ದೇಶ

ಒಡಿಶಾ: ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ದೋಣಿ ಮಗುಚಿಬಿದ್ದು, ಟಿವಿ ವರದಿಗಾರ ದುರ್ಮರಣ

Nagaraja AB

ಭುವನೇಶ್ವರ್: ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಒಡಿಆರ್ ಎಎಫ್ ಪವರ್ ದೋಣಿ ಮಹಾದಾಯಿ ನದಿಯಲ್ಲಿ ಮಗುಚಿ ಬಿದ್ದ ಪರಿಣಾಮ ಒಡಿಶಾದ ಖ್ಯಾತ ಟಿವಿ ಜರ್ನಲಿಸ್ಟ್ ಅರಿಂದಮ್ ದಾಸ್ ಶುಕ್ರವಾರ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಮತ್ತು ಕ್ಯಾಮರಾ ಪತ್ರಕರ್ತರೊಂದಿಗೆ ಅರಿಂದಮ್ ದಾಸ್ ಪವರ್ ಬೋಟ್ ನಲ್ಲಿದ್ದರು. ಪ್ರಬಲ ಪ್ರವಾಹದಿಂದಾಗಿ ದೋಣಿ ನದಿಯಲ್ಲಿ ಮಗುಚಿಬಿದಿದ್ದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ಪತ್ರಕರ್ತರು ಹಾಗೂ ಮೂವರು ಒಡಿಆರ್ ಎಫ್ ಸಿಬ್ಬಂದಿ  ಗಂಭೀರ ಸ್ಥಿತಿಯಲ್ಲಿದ್ದಾಗ ಕಟಕ್ ನ ಎಸ್ ಸಿಬಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಿ ಅರಿಂದಮ್ ಸಾವನ್ನಪ್ಪಿದ್ದ, ಆತನನ್ನು ಬದುಕುಳಿಸಲು ಸುಮಾರು ಒಂದು ಗಂಟೆಗಳ ಕಾಲ ಪ್ರಯತ್ನಿಸಲಾಯಿತು ಎಂದು ಎಸ್‌ಸಿಬಿ ಅಧೀಕ್ಷಕ ಭುವಾನಂದ ಮೊಹರಾನಾ ಸುದ್ದಿಗಾರರಿಗೆ ತಿಳಿಸಿದರು.

SCROLL FOR NEXT