್ಬರಿ 34,452 ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿದೆ. ಎರಡನೇ ವರ್ಷ ಕೋವಿಡ್ ಕರಿನೆರಳಿನಲ್ಲಿ ಗಣೇಶ ಹಬ್ಬ ನಡೆದಿದೆ.

ಗಣೇಶ ವಿಸರ್ಜನೆಯ ವೇಳೆ ಅಲ್ಲಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿರುವುದು ವಾರದಿಯಾಗಿದೆ. ವರ್ಸೋವಾ ಜೆಟ್ಟಿಯಲ್ಲಿ ಗಣೇಶನ ವಿಗ್ರಹವನ್ನು ನೀರಿಗೆ ಬಿಡುವ ವೇಳೆ ಭಾನುವಾರ ರಾತ್ರಿ ಸಮುದ್ರದ ನೀರಿನಲ್ಲಿ ಮೂವರು ಯುವಕರು ಕೊಚ್ಚಿ ಹೋಗಿದ್ದರು ಈ ಯುವಕರಿಗಾಗಿ ಶೋಧಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಈ ಮೂವರು ಯುವಕರ ಜೊತೆ ತೆರಳಿದ್ದ ಇನ್ನಿಬ್ಬರು ಯುವಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಹೊರತಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.

ಬೃಹತ್ ಮುಂಬೈ ನಗರ ಪಾಲಿಕೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಭಾನುವಾರ ಒಂದೇ ದಿನ 34,452 ಗಣಪತಿ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗಿದೆ. ಇನ್ನು ನೈಸರ್ಗಿಕ ಜಲ ಮೂಲಗಳ ಬಳಿ ಜನ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದ್ದ ಕೃತಕ ಕೆರೆಗಳಲ್ಲಿ, 13,442 ಗಣೇಶಗಳನ್ನು ವಿಸರ್ಜನೆ ಮಾಡಲಾಗಿದೆ.

ಒಟ್ಟಾರೆ ವಿಸರ್ಜನೆಗೊಂಡ ಗಣೇಶ ವಿಗ್ರಹಗಳ ಪೈಕಿ 5,403 ವಿಗ್ರಹಗಳು ಸಾರ್ವಜನಿಕ ಮಂಡಳದ್ದಾಗಿದ್ದು 29,060 ವಿಗ್ರಹಗಳು ಮನೆಗಳದ್ದಾಗಿವೆ. 349 ಗೌರಿಯಾದ್ದಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೃತಕ ಕೆರೆಗಳಲ್ಲಿ 11,387ಮನೆಗಳ ಗಣಪತಿ ವಿಸರ್ಜನೆಗೊಂಡಿದ್ದರೆ, 1,890 ಸಾರ್ವಜನಿಕ ಮಂಡಲದ್ದಾಗಿವೆ.

ಪ್ರಸಿದ್ಧ ಲಾಲ್ ಬಾಗ್ ಚಾ ರಾಜ ಗಣೇಶ ವಿಗ್ರಹವನ್ನು ಮಧ್ಯಾಹ್ನ ಮೂರು ಗಂಟೆಗೆ ಗಿರ್ ಗಾವ್ ಚೌಪಟ್ಟಿಯಲ್ಲಿ ವಿಸರ್ಜನೆ ಮಾಡಲಾಯಿತು.

ಬಿಎಂಸಿ ಮುನ್ನಚ್ಚರಿಕ ಕ್ರಮವಾಗಿ 715 ಜೀವರಕ್ಷಕಗಳನ್ನು ಕೃತಕ ಹಾಗೂ ನೈಸರ್ಗಿಕ ಕೆರೆಗಳಲ್ಲಿ ನಿಯೋಜಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT