ದೇಶ

ತಮಿಳು ನಾಡು: ಥೇಣಿ ಜಿಲ್ಲೆಯ ಕುಮುಲಿ ಪರ್ವತ ಪ್ರದೇಶ ಬಳಿ ಆಳವಾದ ಕಂದಕಕ್ಕೆ ಕಾರು ಬಿದ್ದು 8 ಮಂದಿ ಅಯ್ಯಪ್ಪ ಭಕ್ತರು ಸಾವು

Sumana Upadhyaya

ಥೇಣಿ(ತಮಿಳು ನಾಡು):  ಶಬರಿಮಲೆಯಿಂದ ಭಕ್ತರು ವಾಪಸಾಗುತ್ತಿದ್ದ ವೇಳೆ ಕಮರಿಗೆ ಉರುಳಿದ ಪರಿಣಾಮ ಕನಿಷ್ಠ ಎಂಟು ಪ್ರಯಾಣಿಕರು ಮೃತಪಟ್ಟಿರುವ ಘಟನೆ ತಮಿಳು ನಾಡಿನ ಥೇಣಿ ಜಿಲ್ಲೆಯಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕೆ ವಿ ಮುರಳೀಧರನ್ ತಿಳಿಸಿದ್ದಾರೆ. ಗಾಯಗೊಂಡ ಇಬ್ಬರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಡ್ಡಗಾಡು ಮಾರ್ಗದ ತಿರುವಿನಲ್ಲಿ ವಾಹನ ಚಲಾಯಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಏಳು ಜನರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಅಪ್ರಾಪ್ತ ಬಾಲಕ ಸೇರಿದ್ದು, ಜಿಲ್ಲೆಯ ಆಂಡಿಪಟ್ಟಿ ನಿವಾಸಿಗಳು. ಇವರೆಲ್ಲರೂ ಶಬರಿಮಲೆಗೆ ಹೋಗಿ ವಾಪಸ್ಸಾಗುತ್ತಿದ್ದರು.

SCROLL FOR NEXT