ಶಬರಿಮಲೆ ಶ್ರೀಕೋವಿಲ್ ಮುಂಭಾಗದಲ್ಲಿ ನೂತನ ಶಬರಿಮಲೆ ಪೀಠಾಧಿಪತಿ ಜಯರಾಮನ್ ನಂಬೂದರಿಗೆ ಕಲಶಾಭಿಷೇಕವನ್ನು ನೆರವೇರಿಸುತ್ತಿರುವ ತಂತ್ರಿ ಕಂದರರು ರಾಜೀವರು 
ದೇಶ

ಮಂಡಲ ಪೂಜಾ ಋತು: ಭಕ್ತರ ತೀರ್ಥಯಾತ್ರೆಗೆ ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪನ ಸನ್ನಿಧಿ, ಯಾತ್ರಿಗಳು ಪುಳಕಿತ

ಇಂದು ಗುರುವಾರ ವೃಶ್ಚಿಕ ಸಂಕ್ರಮಣಕ್ಕೆ ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ದೇವಸ್ಥಾನ ನಸುಕಿನ ವೇಳೆ ಭಕ್ತಾದಿಗಳಿಗೆ ತೆರೆಯಲಾಗಿದೆ. 

ಶಬರಿಮಲೆ: ಇಂದು ಗುರುವಾರ ವೃಶ್ಚಿಕ ಸಂಕ್ರಮಣಕ್ಕೆ ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ದೇವಸ್ಥಾನ ನಸುಕಿನ ವೇಳೆ ಭಕ್ತಾದಿಗಳಿಗೆ ತೆರೆಯಲಾಗಿದೆ. 

ಇನ್ನು ಮಕರ ಸಂಕ್ರಮಣದವರೆಗೆ ಶಬರಿಮಲೆಗೆ ಹೋಗಲು ಬಯಸುವವರು ಮಾಲೆ ಧರಿಸಿ, ಜಪ ತಪ ವ್ರತಗಳನ್ನು ಆಚರಿಸಿ ಹೋಗುತ್ತಾರೆ. ಇಂದು ದೇವಾಲಯ ಸಾರ್ವಜನಿಕ ಭಕ್ತರಿಗೆ ಮುಕ್ತವಾದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇರುಮುಡಿ ಹೊತ್ತು ಬೆಳಗಿನ ಜಾವವೇ ಅಯ್ಯಪ್ಪನ ದರ್ಶನ ಮಾಡಿದರು.

ನಿನ್ನೆ ವಾರ್ಷಿಕ ತೀರ್ಥೋದ್ಭವಕ್ಕಾಗಿ ಶಬರಿಮಲೆ ದೇವಸ್ಥಾನವನ್ನು ಸಂಜೆ 5 ಗಂಟೆಗೆ ತೆರೆಯಲಾಯಿತು. ಭಾರೀ ಮಳೆಯ ನಡುವೆಯೂ ಸಹಸ್ರಾರು ಮಂದಿ ಸನ್ನಿಧಾನದಲ್ಲಿ ಮಧ್ಯಾಹ್ನದಿಂದಲೇ ದರ್ಶನಕ್ಕೆ ಆಗಮಿಸಿದ್ದರು.

ನಿರ್ಗಮಿತ ಮೇಲ್ಶಾಂತಿ ಪರಮೇಶ್ವರನ್ ನಂಬೂದಿರಿ ಅವರು ತಂತ್ರಿ ಕಂದರರು ರಾಜೀವರ ಸಮ್ಮುಖದಲ್ಲಿ ಗರ್ಭಗುಡಿಯನ್ನು ತೆರೆದರು. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್, ಸದಸ್ಯ ಪಿ.ಎಂ.ತಂಕಪ್ಪನ್, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.

ನಿನ್ನೆ ಶಬರಿಮಲೆ ಸುತ್ತಮುತ್ತ ಮಧ್ಯಾಹ್ನ 3.30ಕ್ಕೆ ಆರಂಭವಾದ ಧಾರಾಕಾರ ಮಳೆ 7 ಗಂಟೆವರೆಗೂ ಮುಂದುವರಿದಿದ್ದರಿಂದ ಪಂಪಾ, ಸನ್ನಿಧಾನಂ ಹಾಗೂ ಟ್ರೆಕ್ಕಿಂಗ್ ಪಥದಲ್ಲಿ ಭಕ್ತರು ಪರದಾಡುವಂತಾಯಿತು. ಸಂಜೆ 6.30ಕ್ಕೆ ಗರ್ಭಗುಡಿಯ ಮುಂಭಾಗದಲ್ಲಿ ನೂತನ ಮೇಳಶಾಂತಿ ಜಯರಾಮನ್‌ ನಂಬೂದಿರಿಯವರ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.

ನೂತನ ಪ್ರಧಾನ ಅರ್ಚಕರಿಗೆ ಕಲಶಾಭಿಷೇಕವನ್ನು ನೆರವೇರಿಸಿದ ತಂತ್ರಿಗಳು ಅವರನ್ನು ಶ್ರೀಕೋವಿಲಿಗೆ ಕರೆದೊಯ್ದು ಅಯ್ಯಪ್ಪನ ಮೂಲಮಂತ್ರವನ್ನು ಅವರ ಕಿವಿಯಲ್ಲಿ ಹೇಳಿದರು. ಮಲಿಕಪ್ಪುರಂ ದೇವಿ ದೇವಸ್ಥಾನದಲ್ಲಿ ಅದರ ನೂತನ ಮೇಲ್ಸಂತಿ ಹರಿಹರನ್ ನಂಬೂದರಿಗಾಗಿ ಇದೇ ರೀತಿಯ ಸಮಾರಂಭವನ್ನು ಅನುಸರಿಸಲಾಯಿತು.

ಮಂಡಲ ಪೂಜಾ ಋತು: ಇಂದು ಇಬ್ಬರು ಮೇಲ್ಸಂತಿಯರು ಒಂದು ವರ್ಷದ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿಸೆಂಬರ್ 27 ರಂದು ಮುಗಿಯುವ 41 ದಿನಗಳ ಮಂಡಲ ಪೂಜಾ ಋತುವಿನಲ್ಲಿ ದೇವಾಲಯವು ಭಕ್ತರ ದರ್ಶನಕ್ಕಾಗಿ ಬೆಳಿಗ್ಗೆ 3 ಗಂಟೆಗೆ ತೆರೆದು ಮಧ್ಯಾಹ್ನ 1 ಗಂಟೆಗೆ ಮುಚ್ಚುತ್ತದೆ. ನಂತರ ಸಂಜೆ 4 ಗಂಟೆಗೆ ತೆರೆದು ರಾತ್ರಿ 11 ಗಂಟೆಗೆ ಮುಚ್ಚುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT