ರಾಜನಾಥ್ ಸಿಂಗ್ 
ದೇಶ

ಏನಿದು ಜಿ20 ಲೋಗೋ ವಿವಾದ?:ನಮ್ಮ ಸಂಸ್ಕೃತಿಯನ್ನು ಮರೆತುಬಿಡಬೇಕೇ? ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದೇಕೆ?

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿ20 ಶೃಂಗಸಭೆಯ ಲೋಗೋ ವಿವಾದದ ಬಗ್ಗೆ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಸ್ಕೃತಿಯನ್ನು ನಾವು ಮರೆತುಬಿಡಬೇಕೇ? ಎಂದು ಗುಡುಗಿದ್ದಾರೆ. 

ಹರ್ಯಾಣ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿ20 ಶೃಂಗಸಭೆಯ ಲೋಗೋ ವಿವಾದದ ಬಗ್ಗೆ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಸ್ಕೃತಿಯನ್ನು ನಾವು ಮರೆತುಬಿಡಬೇಕೇ? ಎಂದು ಗುಡುಗಿದ್ದಾರೆ. 

ಶೃಂಗಸಭೆಯ ಲೋಗೋದಲ್ಲಿ ನಿರ್ದಿಷ್ಟ ಪಕ್ಷದ ಚಿಹ್ನೆಯನ್ನು ಹೋಲುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಸಂಸ್ಕೃತಿಯನ್ನು ಮರೆತುಬಿಡಬೇಕೇ? ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದು, ಜಿ20 ಶೃಂಗಸಭೆಯ ಲೋಗೋ ಬಗ್ಗೆ ಚರ್ಚೆಗಳಾಗುತ್ತಿವೆ. ಪ್ರಧಾನಿ ಮೋದಿ ಲೋಗೋ ಮೇಲೆ ತಮ್ಮ ಪಕ್ಷದ ಚಿಹ್ನೆಯನ್ನು ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ. 1857 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಒಂದು ಕೈಲಿ ರೋಟಿ (ಚಪಾತಿ) ಹಿಡಿದಿದ್ದರೆಮತ್ತೊಂದು ಕೈಲಿ ಕಮಲ ಹಿಡಿದಿದ್ದರು ಎಂಬುದು ಈ ರೀತಿ ಆರೋಪ ಮಾಡುತ್ತಿರುವವರಿಗೆ ಮರೆತುಹೋಗಿದೆ? ಎಂದು ರಕ್ಷಣಾ ಸಚಿವರು ಪ್ರಶ್ನಿಸಿದ್ದಾರೆ.
 
ಕಮಲ ನಮ್ಮ ರಾಷ್ಟ್ರೀಯ ಹೂವು ಎಂಬ ವಾಸ್ತವದ ಹೊರತಾಗಿ ಅದು ನಮ್ಮ ಪಕ್ಷದ ಚಿಹ್ನೆಯಾಗಿದೆ ಎಂಬ ಒಂದೇ ಕಾರಣಕ್ಕೆ ನಮ್ಮ ಸಂಸ್ಕೃತಿಯನ್ನು ಮರೆಯಬೇಕೆ? ಎಂದು ರಾಜನಾಥ್ ಸಿಂಗ್ ಕೇಳಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪ್ರಧಾನಿ ಮೋದಿ ಮಂಗಳವಾರದಂದು ವಿಡಿಯೋ ಕಾಫರೆನ್ಸ್ ಮೂಲಕ ಲೋಗೋ ಬಿಡುಗಡೆ ಮಾಡಿದ್ದರು. 

ಸರ್ಕಾರ ಲೋಗೋ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಾರತೀಯ ರಾಷ್ಟ್ರೀಯ ಧ್ವಜದಿಂದ ರೋಮಾಂಚಕ ಬಣ್ಣಗಳಿಂದ ಸ್ಫೂರ್ತಿ ಪಡೆದು ಲೋಗೋ ಸಿದ್ಧಪಡಿಸಲಾಗಿದೆ. ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದೊಂದಿಗೆ ಭೂಮಿಯನ್ನು ಜೋಡಿಸುವ ಸಂಕೇತವನ್ನು ಈ ಲೋಗೋ ಹೊಂದಿದೆ ಎಂದು ಸರ್ಕಾರ ಹೇಳಿದೆ.
 
ಲೋಗೋ ಬಗ್ಗೆ ಆಕ್ಷೇಪವೆತ್ತಿರುವ ಕಾಂಗ್ರೆಸ್ ನ ನಾಯಕ ಹಾಗೂ ವಕ್ತಾರ ಜೈರಾಮ್ ರಮೇಶ್, "ಬಿಜೆಪಿ ಹಾಗೂ ಪ್ರಧಾನಿಗಳು ತಮ್ಮನ್ನು ನಾಚಿಕೆಗೇಡಿನ ರೀತಿಯಲ್ಲಿ ತಮ್ಮನ್ನು ಪ್ರಚಾರ ಮಾಡಿಕೊಳ್ಳುವ ಯಾವ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ" ಎಂದು ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

Gen Z ವಿಚಾರದಲ್ಲಿ BJP-RSS ನಡುವೆ ಬಿರುಕು: ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ