ಸಾಂದರ್ಭಿಕ ಚಿತ್ರಗಳು 
ದೇಶ

ಭಾರತದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 1.7 ನರ್ಸ್; ಡಬ್ಲ್ಯೂಹೆಚ್ ಒ ಮಾನದಂಡಕ್ಕಿಂತ ಕಡಿಮೆ: ಅಸೋಸಿಯೇಷನ್

ಪ್ರಸ್ತುತ ದೇಶದಲ್ಲಿ  ಪ್ರತಿ ಸಾವಿರ ಜನಸಂಖ್ಯೆಗೆ 1.7 ನರ್ಸ್ ಗಳಿದ್ದಾರೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಯಮ 1,000 ಜನಸಂಖ್ಯೆಗೆ ಮೂರು ನರ್ಸ್ ಗಳ ಮಾನದಂಡಕ್ಕಿಂತ ಕಡಿಮೆಯಾಗಿದೆ.

ನವದೆಹಲಿ: ನರ್ಸ್ ಮಿಡ್ ವೈಫ್ ಫಾರ್ ಚೆಂಜ್ ಅಭಿಯಾನಕ್ಕೆ ಒಂದು ವರ್ಷ ಮುಗಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಸಭೆಯಲ್ಲಿ ಅಭಿಯಾನದ ಪಾಲುದಾರರು, ಭಾರತೀಯ ನರ್ಸಿಂಗ್ ಕೌನ್ಸಿಲ್, ಅಖಿಲ ಭಾರತ ಸರ್ಕಾರಿ ನರ್ಸ್ ಗಳ ಫೆಡರೇಶನ್ (ಎಐಜಿಎನ್ ಎಫ್)  ಸೂಸೈಟಿ ಆಫ್ ಮಿಡ್ ವೈವ್ಸ್ ಇಂಡಿಯಾ (ಎಸ್ ಒಎಂಐ) ಮತ್ತಿತರ ಸಂಸ್ಥೆಗಳು ಜೊತೆಗೂಡಿ  ನರ್ಸ್ ಗಳು ಮತ್ತು ಸೂಲಗಿತ್ತಿ ವೃತ್ತಿಯಲ್ಲಿನ ಪರಿಣಾಮಗಳು ಮತ್ತು ಇಲ್ಲಿಯವರೆಗೂ ಆಗಿರುವ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು.

ದೇಶದ ಆರೋಗ್ಯ ಸೇವೆಯಲ್ಲಿ ನರ್ಸ್ ಗಳು ಮತ್ತು ಸೂಲಗಿತ್ತಿಯರ ಕೊಡುಗೆಯನ್ನು ತಜ್ಞರು ಪರಿಗಣಿಸಿದರು. ದೇಶದಲ್ಲಿನ ನರ್ಸ್ ಗಳು ಮತ್ತು ಸೂಲಗಿತ್ತಿಯರ ಸ್ಥಾನವನ್ನು ಮತ್ತಷ್ಟು ಬಲಪಡಿಸಬೇಕಾದ ಅಗತ್ಯತೆ ಕುರಿತಂತೆ ಸಭೆಯಲ್ಲಿ ಸಮಾಲೋಚಿಸಲಾಯಿತು. ಶಿಕ್ಷಣದಲ್ಲಿ ಹೂಡಿಕೆ. ನರ್ಸಿಂಗ್ ನಾಯಕತ್ವ, ನರ್ಸ್ ಗಳು ಮತ್ತು ರೋಗಿಗಳ ಅನುಪಾತ, ಕೆಲಸದ ಒತ್ತಡ, ಧೀರ್ಘ ಅವಧಿಯ ಕೆಲಸ, ಎರಡು ಪಾಳಿ ಕೆಲಸ ಮತ್ತಿತರ  ಪ್ರಮುಖ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು. 

ಪ್ರಸ್ತುತ ದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 1.7 ನರ್ಸ್ ಗಳಿದ್ದಾರೆ. ಇದು ವಿಶ್ವ ಆರೋಗ್ಯ ಸಂಸ್ಥೆಯ 1,000 ಜನಸಂಖ್ಯೆಗೆ ಮೂರು ನರ್ಸ್ ಗಳ ಮಾನದಂಡಕ್ಕಿಂತ ಕಡಿಮೆಯಾಗಿದೆ. ನರ್ಸ್ ಗಳು - ರೋಗಿಗಳ ನಡುವಿನ ಅನುಪಾತ ಕೆಲಸದ ಒತ್ತಡ, ಧೀರ್ಘ ಅವಧಿಯ ಕೆಲಸ, ಎರಡು ಪಾಳಿಯ ಕೆಲಸ ಮತ್ತಿತರ ಕೆಲಸಗಳಿಗೆ ಕಾರಣವಾಗುತ್ತದ್ದು, ಉತ್ತಮ ಗುಣಮಟ್ಟದ ಚಿಕಿತ್ಸೆಯೂ ಸಿಗದಂತಾಗಿದೆ. ದೇಶದಲ್ಲಿ ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಬೇಕಾಗಿದೆ.

ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ನರ್ಸ್ ಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದಾಗಿ 2000ದಲ್ಲಿದ್ದ 1000 ಜನಸಂಖ್ಯೆಗೆ 0.8 ನರ್ಸ್ ಗಳ ಸಂಖ್ಯೆಯನ್ನು 2020ರಲ್ಲಿ 1.7ಕ್ಕೆ ಹೆಚ್ಚಿಸಲಾಗಿದೆ. ಆದಾಗ್ಯೂ, ಇದು ವಿಶ್ವ ಆರೋಗ್ಯ ಸಂಸ್ಥೆಯ 1000 ಜನಸಂಖ್ಯೆಗೆ 3 ಮೂರು ನರ್ಸ್ ಗಳೆಂಬ ಮಾನದಂಡಕ್ಕಿಂತ ಕಡಿಮೆಯಿದೆ. ವ್ಯವಸ್ಥಿತವಾದ ಸುಧಾರಣೆಯ ಅಗತ್ಯವಿದೆ ಎಂದು ಭಾರತೀಯ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಟಿ. ದಿಲೀಪ್ ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT