ಸಾಂದರ್ಭಿಕ ಚಿತ್ರ 
ದೇಶ

ತವಾಂಗ್ ಘರ್ಷಣೆ: ಅರುಣಾಚಲ ಪ್ರದೇಶದಲ್ಲಿ ಭಾರತೀಯ ಯುದ್ಧ ವಿಮಾನಗಳ ಗಸ್ತು ಆರಂಭ

ಚೀನಾದಿಂದ ಭಾರತದ ಗಡಿ ಪ್ರದೇಶದ ಒಳಗೆ ವಾಯುಪ್ರದೇಶದ ಉಲ್ಲಂಘನೆಯಾಗುತ್ತದೆಯೇ ಎಂದು ಪರೀಕ್ಷಿಸಲು ಭಾರತೀಯ ವಾಯುಪಡೆ (IAF) ಅರುಣಾಚಲ ಪ್ರದೇಶದ ಮೇಲೆ ಯುದ್ಧ ಗಸ್ತು ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ನವದೆಹಲಿ: ಚೀನಾದಿಂದ ಭಾರತದ ಗಡಿ ಪ್ರದೇಶದ ಒಳಗೆ ವಾಯುಪ್ರದೇಶದ ಉಲ್ಲಂಘನೆಯಾಗುತ್ತದೆಯೇ ಎಂದು ಪರೀಕ್ಷಿಸಲು ಭಾರತೀಯ ವಾಯುಪಡೆ (IAF) ಅರುಣಾಚಲ ಪ್ರದೇಶದ ಮೇಲೆ ಯುದ್ಧ ಗಸ್ತು ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಭಾರತ-ಚೀನಾ ಗಡಿ ಸಂಘರ್ಷದ ನಂತರ ಯುದ್ಧ ವಿಮಾನಗಳನ್ನು ಎರಡು ಮೂರು ಬಾರಿ ಗಸ್ತು ತಿರುಗಿಸಲಾಗಿದೆ. ವಾಯುಪಡೆಯು ಅರುಣಾಚಲದಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಯಾದ್ಯಂತ ಚೀನಾದ ವಾಯು ಚಟುವಟಿಕೆಯನ್ನು ಪತ್ತೆಹಚ್ಚಿದೆ.

ಕಳೆದ ವಾರ ಅರುಣಾಚಲ ಪ್ರದೇಶದ ಎಲ್‌ಎಸಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆಗೆ ಒಳಗಾಗಿದ್ದರು. ಮೂಲಗಳ ಪ್ರಕಾರ ಮೊದಲು ಚೀನೀ ಸೈನಿಕರು ಗಡಿಯನ್ನು ದಾಟಿ ಬಂದಿದ್ದಾರೆ. ಇದನ್ನು ಭಾರತೀಯ ಸೈನಿಕರು ದೃಢ ರೀತಿಯಲ್ಲಿ ಎದುರಿಸಿದ್ದಾರೆ. ಎರಡೂ ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಎರಡು ಕಡೆಯವರು ತಕ್ಷಣವೇ ಪ್ರದೇಶದಿಂದ ಹೊರಗುಳಿದಿದ್ದಾರೆ. 

ಪೂರ್ವ ಲಡಾಖ್‌ನಲ್ಲಿ ನಡೆದ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಸೈನಿಕರ ನಡುವೆ ಇಂತಹ ಘರ್ಷಣೆಗಳು ವರದಿಯಾಗುತ್ತಿರುವುದು ಬಹಳ ಸಮಯದ ನಂತರ ಇದೇ ಮೊದಲು.

2020 ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆಯಲ್ಲಿ ದೇಶಕ್ಕಾಗಿ 20 ಭಾರತೀಯ ಸೈನಿಕರು ಹುತಾತ್ಮಗೊಂಡಿದ್ದರು. 40 ಕ್ಕೂ ಹೆಚ್ಚು ಚೀನೀ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಗಾಯಗೊಂಡಿದ್ದರು. ಈ ಘಟನೆಯು ಎರಡು ರಾಷ್ಟ್ರಗಳ ನಡುವೆ ಘರ್ಷಣೆಯ ಸರಣಿಯನ್ನು ಹುಟ್ಟುಹಾಕಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಹಮಾಸ್ ನಿಶ್ಯಸ್ತ್ರಗೊಳಿಸುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಶ್ರೀಲಂಕಾ XI ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಸಿರಾಜ್; ಬ್ಯಾಟ್ ಪರೀಕ್ಷಿಸಿದ ಲಂಕನ್ನರು!

ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗಾಗಿ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್, video!

Toxic Trailer: ಹಿರೋಯಿನ್ ಎದುರು ಯಶ್ ಬೆತ್ತಲೆ ಸೀನ್ ನೋಡಿ ಅಭಿಮಾನಿಗಳು ದಂಗು; ಬಾಕ್ಸ್ ಆಫೀಸ್ ನಲ್ಲಿ 3000 ಕೋಟಿ ಫಿಕ್ಸ್ ಎಂದ ಫ್ಯಾನ್ಸ್!

ವಿವಿ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಗೆ ಆಹ್ವಾನ: ಅವರಿಂದ ಪದವಿಪತ್ರ ಸ್ವೀಕರಿಸಲ್ಲ ಎಂದ NALSAR ವಿದ್ಯಾರ್ಥಿಗಳು!