ಸ್ಕೈರೂಟ್ ಏರೋಸ್ಪೇಸ್ ನಿರ್ಮಿಸಿದ ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಶ್ರೀಹರಿಕೋಟಾದ ಉಡಾವಣಾ ಪ್ಯಾಡ್‌ನಿಂದ ಉಡಾವಣೆಯಾಗಿದೆ. 
ದೇಶ

'ಮಿಷನ್ ಪ್ರಾರಂಭ' ಯಶಸ್ವಿ; ಭಾರತದ ಮೊದಲ ಖಾಸಗಿ ಉಡಾವಣಾ ವಾಹಕ ವಿಕ್ರಮ್-ಎಸ್ ಶ್ರೀಹರಿಕೋಟದಿಂದ ಉಡಾವಣೆ

ಭಾರತದ ಮೊದಲ ಖಾಸಗಿ ಉಡಾವಣಾ ವಾಹಕ ವಿಕ್ರಮ್-ಎಸ್ ಶುಕ್ರವಾರ ಚೆನ್ನೈಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಚೆನ್ನೈ: ಭಾರತದ ಮೊದಲ ಖಾಸಗಿ ಉಡಾವಣಾ ವಾಹಕ ವಿಕ್ರಮ್-ಎಸ್ ಶುಕ್ರವಾರ ಚೆನ್ನೈಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತು ಹೈದರಾಬಾದ್ ನ ಅಂತರಿಕ್ಷ ತಾಂತ್ರಿಕ ಕಂಪೆನಿ ಸ್ಕೈರೂಟ್ ಏರೋಸ್ಪೇಸ್ ಮಿಷನ್ ಪ್ರಾರಂಭ ಯಶಸ್ವಿಯಾಗಿದೆ ಎಂದು ಖುಷಿಯಿಂದ ಹೇಳಿಕೊಂಡಿವೆ. ರಾಕೆಟ್ ಮ್ಯಾಕ್ 5 ರ ಹೈಪರ್ಸಾನಿಕ್ ವೇಗದಲ್ಲಿ 89.5 ಕಿಮೀ ಅಪೋಜಿಯನ್ನು ಸಾಧಿಸಿತು. ವಿಕ್ರಮ್ ಎಸ್ 155 ಸೆಕೆಂಡುಗಳಲ್ಲಿ ಅಂತರಿಕ್ಷವನ್ನು ತಲುಪಿತು.

ಇನ್-ಸ್ಪೇಸ್, ಅಂತರಿಕ್ಷ ಇಲಾಖೆಯ ಅಧ್ಯಕ್ಷ ಪವನ್ ಕೆ ಗೋಯೆಂಕ, ಎಲ್ಲಾ ವ್ಯವಸ್ಥೆಗಳು ಯೋಜನೆ ಪ್ರಕಾರವೇ ಕೆಲಸ ಮಾಡಿದೆ. ಸ್ಕೈರೂಟ್ ಮತ್ತು ಇಸ್ರೋದ ಎಲ್ಲಾ ಕೇಂದ್ರಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಭಾರತೀಯ ಅಂತರಿಕ್ಷ ವಲಯದಲ್ಲಿ ಇದು ಹೊಸ ಆರಂಭ ಎಂದು ಹೇಳಿದ್ದಾರೆ.

ಉಡಾವಣೆಗೆ ಸಾಕ್ಷಿಯಾದ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತರಿಕ್ಷ ವಲಯದಲ್ಲಿ ಸುಧಾರಣೆ ತಂದು ಅಂತರಿಕ್ಷ ವಲಯದ ಆರಂಭಕ್ಕೆ ಖಾಸಗಿ ಸಂಸ್ಥೆಗಳಿಗೆ ವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು.

ಪ್ರಾರಂಭ್ ಮಿಷನ್ ನವ ಭಾರತವನ್ನು ಸಂಕೇತಿಸುತ್ತದೆ ಎಂದು ಕೈರೂಟ್ ಸಹ ಸಂಸ್ಥಾಪಕ ಪವನ್ ಚಂದನ ಹೇಳಿದ್ದಾರೆ. ಇದು ನಮ್ಮ ಪ್ರಾರಂಭದ ಒಂದು ಸಣ್ಣ ಹೆಜ್ಜೆ,  ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲಿದೆ. ಸ್ಕೈರೂಟ್ ತಂಡವನ್ನು ಕೈಯಲ್ಲಿ ಹಿಡಿದಿದ್ದಕ್ಕಾಗಿ ಅವರು ISRO ಮತ್ತು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರಕ್ಕೆ (IN-SPAce) ಧನ್ಯವಾದ ಅರ್ಪಿಸಿದರು.

ಸ್ಕೈರೂಟ್ ಪ್ರಕಾರ, ಶುಕ್ರವಾರದ ಉಡಾವಣೆಯು ವಿಕ್ರಮ್ ಸರಣಿಯ ಕಕ್ಷೀಯ ವರ್ಗದ ಬಾಹ್ಯಾಕಾಶ ಉಡಾವಣಾ ವಾಹನಗಳಲ್ಲಿ ಅನೇಕ ಉಪ-ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಂತೆ ಹೆಚ್ಚಿನ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪರೀಕ್ಷಿಸಿಮೌಲ್ಯೀಕರಿಸಿದೆ.

ಸದ್ಯಕ್ಕೆ, IN-SPAce ಭಾರತದಲ್ಲಿ ಬಾಹ್ಯಾಕಾಶ ಚಟುವಟಿಕೆಗಳನ್ನು ಕೈಗೊಳ್ಳಲು ಯಾವುದೇ ಸರ್ಕಾರೇತರ ಸಂಸ್ಥೆಗೆ ನೀಡಲಾದ ನಾಲ್ಕನೇ ಅಧಿಕಾರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT