ಮಹಾರಾಷ್ಟ್ರ ಸಿಎಂ ಶಿಂಧೆ 
ದೇಶ

ಶಿಂಧೆ ಬಣ ಸೇರಿದ ಶಿವಸೇನೆ ವಕ್ತಾರೆ ಶೀತಲ್ ಮ್ಹಾತ್ರೇ: ಬಂಡಾಯ ಗುಂಪಿನೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಉದ್ಧವ್ ಗೆ ಸಂಸದರ ಸಲಹೆ!

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರ ಬಣ ಸೇರುವ ಶಿವಸೇನೆಯ ನಾಯಕರು ಹೆಚ್ಚಾಗುತ್ತಿದ್ದು, ಶಿವಸೇನೆ ವಕ್ತಾರ ಶೀತಲ್ ಮ್ಹಾತ್ರೇ ಶಿಂಧೆ ಬಣ ಸೇರಿದ್ದಾರೆ. 

ಮುಂಬೈ: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರ ಬಣ ಸೇರುವ ಶಿವಸೇನೆಯ ನಾಯಕರು ಹೆಚ್ಚಾಗುತ್ತಿದ್ದು, ಶಿವಸೇನೆ ವಕ್ತಾರ ಶೀತಲ್ ಮ್ಹಾತ್ರೇ ಶಿಂಧೆ ಬಣ ಸೇರಿದ್ದಾರೆ. 

ಶೀತಲ್ ಮ್ಹಾತ್ರೇ ಮುಂಬೈ ನ ಶಿವಸೇನೆಯ ಮಾಜಿ ಕಾರ್ಪೊರೇಟರ್ ಆಗಿದ್ದು, ಸಿಎಂ ಶಿಂಧೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. 

ಉತ್ತರ ಮುಂಬೈ ನ ದಹಿಸರ್ ನಲ್ಲಿ 2012-2017 ಅವಧಿಯಲ್ಲಿ ವಾರ್ಡ್ ನಂ.7 ನ್ನು ಪ್ರತಿನಿಧಿಸುತ್ತಿದ್ದ ಶೀತಲ್, ಮಂಗಳವಾರದಂದು ಕೆಲವು ಶಿವಸೇನೆ ಕಾರ್ಯಕರ್ತರೊಂದಿಗೆ ಶಿಂಧೆ ನಿವಾಸಕ್ಕೆ ತೆರಳಿ ತಮ್ಮ ಬೆಂಬಲವನ್ನು ಶಿಂಧೆಗೆ ಘೋಷಿಸಿದ್ದರು.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಶೀತಲ್ ಅವರನ್ನು ಆಲೀಬೌಗ್ ಪೆನ್ ಏರಿಯಾಗೆ ಸಂಪರ್ಕ ಸಂಘಟಕರನ್ನಾಗಿ ನೇಮಕ ಮಾಡಿತ್ತು. ಮುಂದಿನ ಕೆಲವು ತಿಂಗಳಲ್ಲಿ ಬಿಎಂಸಿ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಶಿಂಧೆ ಬಣಕ್ಕೆ ಶಿವಸೇನೆಯ ನಾಯಕರು ಸೇರ್ಪಡೆಯಾಗುತ್ತಿರುವುದು ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: 'ಸೇವ್ ಅರೆ' ಪ್ರತಿಭಟನೆ ವೇಳೆ ಬಾಲಕಾರ್ಮಿಕರ ಬಳಕೆ: ಮಾಜಿ ಸಚಿವ ಆದಿತ್ಯ ಠಾಕ್ರೆ ಮೇಲೆ ಕಾನೂನು ಅಸ್ತ್ರ!
 
ಇದೇ ವೇಳೆ ಶಿವಸೇನೆಯ ಸಂಸದರು ಉದ್ಧವ್ ಠಾಕ್ರೆಗೆ ಸಲಹೆ ನೀಡಿದ್ದು, ಬಂಡಾಯ ಬಣದೊಂದಿಗೆ ಹಾಗೂ ಮಾಜಿ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.

ಬಿಜೆಪಿಯೊಂದಿಗೆ ಮತ್ತೆ ಮೈತ್ರಿಗೆ ಒಲವು ವ್ಯಕ್ತಪಡಿಸಿರುವ ಶಿವಸೇನೆಯ ಸಂಸದರು, ಬಿಜೆಪಿ ಶಿವಸೇನೆಗೆ ಸಹಜ ಮಿತ್ರ ಪಕ್ಷವಾಗಿದ್ದು, ಎಂವಿಎ ರೀತಿ ಅಸಹಜ ಮೈತ್ರಿಯಲ್ಲ ಎಂಬ ಅಭಿಪ್ರಾಯವನ್ನು ಸಂಸದರು ವ್ಯಕ್ತಪಡಿಸಿದ್ದಾರೆ ಎಂದು ಶಿವಸೇನೆ ಸಂಸದ ಹೇಮಂತ್ ಗೋಡ್ಸೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT