ಪ್ರಾತಿನಿಧಿಕ ಚಿತ್ರ 
ದೇಶ

ಬಿಹಾರ: ಹಿಂದೂ ಎಂದು ನಟಿಸಿ ಮದುವೆಯಾದ ವ್ಯಕ್ತಿ, ಲವ್ ಜಿಹಾದ್ ಎಂದು ದೂರು ದಾಖಲಿಸಿದ ಮಹಿಳೆ

ಬಿಹಾರದ ಕತಿಹಾರ್‌ನಲ್ಲಿ ಮಹಿಳೆಯೊಬ್ಬರು ತಾನು ಹಿಂದೂ ಎಂದು ನಟಿಸಿ ದುಬೈನ ಮುಸ್ಲಿಂ ಯುವಕನೊಬ್ಬ ತನ್ನನ್ನು ಮದುವೆಯಾಗಿರುವುದಾಗಿ ಆರೋಪಿಸಿ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಕತಿಹಾರ್: ಬಿಹಾರದ ಕತಿಹಾರ್‌ನಲ್ಲಿ ಮಹಿಳೆಯೊಬ್ಬರು ತಾನು ಹಿಂದೂ ಎಂದು ನಟಿಸಿ ದುಬೈನ ಮುಸ್ಲಿಂ ಯುವಕನೊಬ್ಬ ತನ್ನನ್ನು ಮದುವೆಯಾಗಿರುವುದಾಗಿ ಆರೋಪಿಸಿ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ತನ್ನನ್ನು ಮದುವೆಯಾಗಿರುವ ವ್ಯಕ್ತಿ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದನೆಂದು ಆರೋಪಿಸಿರುವ ಅವರು, ಆತ ‘ಲವ್ ಜಿಹಾದ್’ ನಡೆಸಿದ್ದಾನೆ ಎಂದು ದೂರಿದ್ದಾರೆ.

ಜೂಲಿ ಎಂದು ಗುರುತಿಸಲಾದ ಮಹಿಳೆ ಪ್ರಕಾರ, ರಾಜ್ ಸಿಂಗ್ ಎಂದು ಹೇಳಿಕೊಂಡ ವ್ಯಕ್ತಿ ಮೂಲತಃ ತೌಕಿರ್ ಆಗಿದ್ದು, ದುಬೈನಲ್ಲಿ ವಾಸಿಸುತ್ತಿದ್ದಾನೆ. ಆತ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಮೂಲಕ ಪರಿಚಯವಾಗಿ 2017ರಲ್ಲಿ ವಿವಾಹವಾದನು ಎಂದು ಮಹಿಳೆ ತಿಳಿಸಿದ್ದಾರೆ.

ಮದುವೆ ಆದ ಮೇಲೆ ಮನೆಗೆ ಕರೆದುಕೊಂಡು ಹೋವಂತೆ ಕೇಳಿದರೂ ನಿರ್ಲಕ್ಷ್ಯ ಮಾಡುತ್ತಲೇ ಇದ್ದ. ಆಮೇಲೆ ಒಂದು ದಿನ ಅವನ ತಂಗಿಯಿಂದ ಅವನು ರಾಜ್‌ ಸಿಂಗ್ ಅಲ್ಲ ತೌಕಿರ್ ಎಂದು ಗೊತ್ತಾಯಿತು. ಆತ ಸುಪೌಲ್‌ಗೆ ಸೇರಿದವನಾಗಿದ್ದು, ಈಗ ದುಬೈನಲ್ಲಿ ವಾಸಿಸುತ್ತಿದ್ದಾನೆ. ಆತನ ಇಡೀ ಕುಟುಂಬ ಈಗ ನನ್ನನ್ನು ಮುಸ್ಲಿಂ ಆಗುವಂತೆ ಒತ್ತಾಯಿಸುತ್ತಿದೆ. ಗೋಮಾಂಸ ತಿನ್ನುವಂತೆ ಒತ್ತಾಯಿಸುತ್ತಿದ್ದಾರೆ. ನಾನು ನನ್ನ ಆಹಾರವನ್ನು ಪ್ರತ್ಯೇಕವಾಗಿ ಬೇಯಿಸುತ್ತೇನೆ' ಎಂದು ಮಹಿಳೆ ಆರೋಪಿಸಿದ್ದಾರೆ.

ತೌಕಿರ್ ಮತಾಂತರಗೊಳ್ಳಲು ಮತ್ತು ತಾನಿರುವೆಡೆಯಲ್ಲಿ ವಾಸಿಸುವಂತೆ ಒತ್ತಡ ಹೇರುತ್ತಿದ್ದ. ನನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಜೂಲಿ ಆರೋಪಿಸಿದ್ದಾರೆ.

ಆಕೆಯ ಪರ ವಕೀಲ ರಾಜೀವ್ ಕರ್ಣ್, 'ಸೀಮಾಂಚಲ್‌ಗೆ ಇದು ಹೊಸ ಘಟನೆಯಲ್ಲ. ಲವ್ ಜಿಹಾದ್ ಅನ್ನು  ದಂಧೆಯಂತೆ ಹರಡಲಾಗುತ್ತಿದೆ. ಇದರಲ್ಲಿ ವಿದೇಶಿ ಹಣ ಬಳಕೆಯಾಗುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಈ ದುರಂತದ ಫಲಿತಾಂಶಗಳು ಎದುರಾಗುತ್ತವೆ' ಎಂದಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT