106 ವರ್ಷದ ಶ್ಯಾರ್ ಶರಣ್ ನೇಗಿ 
ದೇಶ

ಹಿಮಾಚಲ ಪ್ರದೇಶ: ದೇಶದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ 106ನೇ ವಯಸ್ಸಿನಲ್ಲಿ ನಿಧನ, ಮುಖ್ಯಮಂತ್ರಿ ಸಂತಾಪ

ದೇಶದ ಮೊದಲ ಮತದಾರ (First Voter of India) 106 ವರ್ಷದ ಶ್ಯಾಮ್ ಶರಣ್ (Shyam Saran Negi) ನೇಗಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಶಿಮ್ಲಾ: ದೇಶದ ಮೊದಲ ಮತದಾರ (First Voter of India) 106 ವರ್ಷದ ಶ್ಯಾಮ್ ಶರಣ್ (Shyam Saran Negi) ನೇಗಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೊನ್ನೆ ನವೆಂಬರ್ 2ರಂದು 14ನೇ ವಿಧಾನಸಭೆ ಚುನಾವಣೆ ನಡೆದಿತ್ತು. ಅದರಲ್ಲಿ ಸಹ ಅವರು ಮತ ಚಲಾಯಿಸಿದ್ದು ತಮ್ಮ ಜೀವಿತಾವಧಿಯಲ್ಲಿ 34ನೇ ಬಾರಿ ಮತ ಚಲಾಯಿಸಿದ್ದಾರೆ.  ಕಿನ್ನೌರ್ ಡಿಸಿ ಅಬಿದ್ ಹುಸೇನ್ ಮಾಸ್ಟರ್ ನೇಗಿ ಅವರ ಸಾವನ್ನು ಖಚಿತಪಡಿಸಿದ್ದಾರೆ. ಅವರು ದೇಶದಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಅಂದರೆ 1951ರ ಅಕ್ಟೋಬರ್ 23ರಂದು ಮೊದಲ ಮತ ಚಲಾಯಿಸಿದ್ದರೆಂಬುವುದು ಉಲ್ಲೇಖನೀಯ. 

ಕಳೆದ ಕೆಲವು ದಿನಗಳಿಂದ ಮಾಸ್ಟರ್ ನೇಗಿ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಮಾಸ್ಟರ್ ನೇಗಿ ಅವರು ನವೆಂಬರ್ 2 ರಂದು ಹಿಮಾಚಲ ವಿಧಾನಸಭಾ ಚುನಾವಣೆಗೆ ಅಂಚೆ ಮತದಾನ ಮೂಲಕ ಮತ ಚಲಾಯಿಸಿದ್ದರು.ನೇಗಿ ಅವರು ಮತ ಚಲಾಯಿಸಿದ್ದನ್ನು ಕಂಡು ಪ್ರಧಾನಿ ಮೋದಿಯವರು ಶ್ಲಾಘಿಸಿ ಟ್ವೀಟ್ ಮಾಡಿದ್ದರು. 

ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಿದ್ದು 1952ರಲ್ಲಿ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಚುನಾವಣೆ ವೇಳೆ ಭಾರೀ ಹಿಮಪಾತವಾಗುವ ಸಾಧ್ಯತೆ ಇತ್ತು. ಆದ್ದರಿಂದ, ಕಿನ್ನೌರ್‌ನಲ್ಲಿ ಅದರ ಆರು ತಿಂಗಳ ಹಿಂದೆ 1951 ರಲ್ಲಿಯೇ ಮತಗಳನ್ನು ಚಲಾಯಿಸಲಾಯಿತು ಮತ್ತು ಮಾಸ್ಟರ್ ನೇಗಿ ಅವರು ಮೊದಲ ಮತ ಚಲಾಯಿಸಿದರು. 1917 ರಲ್ಲಿ ಜನಿಸಿದ ಶ್ಯಾಮ್ ಶರಣ್ ನೇಗಿ ಅವರು 10 ನೇ ತರಗತಿಯವರೆಗೆ ಶಾಲೆಗೆ ಹೋಗಿದ್ದರು. ಕಲ್ಪದಲ್ಲಿ ಐದನೇ ತರಗತಿಯವರೆಗೆ ಓದಿದರು.

ಇದಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ರಾಂಪುರಕ್ಕೆ ಹೋದರು. ರಾಂಪುರವನ್ನು ತಲುಪಲು ಮೂರು ದಿನಗಳು ಕಾಲ್ನಡಿಗೆಯಲ್ಲೇ ಸಾಗಬೇಕಾಯ್ತು. ರಾಂಪುರದಲ್ಲಿ 9ನೇ ತರಗತಿಯವರೆಗೆ ಓದಿದರು. ವಯಸ್ಸಾದ ಕಾರಣ 10ನೇ ತರಗತಿಗೆ ಪ್ರವೇಶ ಸಿಗಲಿಲ್ಲ. ಬಳಿಕ 1940ರಿಂದ 1946ರವರೆಗೆ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸಿದ್ದರು. ಆ ನಂತರ ಶಿಕ್ಷಣ ಇಲಾಖೆಗೆ ಹೋಗಿ ಕಲ್ಪ ಲೋವರ್ ಮಿಡಲ್ ಸ್ಕೂಲ್ ನಲ್ಲಿ ಶಿಕ್ಷಕರಾದರು.

ಮುಖ್ಯಮಂತ್ರಿ ಸಂತಾಪ: ನೇಗಿಯವರ ನಿಧನಕ್ಕೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಂತಾಪ ಸೂಚಿಸಿದ್ದಾರೆ. ದೇಶದ ಮೊದಲ ಮತದಾರ ಪ್ರಥಮ ಬಾರಿಗೆ ಮತ್ತು ನಿಧನ ಹೊಂದುವುದಕ್ಕೆ ಎರಡು ದಿನ ಮೊದಲು ಮತದಾನ ಮಾಡಿದ್ದು ಯಾವಾಗಲೂ ಭಾವನಾತ್ಮಕ ವಿಷಯ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT