ದೇಶ

ಪಾಲಿಗ್ರಾಫ್ ಪರೀಕ್ಷೆಗೆ ಒಳಪಡುವಂತೆ ಸತ್ಯೇಂದ್ರ ಜೈನ್, ಕೇಜ್ರಿವಾಲ್ ಗೆ ಸುಕೇಶ್ ಸವಾಲು

Srinivas Rao BV

ನವದೆಹಲಿ: ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಆದ್ಮಿ ಪಕ್ಷದ ಮುಖಂಡ ಸತ್ಯೇಂದ್ರ ಜೈನ್ ಗೆ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡುವಂತೆ ಸವಾಲು ಹಾಕಿದ್ದಾರೆ. 

ಇದೇ ವೇಳೆ, ಬಿಜೆಪಿಯ ಆಣತಿಯ ಮೇರೆಗೆ ಪತ್ರ ಬರೆಯುತ್ತಿದ್ದಾರೆ ಎಂಬ ತಮ್ಮ ವಿರುದ್ಧದ ಆರೋಪವನ್ನು ಸುಕೇಶ್ ಚಂದ್ರಶೇಖರ್ ನಿರಾಕರಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪಗಳನ್ನು ಮಾಡಿದ್ದು, ಲೆಫ್ಟಿನೆಂಟ್ ಗೌರ್ನರ್ ವಿಕೆ ಸಕ್ಸೇನಾ ಅವರಿಗೆ ಸರಣಿ ಪತ್ರ ಬರೆದಿದ್ದರು. 

ಇತ್ತೀಚೆಗೆ, ಶುಕ್ರವಾರ (ನಂ.11 ರಂದು) ಪತ್ರ ಬರೆದಿದ್ದ ಸುಕೇಶ್ ತಮ್ಮ ವಕೀಲರಿಗೆ ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸಲು ಸೂಚಿಸಿದ್ದರು. ಇದಷ್ಟೇ ಅಲ್ಲದೇ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಲು ನೀಡಲಾಗಿದ್ದ ಸಲಹೆಯನ್ನು ಸ್ವಾಗತಿಸಿ, ನಾನು ಪಾಲಿಗ್ರಾಫ್ ಪರೀಕ್ಷೆಯನ್ನು ಕೈಗೊಳ್ಳುವುದಕ್ಕೆ ಒಪ್ಪಿಗೆ ಸೂಚಿಸುತ್ತೇನೆ ಆದರೆ ಕೇಜ್ರಿವಾಲ್ ಹಾಗೂ ಸತ್ಯೇಂದ್ರ ಜೈನ್ ಸಹ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಲು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ. 

SCROLL FOR NEXT