ಪಂಜಾಬ್‌ನ ಹುಸೇನಿವಾಲಾದಲ್ಲಿರುವ ಜಂಟಿ ಚೆಕ್ ಪೋಸ್ಟ್‌ನಲ್ಲಿ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್‌ಗಳು ಈದ್ ಸಂದರ್ಭದಲ್ಲಿ ಸಿಹಿ ವಿನಿಮಯ ಮಾಡಿಕೊಂಡರು. 
ದೇಶ

ಬಿಎಸ್ಎಫ್ ಸಂಸ್ಥಾಪನಾ ದಿನ: ಸಿಹಿ ಸ್ವೀಕರಿಸಲು ಪಾಕಿಸ್ತಾನದ ಗಡಿ ಕಾವಲು ಪಡೆ ಸಿಬ್ಬಂದಿ ನಿರಾಕರಣೆ

ಬಿಎಸ್ಎಫ್ ಸಂಸ್ಥಾಪನಾ ದಿನದ ಅಂಗವಾಗಿ ಗುರುವಾರ ಪಾಕಿಸ್ತಾನದ ಗಡಿ ಕಾವಲು ಪಡೆ (ಬಿಜಿಎಫ್) ಗುರುವಾರ ಭಾರತೀಯ ಗಡಿ ಭದ್ರತಾ ಪಡೆ ನೀಡಿದ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿದೆ.

ನವದೆಹಲಿ: ಬಿಎಸ್ಎಫ್ ಸಂಸ್ಥಾಪನಾ ದಿನದ ಅಂಗವಾಗಿ ಗುರುವಾರ ಪಾಕಿಸ್ತಾನದ ಗಡಿ ಕಾವಲು ಪಡೆ (ಬಿಜಿಎಫ್) ಗುರುವಾರ ಭಾರತೀಯ ಗಡಿ ಭದ್ರತಾ ಪಡೆ ನೀಡಿದ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿದೆ.

'ನಮ್ಮ ಸಂಸ್ಥಾಪನಾ ದಿನದಂದು ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಸಿಬ್ಬಂದಿಗೆ ಸಿಹಿಯನ್ನು ನೀಡುವುದು ಸಂಪ್ರದಾಯವಾಗಿದೆ. ಆದರೆ, ಅವರು ಗುರುವಾರ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿದರು' ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿಯಲ್ಲಿರುವ ಎಲ್ಲಾ ಬೆಟಾಲಿಯನ್‌ಗಳು ಸಿಹಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಈ ವರ್ಷದ ದೀಪಾವಳಿ ಮತ್ತು ಈದ್‌ನಲ್ಲಿ ಉಭಯ ಸೇನೆಗಳು ಸಿಹಿ ವಿನಿಮಯ ಮಾಡಿಕೊಂಡಿದ್ದವು. ಸಿಹಿಯನ್ನು ಸ್ವೀಕರಿಸಲು ತಮ್ಮ ಮೇಲಧಿಕಾರಿಗಳಿಂದ ಯಾವುದೇ ನಿರ್ದೇಶನವಿಲ್ಲ ಎಂದು ಪಾಕಿಸ್ತಾನದ ರೇಂಜರ್‌ಗಳ ಸಿಬ್ಬಂದಿ ಹೇಳಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಪಾಕಿಸ್ತಾನದ ರೇಂಜರ್‌ಗಳ ಉನ್ನತ ಅಧಿಕಾರಿಗಳು ಪಾಕಿಸ್ತಾನದ ಸೇನೆಯು ನಿಯೋಜಿಸಿದ ಅಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಾರೆ. ಆದರೆ, ಭಾರತೀಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಬಿಎಸ್ಎಫ್ ಸಂವಿಧಾನದ ಅಡಿಯಲ್ಲಿ ಸ್ಥಾಪಿತಗೊಂಡ ಸ್ವತಂತ್ರ ಪಡೆಯಾಗಿದ್ದು, ಸ್ವತಂತ್ರ ಸಿಬ್ಬಂದಿಯನ್ನು ಹೊಂದಿದೆ.

ಬಿಎಸ್ಎಫ್ ಅನ್ನು 1965ರ ಡಿಸೆಂಬರ್ 1ರಂದು ಹುಟ್ಟುಹಾಕಲಾಯಿತು. ಇದು ವಿಶ್ವದಲ್ಲೇ ಒಂದು ವಿಶಿಷ್ಟ ಶಕ್ತಿಯಾಗಿದ್ದು, ವಾಯುಯಾನ, ಫಿರಂಗಿ ಮತ್ತು ಜಲ ವಿಭಾಗವನ್ನು ತನ್ನ ಆಸ್ತಿಯಾಗಿ ಹೊಂದಿದೆ. 1971ರ ಪಾಕಿಸ್ತಾನದೊಂದಿಗಿನ ಯುದ್ಧದ ಸಮಯದಲ್ಲಿ ಈ ಪಡೆ ಉತ್ತಮವಾಗಿ ಕಾರ್ಯನಿರ್ವಹಿಸಿತು ಮತ್ತು ಅದರ ಸಿಬ್ಬಂದಿಗೆ ಮಹಾ ವೀರ ಚಕ್ರ ಮತ್ತು ವೀರ ಚಕ್ರ ಸೇರಿದಂತೆ ಅತ್ಯುನ್ನತ ಶೌರ್ಯ ಪದಕಗಳನ್ನು ನೀಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT