ಉದ್ಧವ್ ಠಾಕ್ರೆ 
ದೇಶ

ಕೇಂದ್ರದ ತನಿಖಾ ಸಂಸ್ಥೆಗಳು ಡಕಾಯಿತರು, ಅವುಗಳನ್ನು ಏಕೆ ಮುಚ್ಚಬಾರದು: ಉದ್ಧವ್ ಠಾಕ್ರೆ

ಕೇಂದ್ರದ ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳನ್ನು ಬೇಟೆಯಾಡಲು ಕೇಂದ್ರದಿಂದ "ಗುತ್ತಿಗೆ" ತೆಗೆದುಕೊಳ್ಳುವ "ಡಕಾಯಿತರು" ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಆರೋಪಿಸಿದ್ದಾರೆ.

ಮುಂಬೈ: ಕೇಂದ್ರದ ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳನ್ನು ಬೇಟೆಯಾಡಲು ಕೇಂದ್ರದಿಂದ "ಗುತ್ತಿಗೆ" ತೆಗೆದುಕೊಳ್ಳುವ "ಡಕಾಯಿತರು" ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಆರೋಪಿಸಿದ್ದಾರೆ.

'ಈ ಕೇಂದ್ರದ ತನಿಖಾ ಸಂಸ್ಥೆಗಳು ಯಾವುವೆಂದರೆ, ಅವುಗಳು ಡಕಾಯಿತರಂತೆ. ಕೇಂದ್ರದ ‘ಸಾಕು ಪ್ರಾಣಿ’ಗಳಂತೆ ವರ್ತಿಸುತ್ತವೆ. ಕೇಂದ್ರ ಹೇಳಿದರೆ ಯಾರನ್ನು ಬೇಕಾದರೂ ಟಾರ್ಗೆಟ್ ಮಾಡಲು 'ಕಾಂಟ್ರಾಕ್ಟ್' (ಸುಪಾರಿ) ತೆಗೆದುಕೊಳ್ಳುತ್ತಾವೆ. ಈ ಫೆಡರಲ್ ತನಿಖಾ ಸಂಸ್ಥೆಗಳನ್ನು ಏಕೆ ಮುಚ್ಚಬಾರದು ಎಂದು ಜನರು ಈಗ ಆಶ್ಚರ್ಯ ಪಡುತ್ತಿದ್ದಾರೆ' ಎಂದು ಕೋಪಗೊಂಡ ಠಾಕ್ರೆ ಹೇಳಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) 101 ದಿನಗಳ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಪಕ್ಷದ ಸಂಸದ ಸಂಜಯ್ ರಾವುತ್ ಅವರನ್ನು ಇಲ್ಲಿನ ಅವರ ಖಾಸಗಿ ನಿವಾಸ ‘ಮಾತೋಶ್ರೀ’ಯಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.

ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ, ಇ.ಡಿಯಿಂದ ರಾವುತ್ ಅವರ ಬಂಧನವನ್ನು "ಕಾನೂನುಬಾಹಿರ" ಎಂದು ಬಣ್ಣಿಸಿದ ಠಾಕ್ರೆ, ಆದೇಶದ ಹೊರತಾಗಿಯೂ, ಕೇಂದ್ರವು ಇನ್ನೂ ಕೆಲವು ಸುಳ್ಳು ಪ್ರಕರಣಗಳಲ್ಲಿ ಅವರನ್ನು (ರಾವುತ್) ಸಿಲುಕಿಸಲು ಪ್ರಯತ್ನಿಸಬಹುದು ಎಂದು ಹೇಳಿದರು.

ನ್ಯಾಯಾಲಯದ ತೀರ್ಪು ಕೇಂದ್ರಕ್ಕೆ ಮತ್ತು ಪಕ್ಷವನ್ನು ಬಿಟ್ಟುಹೋದ ಎಲ್ಲರಿಗೂ (ಬಂಡಾಯಗಾರರಿಗೆ) ಎಚ್ಚರಿಕೆಯಾಗಿದೆ. ಕಾಲದ ಚಕ್ರಗಳು ಬದಲಾಗುತ್ತಲೇ ಇರುತ್ತವೆ. ಸಮಯ ಬದಲಾಗುತ್ತಿದೆ ಎಂಬುದನ್ನು ದೇವೇಂದ್ರ ಫಡ್ನವಿಸ್ (ಉಪಮುಖ್ಯಮಂತ್ರಿ) ಅರಿತುಕೊಳ್ಳಬೇಕು. ನಾಳೆ ಅದು ಅವರನ್ನೂ ಹಿಡಿಯಬಹುದು' ಎಂದು ಠಾಕ್ರೆ ಎಚ್ಚರಿಸಿದ್ದಾರೆ.

ಸೇನ (ಯುಬಿಟಿ) ಮುಖ್ಯಸ್ಥರು ಕೇಂದ್ರವು ತನ್ನ ಸೇಡಿನ ರಾಜಕೀಯ ಕಾರ್ಯಸೂಚಿಯನ್ನು ಅನುಸರಿಸಲು ನ್ಯಾಯಾಲಯಗಳ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು ಮತ್ತು ಇದರ ವಿರುದ್ಧ ಜನಸಾಮಾನ್ಯರು ಧ್ವನಿ ಎತ್ತುವಂತೆ ಕರೆ ನೀಡಿದರು.

ಕೇಂದ್ರಕ್ಕೆ ಯಾವುದೇ ನಾಚಿಕೆ ಅಥವಾ ತತ್ವಗಳು ಇದ್ದಿದ್ದರೆ, ಇದು (ರಾವುತ್ ಅವರ ಬಂಧನ) ಮೊದಲ ಸ್ಥಾನದಲ್ಲಿ ಎಂದಿಗೂ ಸಂಭವಿಸುತ್ತಿರಲಿಲ್ಲ. ಇಡೀ ದೇಶ ಮತ್ತು ಜಗತ್ತು ಸರ್ಕಾರದ ನಡವಳಿಕೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗವನ್ನು ಗಮನಿಸುತ್ತಿದೆ ಎಂದು ಠಾಕ್ರೆ ಹೇಳಿದರು.

ಇದಕ್ಕೂ ಮೊದಲು, ಉದ್ಧವ್ ಠಾಕ್ರೆ ಅವರು ರಾವುತ್ ಅವರನ್ನು ಅವರ ಮನೆಯಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಅವರ ಪತ್ನಿ ರಶ್ಮಿ ಅವರು ಸಾಂಪ್ರದಾಯಿಕ ಸ್ವಾಗತ ಆರತಿಯನ್ನು ಮಾಡಿದರು. ಅವರನ್ನು ಅಭಿನಂದಿಸಿದರು ಮತ್ತು ತಿಲಕವನ್ನು ಇಟ್ಟರು. ಆದರೆ, ಆದಿತ್ಯ ಠಾಕ್ರೆ ಅವರು ರಾವುತ್ ಅವರನ್ನು ಅಪ್ಪಿಕೊಂಡರು.

ಮೂರು ತಿಂಗಳ ನಂತರ ಇದೇ ಮೊದಲ ಬಾರಿಗೆ ಠಾಕ್ರೆ ಕುಟುಂಬವನ್ನು ಭೇಟಿಯಾದ ರಾವುತ್ ಅವರನ್ನು ಪಕ್ಷದ ಇತರ ಹಲವು ನಾಯಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿ, ಹೂವುಗಳು, ಹೂಮಾಲೆಗಳನ್ನು ಹಾಕಿದರು ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT