ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ ಮಲೀಕ್ 
ದೇಶ

ಅಗ್ನಿಪಥ್: ನಾಲ್ಕು ವರ್ಷದ ಅವಧಿ ಕಡಿಮೆಯಾಯಿತು- ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ ಮಲೀಕ್

ಸೇನೆಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವಾಗಲೇ ಮಾಜಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ವಿ.ಪಿ ಮಲೀಕ್ ಈ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ದೇಶದ ಗಮನ ಸೆಳೆಯುತ್ತಿದೆ. 

ನವದೆಹಲಿ: ಸೇನೆಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವಾಗಲೇ ಮಾಜಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ವಿ.ಪಿ ಮಲೀಕ್ ಈ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ದೇಶದ ಗಮನ ಸೆಳೆಯುತ್ತಿದೆ. 

ಕಾರ್ಗಿಲ್ ಯುದ್ಧವನ್ನು ಮುನ್ನಡೆಸಿದ್ದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲೀಕ್, ಭೂಸೇನೆಯಲ್ಲಿ ಯುವ ಯೋಧರ ಅಗತ್ಯತೆ ಹಾಗೂ ಸಶಸ್ತ್ರ ಪಡೆಗಳಲ್ಲಿ ಟೆಕ್-ಸಾವಿ (ತಂತ್ರಜ್ಞಾನ-ಬುದ್ಧಿಶಕ್ತಿ)ಯ ಪಡೆಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. 

ಈ ಬಗ್ಗೆ ಮಯಾಂಕ್ ಸಿಂಗ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜನರಲ್ ವಿ.ಪಿ ಮಲೀಕ್, ತಾಂತ್ರಿಕ ಮಾನವಶಕ್ತಿಯನ್ನು ತರಬೇತುಗೊಳಿಸುವುದಕ್ಕೆ 4 ವರ್ಷಗಳು ಸಾಕಾಗುವುದಿಲ್ಲ ಎಂದು ಜನರಲ್ ವಿ.ಪಿ ಮಲೀಕ್ ಅಭಿಪ್ರಾಯಪಟ್ಟಿದ್ದಾರೆ. 

ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಯುತ್ತಿರುವುದು ದುರದೃಷ್ಟಕರ. ನಾವು ಆಧುನೀಕರಣಕ್ಕಾಗಿ ಹೆಚ್ಚು ನಿಧಿಯನ್ನು ಸಂಗ್ರಹಿಸಲು ದೀರ್ಘಕಾಲದಿಂದ ಸಾಧ್ಯವಾಗಿಲ್ಲ. ಈ ಸುಧಾರಣೆಗಳನ್ನು ಜಾರಿಗೊಳಿಸಿದಾಗ ಕೆಲವು ಒತ್ತಾಯಗಳಿದ್ದಾಗ, ಆ ಪೈಕಿ ಒಂದಾಗಿದ್ದ ಯೋಧರ ವಯಸ್ಸನ್ನು ಇಳಿಕೆ ಮಾಡಲು ಬಯಸಿದ್ದೆವು. ಕಾರ್ಗಿಲ್ ಪರಿಶೀಲನಾ ಸಮಿತಿಯ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದೆವು.

ವ್ಯಕ್ತಿಗೆ ವಯಸ್ಸಾದಂತೆ ದೈಹಿಕ ಪರಿಸ್ಥಿತಿಗಳು ಒಗ್ಗುವುದಿಲ್ಲ. ಎರಡನೇ ಅಂಶವೆಂದರೆ ಅಂತಹ ವ್ಯಕ್ತಿಗಳು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಜೆಸಿಒ ಹಾಗೂ ಎನ್ ಸಿಒ ಮಟ್ಟದಲ್ಲಿ ನಮಗೆ ಉನ್ನತ ಮಟ್ಟದ ನಾಯಕರ ಅಗತ್ಯವಿದೆ. ಈ ರೀತಿಯ ನಾಯಕರು ಟ್ರೂಪ್ ಗಳನ್ನು ಹಾಗೂ ಯುವ ಅಧಿಕಾರಿಗಳನ್ನು ಮುನ್ನಡೆಸಬೇಕಾಗುತ್ತದೆ. ಈಗಿನ ಯುದ್ಧಕ್ಕೆ ಹೆಚ್ಚು ಟೆಕ್-ಬುದ್ಧಿವಂತ ವ್ಯಕ್ತಿಗಳ ಅಗತ್ಯವಿದೆ.

ಅಗ್ನಿಪಥವನ್ನು ಉತ್ತಮಗೊಳಿಸಲು ನಿಮ್ಮ ಸಲಹೆಗಳೇನು?

ನನ್ನ ಅಭಿಪ್ರಾಯದಲ್ಲಿ 4 ವರ್ಷಗಳ ಅವಧಿ ಅತ್ಯಂತ ಕಡಿಮೆಯಾದದ್ದು, ಅಗ್ನಿಪಥ್ ಗೆ ಸಂಬಂಧಿದಂತೆ ತಲುಪುವಿಕೆ (ಔಟ್ ರೀಚ್) ಸರಿಯಾಗಿಲ್ಲ. ಅದಾಗಲೇ ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆಯಾಗಿ ನೇಮಕಾತಿಗೆ ಕಾಯುತ್ತಿದ್ದವರಿಗೆ ಈಗ ವಯಸ್ಸು ಹೆಚ್ಚಾಗಿದೆ. ಆರ್ಥಿಕ ಪ್ಯಾಕೇಜ್ ಎಲ್ಲವೂ ಉತ್ತಮವಾಗಿದೆ. ಆದರೆ ಈ ಯೋಜನೆ ಜಾರಿಗೊಳ್ಳುವ ವೇಳೆಗೆ ಲೋಪದೋಷಗಳು ಕಾಣಿಸುತ್ತದೆ. ಸರ್ಕಾರ ಸಂಬಂಧಪಟ್ಟವರೊಂಡಿಗೆ ಹೆಚ್ಚಿನ ಸಂವಹನ ನಡೆಸಬೇಕಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT