ಸುಶೀಲ್ ಮೋದಿ 
ದೇಶ

ಬಿಹಾರ: ಸುಶೀಲ್ ಮೋದಿಯನ್ನು ರಾಜ್ಯ ರಾಜಕಾರಣದಿಂದ ದೂರವಿಟ್ಟಿರುವುದು ಬಿಜೆಪಿ ಹಿನ್ನಡೆಗೆ ಕಾರಣವೇ?

2020ರ ವಿಧಾನಸಭಾ ಚುನಾವಣೆಯ ನಂತರ ಬಿಹಾರದ ರಚನೆಯಾದ ಜೆಡಿಯು- ಬಿಜೆಪಿ ಸರ್ಕಾರ ಆರಂಭದಿಂದಲೂ ಅಲುಗಾಡುತ್ತಲೇ ಆರಂಭವಾಗಿತ್ತು. ಆದರೆ, ಸುಶೀಲ್ ಕುಮಾರ್ ಅವರಂತಹ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ನವದೆಹಲಿ: 2020ರ ವಿಧಾನಸಭಾ ಚುನಾವಣೆಯ ನಂತರ ಬಿಹಾರದ ರಚನೆಯಾದ ಜೆಡಿಯು- ಬಿಜೆಪಿ ಸರ್ಕಾರ ಆರಂಭದಿಂದಲೂ ಅಲುಗಾಡುತ್ತಲೇ ಆರಂಭವಾಗಿತ್ತು. ಆದರೆ, ಸುಶೀಲ್ ಕುಮಾರ್ ಮೋದಿ ಅವರಂತಹ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಮ್ಮಿಶ್ರ ಸರ್ಕಾರವನ್ನು ಅತ್ಯುತ್ತಮವಾಗಿ ಅರ್ಥ ಮಾಡಿಕೊಂಡಿದ್ದರು ಎಂದು ಉಭಯ ಪಕ್ಷಗಳ ಹಿರಿಯ ಮುಖಂಡರು ಬುಧವಾರ ಹೇಳಿದ್ದಾರೆ.

2005ರಿಂದಲೂ ಎನ್ ಡಿಎ ಮೈತ್ರಿಯನ್ನು ಸುಗಮವಾಗಿ ಸಾಗಿಸುತ್ತಿದ್ದ ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿ ಅವರನ್ನು ಬಿಹಾರ ರಾಜಕಾರಣದಲ್ಲಿ ಸಚಿನ್ ತೆಂಡೊಲ್ಕರ್ ಹಾಗೂ ಸೌರವ್ ಗಂಗೂಲಿಗೆ ಹೋಲಿಸಲಾಗುತಿತ್ತು. ಆದರೆ, 2020 ರಲ್ಲಿ ಸಮ್ಮಿಶ್ರ ಸರ್ಕಾರ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಸುಶೀಲ್ ಮೋದಿ ಮತ್ತು ಮತ್ತಿತರ  ಕೆಲವು ಹಿರಿಯ ನಾಯಕರನ್ನು  ಬಿಹಾರ ರಾಜಕೀಯದಿಂದ ದೂರವಿಟ್ಟಿತು. ಕಳೆದ ಎನ್‌ಡಿಎ ಸರ್ಕಾರದಲ್ಲಿ ಸುಶೀಲ್ ಮೋದಿ ಬದಲಿಗೆ ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಉಪಮುಖ್ಯಮಂತ್ರಿಗಳಾಗಿ ನಾಮನಿರ್ದೇಶನಗೊಂಡಿದ್ದರು.

ಬುಧವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಉಭಯ ಪಕ್ಷಗಳ ಹಿರಿಯ ಮುಖಂಡರು ಹೆಚ್ಚು ರಾಜಕೀಯ ಸ್ಥಾನಮಾನವನ್ನು ಹೊಂದಿಲ್ಲದ ಹೊಸ ನಾಯಕರ ಗುಂಪು ಮತ್ತು ಭಿನ್ನಾಭಿಪ್ರಾಯಗಳನ್ನು ಸಮನ್ವಯಗೊಳಿಸಲು ವಿಫಲವಾದ ಸಂವಹನದ ಕೊರತೆಯನ್ನು ಎತ್ತಿ ತೋರಿಸಿದರು.

ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸುಶೀಲ್ ಮೋದಿ, ನಂದ್ ಕಿಶೋರ್ ಯಾದವ್, ಪ್ರೇಮ್ ಕುಮಾರ್ ಮತ್ತು ಇತರ ಬಿಜೆಪಿ ಮುಖಂಡರ ನಾಯಕತ್ವವನ್ನು ಬಿಜೆಪಿ ಸಂಪೂರ್ಣವಾಗಿ ಬದಲಿಸಿತ್ತು. ಇವರೆಲ್ಲರೂ ಮೈತ್ರಿಯನ್ನು ಅರ್ಥ ಮಾಡಿಕೊಂಡಿದ್ದರು ಎಂದು ಮುಖಂಡರೊಬ್ಬರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡನೆ; 1 ಲಕ್ಷ ರೂ ದಂಡ; 10 ವರ್ಷ ಶಿಕ್ಷೆ!

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

ಸಮಾಧಿಯಲ್ಲೂ ನೆಮ್ಮದಿ ಇಲ್ಲ: Devil ರಿಲೀಸ್‌ಗೂ ಮುನ್ನ ದಿನ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸಗೊಳಿಸಿದ ಕಿಡಿಗೇಡಿಗಳು!

ಗೋವಿಂದಾ... ಗೋವಿಂದ..: TTDಗೆ 10 ವರ್ಷ ಕೋಟ್ಯಾಂತರ ರೂ. ಪಂಗನಾಮ; "ರೇಷ್ಮೆ" ಹಗರಣದಿಂದ ಭಾರಿ ನಷ್ಟ, ಅವಮಾನ!

ಶಾಲೆಗಳಲ್ಲಿ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಬೇಕು: ಸುಧಾ ಮೂರ್ತಿ ಸರ್ಕಾರಕ್ಕೆ ಒತ್ತಾಯ

SCROLL FOR NEXT