ರಾಷ್ಟ್ರೀಯ ಲಾಂಛನ 
ದೇಶ

ಹೊಸ ಸಂಸತ್ ಭವನ ಮೇಲಿನ ರಾಷ್ಟ್ರೀಯ ಲಾಂಛನ 'ವಿವಾದ' ಗಣಕೀಕೃತ ಪರಿಶೀಲನೆಗೆ ಟಿಎಂಸಿ ಸಂಸದನ ಆಗ್ರಹ!

ಹೊಸ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ವಿವಾದಕ್ಕೆ ಸಂಬಂಧಿಸಿದಂತೆ ಸಾಮ್ರಾಟ ಅಶೋಕನ ಸಿಂಹದ ಮೂಲ ಚಿಹ್ನೆಯ ವ್ಯತ್ಯಾಸವನ್ನು ಪರಿಶೀಲಿಸಲು 3D ಗಣಕೀಕೃತ ತಪಾಸಣೆ ನಡೆಸುವಂತೆ ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಕೋಲ್ಕತ್ತಾ: ಹೊಸ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ವಿವಾದಕ್ಕೆ ಸಂಬಂಧಿಸಿದಂತೆ ಸಾಮ್ರಾಟ ಅಶೋಕನ ಸಿಂಹದ ಮೂಲ ಚಿಹ್ನೆಯ ವ್ಯತ್ಯಾಸವನ್ನು ಪರಿಶೀಲಿಸಲು 3D ಗಣಕೀಕೃತ ತಪಾಸಣೆ ನಡೆಸುವಂತೆ ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಸಿರ್ಕಾರ್, 'ದೋಷವು ಈಗ ಕಾರ್ಪೆಟ್ ಅಡಿಯಲ್ಲಿ ಗುಡಿಸಲಾಗದಷ್ಟು ಎತ್ತರದಲ್ಲಿದೆ'. ಹೀಗಾಗಿ ಕಲಾವಿದರ ಆಯ್ಕೆ ಮಾಡಿದ ಪ್ರಕ್ರಿಯೆಯ ವಿವರಗಳು, ಸಂಕ್ಷಿಪ್ತವಾಗಿ ಮತ್ತು ಕಲಾಕೃತಿಯ ವೆಚ್ಚವನ್ನು ತಿಳಿಸುವಂತೆ ಮನವಿ ಮಾಡಿದ್ದಾರೆ.

ಹೊಸ ಸಂಸತ್ತಿನ ಕಟ್ಟಡಕ್ಕೆ ಸಂಬಂಧಿಸಿದಂತೆ  2021ರ ಜನವರಿ 6 ಸುಪ್ರೀಂ ಕೋರ್ಟ್ ಆದೇಶದಂತೆ ದೆಹಲಿ ನಗರ ಕಲಾ ಆಯೋಗ ಮತ್ತು ಪರಂಪರೆ ಸಂರಕ್ಷಣಾ ಸಮಿತಿಯಿಂದ ಕಲಾಕೃತಿಯನ್ನು ತೆರವುಗೊಳಿಸಲಾಗಿದೆಯೇ ಎಂದು ತಿಳಿಯಲು ಮಾಜಿ ಕೇಂದ್ರ ಸಂಸ್ಕೃತಿ ಕಾರ್ಯದರ್ಶಿ ಪ್ರಯತ್ನಿಸಿದರು.

ಕಳೆದ ಜುಲೈ 11 ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದರು. ನಂತರ ವಿರೋಧ ಪಕ್ಷಗಳು ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿದ್ದವು. ಇನ್ನು ಸಿರ್ಕಾರ್ ಮೂಲ ಲಾಂಛನದ ಎರಡು ಚಿತ್ರಗಳನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಟಿಎಂಸಿ ರಾಜ್ಯಸಭಾ ಸಂಸದರು ಮೂಲ ಅಶೋಕನ ಸಿಂಹಗಳು 'ಸುಂದರ, ರಾಜಾಭಿಮಾನಿ' ಎಂದು ಹೇಳಿಕೊಂಡರೆ, ಹೊಸ ಲಾಂಛನ 'ಗರ್ಜಿಸುವುದು, ಆಕ್ರಮಣಕಾರಿ ಮನೋಭಾವ ಮತ್ತು ಅಸಮಂಜಸವಾಗಿದೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo: ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದು, 'ಮುಚ್ಕೊಂಡ್ ಮನೆಗೆ ಹೋಗಿ..' 'crew shortage'ಗೆ ಪ್ರಯಾಣಿಕರ ಆಕ್ರೋಶ!

ದರ್ಶನ್ ಲಾಕಪ್ ಡೆತ್: 'ಸಿಐಡಿ ಅಲ್ಲ.. ನ್ಯಾಯಾಂಗ ತನಿಖೆಗೆ ಒಪ್ಪಿಸಿ': PUCL ಪ್ರತಿಭಟನೆ, ಪೊಲೀಸರಿಂದ ಹಣದ ಆಮಿಷ ಎಂದ ಪತ್ನಿ

2nd ODI: ಭಾರತಕ್ಕೆ ಆಘಾತ ನೀಡಿದ ದಕ್ಷಿಣ ಆಫ್ರಿಕಾ, ಬೃಹತ್ ರನ್ ಚೇಸ್ ಮಾಡಿ ದಾಖಲೆ! ಸರಣಿ ಸಮಬಲ

2nd ODI: ಇತಿಹಾಸ ಬರೆದ ದಕ್ಷಿಣ ಆಫ್ರಿಕಾ, ಭಾರತದಲ್ಲಿ ಬೃಹತ್ ರನ್ ಚೇಸ್, ದಾಖಲೆಗಳ ಸುರಿಮಳೆ.. ಆಸಿಸ್ ದಾಖಲೆಗೂ ಕುತ್ತು!

Video: 'ಭಾರತ ಛಿದ್ರ ಛಿದ್ರ ಆದ್ರೇನೆ ಬಾಂಗ್ಲಾದೇಶದಲ್ಲಿ ಶಾಂತಿ'; ಮಾಜಿ ಸೇನಾ ಮುಖ್ಯಸ್ಥನ ಪ್ರಚೋದನಾ ಹೇಳಿಕೆ

SCROLL FOR NEXT