ಸಾಂದರ್ಭಿಕ ಚಿತ್ರ 
ದೇಶ

ಸಂಪ್ರದಾಯದ ಹೆಸರಲ್ಲಿ ಪತ್ನಿಯ ಶವವನ್ನು ಮನೆಯೊಳಗೆ ಹೂತ ಮಧ್ಯ ಪ್ರದೇಶದ ಶಿಕ್ಷಕ; ನೆರೆಹೊರೆಯವರಿಂದ ಆಕ್ಷೇಪ

ಮಧ್ಯಪ್ರದೇಶದ ಸರ್ಕಾರಿ ಉದ್ಯೋಗಿಯೊಬ್ಬರು 'ಸಮುದಾಯದ ಸಂಪ್ರದಾಯ'ವನ್ನು ಗೌರವಿಸಲೆಂದು ತನ್ನ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂಳಿದ್ದಾರೆ. ಆದರೆ, ನೆರೆಹೊರೆಯವರು ವಿರೋಧಿಸಿದ ನಂತರ, ಶವವನ್ನು ಹೊರತೆಗೆದು ಸ್ಮಶಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ದಿಂಡೋರಿ: ಮಧ್ಯಪ್ರದೇಶದ ಸರ್ಕಾರಿ ಉದ್ಯೋಗಿಯೊಬ್ಬರು 'ಸಮುದಾಯದ ಸಂಪ್ರದಾಯ'ವನ್ನು ಗೌರವಿಸಲೆಂದು ತನ್ನ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂಳಿದ್ದಾರೆ. ಆದರೆ, ನೆರೆಹೊರೆಯವರು ವಿರೋಧಿಸಿದ ನಂತರ, ಶವವನ್ನು ಹೊರತೆಗೆದು ಸ್ಮಶಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶಿಕ್ಷಕ ಓಂಕಾರ್ ದಾಸ್ ಮೊಗ್ರೆ (50) ಮಂಗಳವಾರ ತನ್ನ ಪತ್ನಿ ರುಕ್ಮಿಣಿ (45) ಕುಡಗೋಲು ಕಣ ರೋಗದಿಂದ (ಕುಡಗೋಲು ಕಣ ರಕ್ತಹೀನತೆಯಲ್ಲಿ, ಕೆಲವು ಕೆಂಪು ರಕ್ತ ಕಣಗಳು ಗೋಧಿಯನ್ನು ಕತ್ತರಿಸಲು ಬಳಸುವ ಕುಡಗೋಲುಗಳಂತೆ ಕಾಣುತ್ತವೆ) ಮೃತಪಟ್ಟ ನಂತರ ತಮ್ಮ ಮನೆಯ ವರಾಂಡದಲ್ಲಿಯೇ ಹೂಳಿದ್ದಾರೆ.

ಘಟನೆ ಕುರಿತು ಸ್ಥಳೀಯರಿಂದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ದಿಂಡೋರಿ ತಹಸೀಲ್ದಾರ್ ಗೋವಿಂದರಾಮ ಸಲಾಮೆ ತಿಳಿಸಿದ್ದಾರೆ.

ಸರ್ಕಾರಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಮೊಗ್ರೆ ಅವರ ಮನೆಯೊಳಗೆ ಶವವನ್ನು ಹೂಳಲು ಅಲ್ಲಿನ ನಿವಾಸಿಗಳು ಮತ್ತು ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಮೊಗ್ರೆ ಅವರು ತಮ್ಮ ಹೆಂಡತಿ ಮೇಲಿನ ಪ್ರೀತಿಯಿಂದ ಹಾಗೆ ಮಾಡಿದ್ದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ದಿಂಡೋರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬದ ಸದಸ್ಯರ ಶವಗಳನ್ನು ಮನೆಯಲ್ಲಿನ ಆವರಣದಲ್ಲಿಯೇ ಸಮಾಧಿ ಮಾಡುವ 'ಪಣಿಕಾ ಸಮುದಾಯದ ಸಂಪ್ರದಾಯ'ದ ಬಗ್ಗೆ ಮೊಗ್ರೆ ಅವರು ಸ್ಥಳೀಯ ಜನರಿಗೆ ತಿಳಿಸಿದ್ದರು.

ಕೋತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಸಿ.ಕೆ. ಸಿರಮೆ ಮಾತನಾಡಿ, ಮೊಗ್ರೆ ಅವರು ಆಗಸ್ಟ್ 23 ರಂದು ಸಮುದಾಯದ ಪದ್ಧತಿಯನ್ನು ಉಲ್ಲೇಖಿಸಿ ಶವವನ್ನು ಹೂಳಿದ್ದಾರೆ. ನೆರೆಹೊರೆಯವರು ವಿರೋಧಿಸಿದ ನಂತರ, ಸ್ಥಳೀಯ ಅಧಿಕಾರಿಗಳು ಶವವನ್ನು ಹೊರತೆಗೆದು ಮರುದಿನ ಗೊತ್ತುಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸಿದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT