ಮನೇಕಾ ಗಾಂಧಿ 
ದೇಶ

ರಾಮ ಕಥೆಯು ನಮ್ಮ ಧರ್ಮ, ಧರ್ಮ ಗ್ರಂಥಗಳನ್ನು ಜೀವಂತವಾಗಿರಿಸುತ್ತದೆ: ಮನೇಕಾ ಗಾಂಧಿ

ರಾಮ ಕಥೆಯು ನಮ್ಮ ಧರ್ಮ ಮತ್ತು ಧರ್ಮಗ್ರಂಥಗಳನ್ನು ಜೀವಂತವಾಗಿರಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವೆ ಮತ್ತು ಸುಲ್ತಾನ್‌ಪುರ ಲೋಕಸಭಾ ಸಂಸದೆ ಮನೇಕಾ ಗಾಂಧಿ ಹೇಳಿದ್ದಾರೆ.

ಸುಲ್ತಾನಪುರ: ರಾಮ ಕಥೆಯು ನಮ್ಮ ಧರ್ಮ ಮತ್ತು ಧರ್ಮಗ್ರಂಥಗಳನ್ನು ಜೀವಂತವಾಗಿರಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವೆ ಮತ್ತು ಸುಲ್ತಾನ್‌ಪುರ ಲೋಕಸಭಾ ಸಂಸದೆ ಮನೇಕಾ ಗಾಂಧಿ ಹೇಳಿದ್ದಾರೆ.

ಸುಲ್ತಾನ್‌ಪುರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ರಾಮಕಥಾ ಮಹೋತ್ಸವ ಮತ್ತು ವಿಷ್ಣು ಮಹಾಯಜ್ಞದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮನ ಜೀವನ ಮತ್ತು ಅವರು 14 ವರ್ಷಗಳ ವನವಾಸವನ್ನು ಎಷ್ಟು ಸಂತೋಷದಿಂದ ಸ್ವೀಕರಿಸಿದರು ಎಂಬ ಬಗ್ಗೆ ಮಾತನಾಡಿದರು.
ರಾಮಕಥೆಯು ನಮ್ಮ ಧರ್ಮ ಮತ್ತು ಧರ್ಮಗ್ರಂಥಗಳನ್ನು ಜೀವಂತವಾಗಿರಿಸುತ್ತದೆ ಎಂದು ಗಾಂಧಿ ಹೇಳಿದರು.

ತನ್ನ ಜೀವನದಲ್ಲಿ ಎರಡು ಕೆಲಸಗಳನ್ನು ಮಾಡದಿದ್ದರೆ ಭಗವಾನ್ ಶ್ರೀರಾಮನು ರಾಜನಾಗಿ ಉಳಿಯುತ್ತಿದ್ದನು ಎಂದು ಹೇಳಿದ ಅವರು, ರಾಮನು ತನ್ನ ತಂದೆ ದಶರಥ ಮತ್ತು ತಾಯಿ ಕೈಕೇಯಿಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಪಾಲಿಸಿದನು ಮತ್ತು ಸಂತೋಷದಿಂದ 14 ವರ್ಷಗಳ ವನವಾಸವನ್ನು ಸ್ವೀಕರಿಸಿದನು. ಆ ದಿನವೇ ಅವನು ಮರ್ಯಾದಾ ಪುರುಷೋತ್ತಮ ರಾಮನಾದನು ಎಂದು ಹೇಳಿದರು.

ಶ್ರೀರಾಮನು ತನ್ನ 14 ವರ್ಷಗಳ ವನವಾಸದ ಸಮಯದಲ್ಲಿ ಅನೇಕ ಜನರಿಗೆ ಸಹಾಯ ಮಾಡಿದನು ಮತ್ತು ಇದು ಅವನನ್ನು ದೇವರಾಗುವಂತೆ ಮಾಡಿತು. ಈ ರೀತಿಯಲ್ಲಿಯೇ ದೇವರು ಸೃಷ್ಟಿಯಾದನು ಎಂದು ಅವರು ಹೇಳಿದರು.

ನಾವು ಗುರುತಿಸದ ಅನೇಕ ಯುವಕರಿದ್ದಾರೆ. ಆದರೆ, ಅವರು ತಮ್ಮ ಹೆತ್ತವರಿಗೆ ವಿಧೇಯರಾಗಿ, ಬಡವರಿಗೆ ಮತ್ತು ಪ್ರತಿಯೊಂದು ಜೀವಿಗೂ ಸಹಾಯ ಮಾಡುತ್ತಾರೆ . ಸುಲ್ತಾನಪುರದಲ್ಲಿಯೂ ಅಂತಹ ಅನೇಕ ಜನರಿದ್ದಾರೆ ಎಂದು ಮೇನಕಾ ಗಾಂಧಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT