ದೆಹಲಿಯ ಏಮ್ಸ್ 
ದೇಶ

ದೆಹಲಿಯ ಏಮ್ಸ್ ನಲ್ಲಿ ನಳ್ಳಿಗಳಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಜೀವಂತ ಹುಳಗಳು!

ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಸಮಸ್ಯೆ ಕಂಡುಬಂದು ದೆಹಲಿಯ ಏಮ್ಸ್ ತೀವ್ರ ಸುದ್ಧಿಯಾಗಿತ್ತು. ಏಮ್ಸ್‌ನ ನಿವಾಸಿ ವೈದ್ಯರು ಮತ್ತೊಂದು ಸಮಸ್ಯೆಯನ್ನು ವರದಿ ಮಾಡಿದ್ದಾರೆ, ಜೀವಂತ ಹುಳಗಳು, ಲಾರ್ವಾಗಳು ಮತ್ತು ಕೀಟಗಳು ಆಸ್ಪತ್ರೆಗೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕಂಡುಬಂದಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಏಮ್ಸ್ ಹಾಸ್ಟೆಲ್‌ಗಳು, ವಿಶೇಷವಾಗಿ ಇನ್‌ಸ್ಟಿಟ್ಯೂಟ

ನವದೆಹಲಿ: ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಸಮಸ್ಯೆ ಕಂಡುಬಂದು ದೆಹಲಿಯ ಏಮ್ಸ್ ತೀವ್ರ ಸುದ್ಧಿಯಾಗಿತ್ತು. ಏಮ್ಸ್‌ನ ನಿವಾಸಿ ವೈದ್ಯರು ಮತ್ತೊಂದು ಸಮಸ್ಯೆಯನ್ನು ವರದಿ ಮಾಡಿದ್ದಾರೆ, ಜೀವಂತ ಹುಳಗಳು, ಲಾರ್ವಾಗಳು ಮತ್ತು ಕೀಟಗಳು ಆಸ್ಪತ್ರೆಗೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕಂಡುಬಂದಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಏಮ್ಸ್ ಹಾಸ್ಟೆಲ್‌ಗಳು, ವಿಶೇಷವಾಗಿ ಇನ್‌ಸ್ಟಿಟ್ಯೂಟ್‌ನ ಟ್ರಾಮಾ ಸೆಂಟರ್ ಕ್ಯಾಂಪಸ್‌ ಗೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕಂಡುಬಂದಿದೆ.

“ನಾವು ಬಳಸುವ ನೀರು ಎಷ್ಟರ ಮಟ್ಟಿಗೆ ಕಲುಷಿತವಾಗಿದೆಯೆಂದರೆ ಈಗ ಬಳಸುತ್ತಲೇ ಇಲ್ಲ. ಟ್ಯಾಪ್ ನೀರಿನಲ್ಲಿ ಜೀವಂತ ಹುಳುಗಳು ಮತ್ತು ಇತರ ಕೀಟಗಳು ನಮ್ಮ ಬಕೆಟ್‌ಗಳ ಕೆಳಭಾಗದಲ್ಲಿ ಸಂಗ್ರಹಿಸಲ್ಪಡುತ್ತವೆ ಎಂದು ನಿವಾಸಿ ವೈದ್ಯರು ಹೇಳಿದರು. ಈ ಬಗ್ಗೆ ಪರಿಶೀಲಿಸಲು ಟ್ರಾಮಾ ಸೆಂಟರ್ ಹಾಸ್ಟೆಲ್‌ಗೆ ತಲುಪಿದಾಗ ನೀರಿನ ಮಾಲಿನ್ಯದಿಂದಾಗಿ ಹೀಗೆ ಆಗುತ್ತಿವೆ ಎನ್ನುತ್ತಾರೆ. ಇಲ್ಲಿರುವ ಸುಮಾರು 60 ಕ್ಕೂ ಹೆಚ್ಚು ನಿವಾಸಿ ವೈದ್ಯರಿಗೆ ಸೇವೆ ಸಲ್ಲಿಸುವ ಮೆಸ್‌ನ ಅಡುಗೆಮನೆಯಲ್ಲಿ ಅದೇ ನೀರನ್ನು ಬಳಸುತ್ತಿರುವುದು ಕಂಡುಬಂದಿದೆ.

“ತರಕಾರಿಗಳನ್ನು ತೊಳೆಯುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಮತ್ತು ಭಕ್ಷ್ಯಗಳವರೆಗೆ ಅದೇ ನೀರನ್ನು ಬಳಸಲಾಗುತ್ತದೆ. ಈ ಅವ್ಯವಸ್ಥೆಯಿಂದ ನಾವು ತಿನ್ನುವುದನ್ನು ನಿಲ್ಲಿಸಿದ್ದೇವೆ ಎಂದು ವೈದ್ಯರು ಹೇಳುತ್ತಾರೆ.. ಅಡುಗೆ ಮಾಡುವ ಪ್ರದೇಶದಲ್ಲಿ ಯಾವುದೇ RO ಫಿಲ್ಟರ್ ಕಂಡುಬಂದಿಲ್ಲ.  ಡಾಕ್ಟರ್ಸ್ ಅಸೋಸಿಯೇಷನ್ (ಆರ್‌ಡಿಎ) ಯನ್ನು ಕೇಳಿದಾಗ, ಹಾಸ್ಟೆಲ್‌ಗಳಾದ್ಯಂತ ವಿವಿಧ ಹಂತಗಳಲ್ಲಿ ನೀರಿನ ಮಾಲಿನ್ಯದ ಸಮಸ್ಯೆ ಇದೆ, ಮಸೀದಿ ಮಾತ್ ಕಾಂಪ್ಲೆಕ್ಸ್‌ನಲ್ಲಿರುವ ಹೊಸ ಹಾಸ್ಟೆಲ್‌ಗಳಲ್ಲಿ ವಾಸಿಸುವ ನಿವಾಸಿಗಳು ಹೆಚ್ಚು ತೊಂದರೆಗೊಳಗಾಗುತ್ತಾರೆ ಎಂದು ಹೇಳಿದರು.

ಇಲ್ಲಿನ ಹಾಸ್ಟೆಲ್‌ಗಳ ಅನೇಕ ನಿವಾಸಿಗಳು  ನೀರಿನಿಂದ ಹೊರಸೂಸುವ ದುರ್ವಾಸನೆಯ ಬಗ್ಗೆ ಆಗಾಗ್ಗೆ ದೂರುತ್ತಾರೆ. ಈ ಕಾರಣದಿಂದಾಗಿ ಅವರು ಜಠರಗರುಳಿನ ತೊಂದರೆಗಳನ್ನು ಹೊಂದಿರುತ್ತಾರೆ ಎಂದು ಹಿರಿಯ ಸದಸ್ಯರೊಬ್ಬರು ಹೇಳಿದರು. ಡಾ ಜಸ್ವಂತ್ ಜಂಗ್ರಾ, ಆರ್ ಡಿಎ ಅಧ್ಯಕ್ಷರು, ದೂರಿನ ನಂತರ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸುವಂತಹ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ ಎಂದು ಹೇಳಿದರು. ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸೂಕ್ಷ್ಮ ಜೀವವಿಜ್ಞಾನ ಇಲಾಖೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು

ಆರ್‌ಡಿಎ ಇತ್ತೀಚೆಗೆ ಡಿಸೆಂಬರ್ 28 ರಂದು ಸಂಸ್ಥೆಯ ನಿರ್ದೇಶಕರಿಗೆ ಈ ವಿಷಯವನ್ನು ಪ್ರಸ್ತಾಪಿಸಿ ಪತ್ರ ಬರೆದಿದೆ. ಸೂಕ್ಷ್ಮ ಜೀವವಿಜ್ಞಾನದ ಪರೀಕ್ಷಾ ವರದಿಯನ್ನು ಉಲ್ಲೇಖಿಸಿ ಪರೀಕ್ಷೆಯು ನೀರು "ಬಳಕೆಗೆ ಅನರ್ಹವಾಗಿದೆ" ಎಂದು ಹೇಳಿದೆ.

ಕಳೆದ ವರ್ಷ ಮೈಕ್ರೋಬಯಾಲಜಿ ವಿಭಾಗದ ವಿಶ್ಲೇಷಣೆಯಲ್ಲಿ, ಸಂಸ್ಥೆಯ ಮಜಿದ್ ಮಾತ್ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ಗಳಲ್ಲಿ ಮತ್ತು ಸೆಂಟರ್ ಫಾರ್ ಡೆಂಟಲ್ ಎಜುಕೇಶನ್ ಅಂಡ್ ರಿಸರ್ಚ್ (ಸಿಡಿಇಆರ್) ನಲ್ಲಿ ನೀರಿನ ಮಾಲಿನ್ಯ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT