ದೇಶ

ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ; ಮೂವರು ಸದಸ್ಯರನ್ನು ಉಚ್ಚಾಟಿಸಿದ ಬಿಎಸ್‌ಪಿ

Ramyashree GN

ಯಮುನಾನಗರ: ಯಮುನಾನಗರ ಜಿಲ್ಲಾ ಪರಿಷತ್ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಕ್ಕಾಗಿ ಬಹುಜನ ಸಮಾಜ ಪಕ್ಷವು ತನ್ನ ಮೂವರು ಸದಸ್ಯರನ್ನು ಉಚ್ಚಾಟಿಸಿದೆ.

ಯಮುನಾನಗರ ಜಿಲ್ಲಾ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸುಶೀಲಾ ರಾಣಿ, ಅಗ್ನಿ ವಿಜಯ್ ಸಿಂಗ್ ಮತ್ತು ಸುಮನ್ ರಾಣಿ ತಮ್ಮ ಪಕ್ಷದ ವಿರುದ್ಧ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಬಿಎಸ್‌ಪಿ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ 30 ರಂದು ನಡೆದ ಚುನಾವಣೆಯಲ್ಲಿ ಯಮುನಾನಗರ ಜಿಲ್ಲಾ ಪರಿಷತ್ತಿನ 11, 13 ಮತ್ತು 16 ನೇ ವಾರ್ಡ್‌ಗಳಿಂದ ಮೂವರು ಸದಸ್ಯರಾಗಿ ಆಯ್ಕೆಯಾಗಿದ್ದರು.

SCROLL FOR NEXT