ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಟಿಎಂಸಿ ಸಚಿವ ಅಖಿಲ್ ಗಿರಿ 
ದೇಶ

ರಾಷ್ಟ್ರಪತಿ ಮುರ್ಮು ವಿರುದ್ಧ ಟಿಎಂಸಿ ಸಚಿವ ಅಖಿಲ್ ಗಿರಿ ಆಕ್ಷೇಪಾರ್ಹ ಹೇಳಿಕೆ, ಬಿಜೆಪಿ ಖಂಡನೆ

ಪಶ್ಚಿಮ ಬಂಗಾಳ ಸಚಿವ ಮತ್ತು ಟಿಎಂಸಿ ಮುಖಂಡ ಅಖಿಲ್ ಗಿರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ರಾಜಕೀಯ ಯಾವ ಮಟ್ಟಕ್ಕೆ ಕೆಳ ಹಂತಕ್ಕೆ ತಲುಪಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ನಂದಿಗ್ರಾಮ: ಪಶ್ಚಿಮ ಬಂಗಾಳ ಸಚಿವ ಮತ್ತು ಟಿಎಂಸಿ ಮುಖಂಡ ಅಖಿಲ್ ಗಿರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ರಾಜಕೀಯ ಯಾವ ಮಟ್ಟಕ್ಕೆ ಕೆಳ ಹಂತಕ್ಕೆ ತಲುಪಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಸುವೇದು ಅಧಿಕಾರಿ ನಾನು ನೋಡಲು ಚೆನ್ನಾಗಿಲ್ಲ ಎಂದು ಹೇಳುತ್ತಾರೆ. ನೀವು ತುಂಬಾ ಸುಂದರವಾಗಿದ್ದೀರಿ! ನೋಟದಿಂದ ಮಾತ್ರ ನಾವು ಯಾರನ್ನೂ ತೀರ್ಮಾನಿಸಲು ಸಾಧ್ಯವಿಲ್ಲ. ನಾವು ರಾಷ್ಟ್ರಪತಿ ಕಚೇರಿಗೆ ಗೌರವ ನೀಡುತ್ತೇವೆ. ಆದರೆ, ನಮ್ಮ ರಾಷ್ಟ್ರಪತಿ ಹೇಗೆ ಕಾಣಿಸುತ್ತಾರೆ? ಎಂದು ಕೇಳಿದ್ದಾರೆ.

ಬಂಗಾಳ ಸಚಿವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಆಕೆಯ ಪಕ್ಷ ಬುಡಕಟ್ಟು ವಿರೋಧಿ ಎಂದು ಟೀಕಿಸಿದೆ. ದ್ರೌಪದಿ ಮುರ್ಮು  ಬುಡಕಟ್ಟು ಸಮುದಾಯದಿಂದ ಬಂದಿದ್ದು, ಅವರ ನೋಟದ ಬಗ್ಗೆ ಟಿಎಂಸಿ ಸಚಿವ ಅಖಿಲ್ ಗಿರಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಮತಾ ಬ್ಯಾನರ್ಜಿಹಾಗೂ ಅವರ ಪಕ್ಷ ಆದಿವಾಸಿ ವಿರೋಧಿಯಾಗಿದೆ ಎಂದು ಬಂಗಾಳ ಬಿಜೆಪಿ ಘಟಕ ಗಿರಿ ವಿಡಿಯೋದೊಂದಿಗೆ  ಟ್ವೀಟ್ ಮಾಡಿದೆ.

ಜುಲೈನಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ಅವರನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ ರೂ. 1,950 ಕೋಟಿ ಬಿಡುಗಡೆಗೆ ಕೇಂದ್ರದ ಅನುಮೋದನೆ!

ಮಳವಳ್ಳಿ: ಮೂರು KSRTC ಬಸ್​​ಗಳ ನಡುವೆ ಡಿಕ್ಕಿ, ಮೂವರು ಸಾವು, ಹಲವರಿಗೆ ಗಾಯ

ದೊಡ್ಡಬಳ್ಳಾಪುರ: "ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ"; ಕೃತಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ!

ವಿಕೃತ ಮನಸ್ಥಿತಿ: ಪ್ರತಿಭಟನೆ ನಡೆಸುತ್ತಿದ್ದ ತನ್ನದೇ ಜನರ ಮೇಲೆ 'ಮಲ' ಸುರಿಸುವ AI ವಿಡಿಯೋ ಹರಿಬಿಟ್ಟ Donald Trump

ಮಂಗಳೂರು: Honeytrap ಯುವಕ ಆತ್ಮಹತ್ಯೆ; ಗೆಳತಿಯರು ಬಟ್ಟೆ ಬದಲಿಸುವ ವಿಡಿಯೋ ಸೆರೆಹಿಡಿದು ವೈರಲ್, ಯುವತಿ ಬಂಧನ!

SCROLL FOR NEXT