ದೇಶ

'ಜನರ ಒಳಿತಿಗಾಗಿ ಹೊಸ ಸರ್ಕಾರದೊಂದಿಗೆ ಕೆಲಸ ಮುಂದುವರಿಕೆ; ನೂತನ ಸಿಎಂ ಛನಿಗೆ ಪ್ರಧಾನಿ ಅಭಿನಂದನೆ 

Nagaraja AB

ನವದೆಹಲಿ: ಪಂಜಾಬಿನಿ 16ನೇ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ ಚರಣ್ ಜಿತ್ ಸಿಂಗ್ ಛನಿ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಜನರ ಒಳಿತಿಗಾಗಿ ಗಡಿ ರಾಜ್ಯದ ಹೊಸ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಕೆಲಸವನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ. 

ಚಂಡೀಘಡದ ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಇಬ್ಬರು ಸಂಪುಟ ಸಚಿವರೊಂದಿಗೆ ಚರಣ್ ಜಿತ್ ಸಿಂಗ್ ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

SCROLL FOR NEXT