ದೇಶ

ಮದ್ಯಸೇವನೆಗೆ ಹಣ ನೀಡಲಿಲ್ಲವೆಂದು ಅಜ್ಜ-ಅಜ್ಜಿಯ ಹತ್ಯೆ ಮಾಡಿದ ಯುವಕ!

Srinivas Rao BV

ಲಖನೌ: ಮದ್ಯಸೇವನೆಗೆ ಹಣ ನೀಡಲಿಲ್ಲವೆಂದು ಯುವಕನೋರ್ವ ಅಜ್ಜ-ಅಜ್ಜಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದರ್ಮಿ ಗ್ರಾಮದಲ್ಲಿ ನಡೆದಿದೆ. 

ಗ್ರಾಮದಲ್ಲಿನ ಮನೆಯೊಂದರಲ್ಲಿ ವೃದ್ಧ ದಂಪತಿಯ ಮೃತ ದೇಹಗಳು ಎರಡು ಪ್ರತ್ಯೇಕ ರೂಮ್ ಗಳಲ್ಲಿ ಪತ್ತೆಯಾಗಿದೆ.

ಮದ್ಯಸೇವನೆಗೆ ಹಣ ನೀಡದ್ದಕ್ಕಾಗಿ ವೃದ್ಧ ದಂಪತಿ ಹಾಗೂ ಮೊಮ್ಮಗನ ನಡುವೆ ವಾಗ್ವಾದ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕ ಹಿಮೇಶ್ (20) ಪ್ರೇಮ್ ಶಂಕರ್ (65) ಭವನ್ ದೇವಿ (60) ಎಂಬ ದಂಪತಿಯನ್ನು ಹತ್ಯೆ ಮಾಡಿದ್ದಾರೆ. 

ದೆಹಲಿಯಲ್ಲಿ ಜೀವಿಸುತ್ತಿದ್ದ ಇವರು ವಿವಾಹ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ಈ ಗ್ರಾಮಕ್ಕೆ ಆಗಮಿಸಿದ್ದರು. ಹಿಮೇಶ್ ವಿರುದ್ಧ ಕುಟುಂಬ ಸದಸ್ಯರೇ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT