ಬಂಧನ (ಸಂಗ್ರಹ ಚಿತ್ರ) 
ದೇಶ

ಮೃತ ವ್ಯಕ್ತಿಯ 19.70 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ: ಕ್ರೈಸ್ತ ಪಾದ್ರಿ, ಬಾರ್ ನ ಮಹಿಳಾ ಉದ್ಯೋಗಿ ಸೇರಿ ಮೂವರ ಬಂಧನ

ಮೃತ ವ್ಯಕ್ತಿ ವ್ಯಕ್ತಿಯೋರ್ವನ 19.70 ಕೋಟಿ ರೂಪಾಯಿ ಆಸ್ತಿ ಕಬಳಿಸಿದ್ದ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಥಾಣೆಯಲ್ಲಿ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಥಾಣೆ: ಮೃತ ವ್ಯಕ್ತಿ ವ್ಯಕ್ತಿಯೋರ್ವನ 19.70 ಕೋಟಿ ರೂಪಾಯಿ ಆಸ್ತಿ ಕಬಳಿಸಿದ್ದ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಥಾಣೆಯಲ್ಲಿ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಬಂಧನಕ್ಕೊಳಗಾಗಿರುವವರ ಪೈಕಿ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೂ ಇದ್ದು, ಮೃತ ವ್ಯಕ್ತಿಯೋರ್ವನ ಆಸ್ತಿ ಕಬಳಿಸುವುದಕ್ಕಾಗಿ ಆತನೊಂದಿಗೆ ವಿವಾಹವಾಗಿದ್ದನ್ನು ನಂಬಿಸಲು ನಕಲಿ ವಿವಾಹ ಪ್ರಮಾಣಪತ್ರವನ್ನು ಆರೋಪಿಗಳು ತಯಾರಿಸಿದ್ದರು. 

ಅಂಜಲಿ ಅಗರ್ವಾಲ್ (30) ಥಾಮಸ್ ರಾಮುಲ್ ಗೋಡ್ಪವಾರ್ (50) ಮಹೇಶ್ ಕಟ್ಕರ್ (37)  ಬಂಧಿತ ಆರೋಪಿಗಳಗಿದ್ದಾರೆ. 

ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಅಗರ್ವಾಲ್ ಆ ಬಾರ್ ಗೆ ಆಗಾಗ್ಗೆ ಬರುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬರೊಂದಿಗೆ ಗೆ ಪ್ರೇಮಾಂಕುರವಾಗಿತ್ತು. ಆ ಗ್ರಾಹಕ 2021 ರ ನವೆಂಬರ್ ನಲ್ಲಿ ಮೃತಪಟ್ಟಿದ್ದ. ಆದರೆ ಅಂಜಲಿ ಅಗರ್ವಾಲ್ ಇಬ್ಬರು ವ್ಯಕ್ತಿಗಳ ಸಹಾಯ ಪಡೆದು ಗ್ರಾಹಕನೊಂದಿಗೆ ತನ್ನ ಮದುವೆ ಆಗಿದೆ ಎಂದು ನಂಬಿಸುವ ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಆತನ 19.70 ಕೋಟಿ ರೂಪಾಯಿ ಆಸ್ತಿ ಯನ್ನು ಕಬಳಿಸಿದ್ದರು ಎಂದು ಪೊಲೀಸ್ ಅಧಿಕಾರಿ ಮಲೋಜಿ ಶಿಂಧೆ ಹೇಳಿದ್ದಾರೆ. 

ಈ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ಮೃತ ವ್ಯಕ್ತಿಯ ತಾಯಿ ದೂರು ನೀಡಿದ್ದು, ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಲೋಕಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ, ಶೀಘ್ರದಲ್ಲೇ ರಾಜೀನಾಮೆ; ರಾಜ್ಯಪಾಲ ಗೆಹ್ಲೋಟ್ ಇಂದೇ ಬೆಂಗಳೂರಿಗೆ ವಾಪಸ್

ಮುಂದಿನ CM ಡಿಕೆ.ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್; Video

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮನ: ಕರ್ನಾಟಕದಲ್ಲಿ ಕಾಂಗ್ರೆಸ್‌ನ 'ಅಹಿಂದ ಮತಬ್ಯಾಂಕ್' ಮೇಲೆ ಪರಿಣಾಮ?

SCROLL FOR NEXT