ಕೊರೋನಾ ಸೋಂಕು 
ದೇಶ

ಕೊರೋನಾ ವೈರಾಣು ರೂಪಾಂತರಿಗಳು ಗಾಳಿಯಲ್ಲಿ ಹರಡುವುದಕ್ಕೆ ಉತ್ತಮವಾಗಿ ವಿಕಸನಗೊಳ್ಳುತ್ತಿದೆ: ಅಧ್ಯಯನ ವರದಿ

ಆಲ್ಫಾ, ಡೆಲ್ಟಾ, ಮ್ಯುಗಳಂತಹ ರೂಪಾಂತರಿಗಳು ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹದಲ್ಲಿ ಸಕ್ರಿಯವಾಗಿರುತ್ತವೆ ಎಂಬುದು ಈಗಾಗಲೇ ಬಹಿರಂಗಗೊಂಡಿರುವ ಅಂಶ.

ವಾಷಿಂಗ್ ಟನ್: ಆಲ್ಫಾ, ಡೆಲ್ಟಾ, ಮ್ಯುಗಳಂತಹ ರೂಪಾಂತರಿಗಳು ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹದಲ್ಲಿ ಸಕ್ರಿಯವಾಗಿರುತ್ತವೆ ಎಂಬುದು ಈಗಾಗಲೇ ಬಹಿರಂಗಗೊಂಡಿರುವ ಅಂಶ. ಹೊಸ ವಿಷಯವೇನೆಂದರೆ ಕೊರೋನಾದ ರೂಪಾಂತರಿಗಳು ಗಾಳಿಯಲ್ಲಿ ಹರಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. 

SARS-CoV-2 ನ ರೂಪಾಂತರಿಗಳು ಗಾಳಿಯಲ್ಲಿ ಉತ್ತಮವಾಗಿ ಹರಡುವ ಸಾಮರ್ಥ್ಯವನ್ನು ಹೊಂದುತ್ತಿವೆ ಆದ್ದರಿಂದ ಲಸಿಕೆ ಪಡೆಯುವುದರ ಜೊತೆಗೆ ಬಿಗಿಯಾಗಿ ಮಾಸ್ಕ್ ಧರಿಸುವುದು, ತಾಜಾ ಗಾಳಿ ಬರುವಂತಹ ವಾತಾವರಣ ನಿರ್ಮಾಣ ಮಾಡಿಕೊಳ್ಳುವುದು ವೈರಾಣು ಸೋಂಕಿನಿಂದ ಕಾಪಾಡಿಕೊಳ್ಳುವುದಕ್ಕೆ ಇರುವ ಮಾರ್ಗಗಳಾಗಿವೆ ಎಂದು ಅಮೆರಿಕದ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ನಲ್ಲಿ ನಡೆದ ಅಧ್ಯಯನದಲ್ಲಿ ಹೇಳಲಾಗಿದೆ.

ಕೋವಿಡ್-19 ಸೋಂಕಿಗೆ ಒಳಗಾದವರು ಉಸಿರಾಡುವ ಗಾಳಿಯಲ್ಲಿ ವೈರಾಣುಗಳಿರುತ್ತವೆ ಹಾಗೂ ಅದೇ ಬೇರೆಯವರಿಗೆ ಗಾಳಿಯ ಮೂಲಕ ಹರಡುವ ಸಾಧ್ಯತೆಗಳಿವೆ. ಉಳಿದ ಸೋಂಕಿತರ ಉಸಿರಿನಿಂದ ಗಾಳಿಯಲ್ಲಿ ಹರಡುವ ವೈರಾಣು ಸಂಖ್ಯೆಗಿಂತಲೂ ಆಲ್ಫಾ ರೂಪಾಂತರಿಯ ವೈರಾಣು ಸೋಂಕು ತಗುಲಿರುವವರ ಉಸಿರಾಟದಲ್ಲಿ 43-100 ಪಟ್ಟು ಹೆಚ್ಚು ವೈರಾಣುಗಳು ಗಾಳಿಯ ಮೂಲಕ ಹರಡುತ್ತವೆ ಎನ್ನುತ್ತಿದೆ ಅಧ್ಯಯನ ವರದಿ.

ಈ ಅಧ್ಯಯನ ವರದಿ ಜರ್ನಲ್ ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್ ನಲ್ಲಿ ಪ್ರಕಟಗೊಂಡಿದ್ದು, "ಬಿಗಿಯಾದ ಬಟ್ಟೆ ಅಥವಾ ಸರ್ಜಿಕಲ್ ಮಾಸ್ಕ್ ಧರಿಸುವುದರಿಂದ ಸೋಂಕಿತರ ಮೂಲಕ ವೈರಾಣು ಗಾಳಿಯಲ್ಲಿ ಹರಡುವುದನ್ನು ಅರ್ಧದಷ್ಟು ತಪ್ಪಿಸಬಹುದಾಗಿದೆ" ಎಂದು ಮೇರಿಲ್ಯಾಂಡ್ ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ವಿಭಾಗದ ಪ್ರೊಫೆಸರ್ ಡಾನ್ ಮಿಲ್ಟನ್ ಹೇಳಿದ್ದಾರೆ.

ಡೆಲ್ಟಾ ರೂಪಾಂತರಿ ಆಲ್ಫಾ ರೂಪಾಂತರಿಗಿಂತಲೂ ಹೆಚ್ಚು ಸಾ೦ಕ್ರಾಮಿಕವಾಗಿದೆ. ಮೂಗಿನ ಸ್ವ್ಯಾಬ್ ಮತ್ತು ಲಾಲಾರಸದ ಮೂಲಕ ಹರಡುವುದಕ್ಕಿಂತ ಗಾಳಿಯಲ್ಲಿ ಹರಡುವ ಆಲ್ಫಾ ರೂಪಾಂತರಿ ವೈರಾಣುಗಳು 18 ಪಟ್ಟು ಹೆಚ್ಚಾಗಿರುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT