ಮನೇಕಾ ಗಾಂಧಿ 
ದೇಶ

ರಾಮ ಕಥೆಯು ನಮ್ಮ ಧರ್ಮ, ಧರ್ಮ ಗ್ರಂಥಗಳನ್ನು ಜೀವಂತವಾಗಿರಿಸುತ್ತದೆ: ಮನೇಕಾ ಗಾಂಧಿ

ರಾಮ ಕಥೆಯು ನಮ್ಮ ಧರ್ಮ ಮತ್ತು ಧರ್ಮಗ್ರಂಥಗಳನ್ನು ಜೀವಂತವಾಗಿರಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವೆ ಮತ್ತು ಸುಲ್ತಾನ್‌ಪುರ ಲೋಕಸಭಾ ಸಂಸದೆ ಮನೇಕಾ ಗಾಂಧಿ ಹೇಳಿದ್ದಾರೆ.

ಸುಲ್ತಾನಪುರ: ರಾಮ ಕಥೆಯು ನಮ್ಮ ಧರ್ಮ ಮತ್ತು ಧರ್ಮಗ್ರಂಥಗಳನ್ನು ಜೀವಂತವಾಗಿರಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವೆ ಮತ್ತು ಸುಲ್ತಾನ್‌ಪುರ ಲೋಕಸಭಾ ಸಂಸದೆ ಮನೇಕಾ ಗಾಂಧಿ ಹೇಳಿದ್ದಾರೆ.

ಸುಲ್ತಾನ್‌ಪುರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ರಾಮಕಥಾ ಮಹೋತ್ಸವ ಮತ್ತು ವಿಷ್ಣು ಮಹಾಯಜ್ಞದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮನ ಜೀವನ ಮತ್ತು ಅವರು 14 ವರ್ಷಗಳ ವನವಾಸವನ್ನು ಎಷ್ಟು ಸಂತೋಷದಿಂದ ಸ್ವೀಕರಿಸಿದರು ಎಂಬ ಬಗ್ಗೆ ಮಾತನಾಡಿದರು.
ರಾಮಕಥೆಯು ನಮ್ಮ ಧರ್ಮ ಮತ್ತು ಧರ್ಮಗ್ರಂಥಗಳನ್ನು ಜೀವಂತವಾಗಿರಿಸುತ್ತದೆ ಎಂದು ಗಾಂಧಿ ಹೇಳಿದರು.

ತನ್ನ ಜೀವನದಲ್ಲಿ ಎರಡು ಕೆಲಸಗಳನ್ನು ಮಾಡದಿದ್ದರೆ ಭಗವಾನ್ ಶ್ರೀರಾಮನು ರಾಜನಾಗಿ ಉಳಿಯುತ್ತಿದ್ದನು ಎಂದು ಹೇಳಿದ ಅವರು, ರಾಮನು ತನ್ನ ತಂದೆ ದಶರಥ ಮತ್ತು ತಾಯಿ ಕೈಕೇಯಿಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಪಾಲಿಸಿದನು ಮತ್ತು ಸಂತೋಷದಿಂದ 14 ವರ್ಷಗಳ ವನವಾಸವನ್ನು ಸ್ವೀಕರಿಸಿದನು. ಆ ದಿನವೇ ಅವನು ಮರ್ಯಾದಾ ಪುರುಷೋತ್ತಮ ರಾಮನಾದನು ಎಂದು ಹೇಳಿದರು.

ಶ್ರೀರಾಮನು ತನ್ನ 14 ವರ್ಷಗಳ ವನವಾಸದ ಸಮಯದಲ್ಲಿ ಅನೇಕ ಜನರಿಗೆ ಸಹಾಯ ಮಾಡಿದನು ಮತ್ತು ಇದು ಅವನನ್ನು ದೇವರಾಗುವಂತೆ ಮಾಡಿತು. ಈ ರೀತಿಯಲ್ಲಿಯೇ ದೇವರು ಸೃಷ್ಟಿಯಾದನು ಎಂದು ಅವರು ಹೇಳಿದರು.

ನಾವು ಗುರುತಿಸದ ಅನೇಕ ಯುವಕರಿದ್ದಾರೆ. ಆದರೆ, ಅವರು ತಮ್ಮ ಹೆತ್ತವರಿಗೆ ವಿಧೇಯರಾಗಿ, ಬಡವರಿಗೆ ಮತ್ತು ಪ್ರತಿಯೊಂದು ಜೀವಿಗೂ ಸಹಾಯ ಮಾಡುತ್ತಾರೆ . ಸುಲ್ತಾನಪುರದಲ್ಲಿಯೂ ಅಂತಹ ಅನೇಕ ಜನರಿದ್ದಾರೆ ಎಂದು ಮೇನಕಾ ಗಾಂಧಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!