ಬಿಜೆಪಿ ಲೋಗೋ 
ದೇಶ

ಜಾಕಿರ್ ನಾಯ್ಕ್ ಗೆ ಆಹ್ವಾನ: ಫೀಫಾ ಬಹಿಷ್ಕರಿಸಲು ಸರ್ಕಾರಕ್ಕೆ ಬಿಜೆಪಿ ನಾಯಕನ ಆಗ್ರಹ

ವಿವಾದಿತ ಇಸ್ಲಾಮಿಕ್ ಪ್ರಚಾರಕ ಜಾಕಿರ್ ನಾಯ್ಕ್ ನ್ನು ಫೀಫಾ ವಿಶ್ವಕಪ್ ಗೆ ಕತಾರ್ ಆಹ್ವಾನಿಸಿದೆ ಎಂಬ ಊಹಾಪೋಹಗಳ ನಡುವೆಯೇ ಇದೇ ಕಾರಣವನ್ನಿಟ್ಟುಕೊಂಡು ಫೀಫಾ ವಿಶ್ವಕಪ್ ನ್ನು ಬಹಿಷ್ಕರಿಸುವಂತೆ ಬಿಜೆಪಿ ನಾಯಕರೊಬ್ಬರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗೋವಾ: ವಿವಾದಿತ ಇಸ್ಲಾಮಿಕ್ ಪ್ರಚಾರಕ ಜಾಕಿರ್ ನಾಯ್ಕ್ ನ್ನು ಫೀಫಾ ವಿಶ್ವಕಪ್ ಗೆ ಕತಾರ್ ಆಹ್ವಾನಿಸಿದೆ ಎಂಬ ಊಹಾಪೋಹಗಳ ನಡುವೆಯೇ ಇದೇ ಕಾರಣವನ್ನಿಟ್ಟುಕೊಂಡು ಫೀಫಾ ವಿಶ್ವಕಪ್ ನ್ನು ಬಹಿಷ್ಕರಿಸುವಂತೆ ಬಿಜೆಪಿ ನಾಯಕರೊಬ್ಬರು ಸರ್ಕಾರವನ್ನು ಆಗ್ರಹಿಸಿದ್ದಾರೆ.
 
ಗೋವಾ ಬಿಜೆಪಿ ವಕ್ತಾರ, ಸವಿಯೋ ರೋಡ್ರಿಗಸ್ ಸರ್ಕಾರ ಹಾಗೂ ಫುಟ್ಬಾಲ್ ಸಂಘಗಳಿಗೆ ಈ ಮನವಿ ಸಲ್ಲಿಸಿದ್ದಾರೆ.

2016 ರಲ್ಲಿ ಭಾರತ ತೊರೆದಿರುವ ನಾಯ್ಕ್ ವಿವಾದಿತ ಧರ್ಮ ಪ್ರಚಾರಕನಾಗಿದ್ದು, ಈಗ ಮಲೇಷ್ಯಾದಲ್ಲಿದ್ದಾನೆ. ಆತನಿಗೆ ಅಲ್ಲಿನ ಸರ್ಕಾರ ಶಾಶ್ವತ ನಿವಾಸಿಯ ಸ್ಥಾನಮಾನ ನೀಡಿದೆ. ಭಾರತ ಹಲವು ಬಾರಿ ಆತನ ಗಡಿಪಾರಿಗೆ ಮಲೇಷ್ಯಾಗೆ ಮನವಿ ಸಲ್ಲಿಸಿದೆ. 

ಭಾರತೀಯ ಕಾನೂನಿನಡಿಯಲ್ಲಿ ಬೇಕಾಗಿರುವ ವಿವಾದಿತ ವ್ಯಕ್ತಿ ಜಾಕಿರ್ ನಾಯ್ಕ್ ಆಗಿದ್ದು, ದ್ವೇಷ ಭಾಷಣ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲೂ ಬೇಕಾಗಿದ್ದಾನೆ.
 
ಭಯೋತ್ಪಾದಕರ ಪರ ಮಾತನಾಡುವ ವ್ಯಕ್ತಿಯೂ ಆತನಾಗಿದ್ದು, ಆತನನ್ನೇ ಓರ್ವ ಭಯೋತ್ಪಾದಕ ಎಂದು ಹೇಳಿದರೂ ತಪ್ಪಾಗಲಾರದು ಎಂದು ಬಿಜೆಪಿ ನಾಯಕ ವಾಗ್ದಾಳಿ ನಡೆಸಿದ್ದಾನೆ.
 
ಕತಾರ್ ನಲ್ಲಿರುವ ಭಾರತೀಯರು, ಅಲ್ಲಿಗೆ ತೆರಳುತ್ತಿರುವ ಭಾರತೀಯರು, ಕೇಂದ್ರ ಸರ್ಕಾರ ಫುಟ್ಬಾಲ್ ಸಂಘಟನೆಗಳಿಗೆ ಫೀಫಾವನ್ನು ಬಹಿಷ್ಕರಿಸುವಂತೆ ಬಿಜೆಪಿ ವಕ್ತಾರ ಸವಿಯೋ ರೋಡ್ರಿಗಸ್ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT