ಕೋಟಾ: ಯಕೃತ್ ಸೋಂಕಿನಿಂದಾಗಿ 18 ವರ್ಷದ ಎನ್ಇಇಟಿ ಆಕಾಂಕ್ಷಿಯೊಬ್ಬರು ನಿಧನರಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ವೈಭವ್ ರಾಯ್ ನಿಧನರಾಗಿರುವ ವಿದ್ಯಾರ್ಥಿಯಾಗಿದ್ದು, 36 ವಿದ್ಯಾರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಅನಾರಗ್ಯಕ್ಕೀಡಾಗಿದ್ದಾರೆ.
ಈ ಘಟನೆ ಜವಾಹರ್ ನಗರದಲ್ಲಿ ವರದಿಯಾಗಿದ್ದು, 18 ವಿದ್ಯಾರ್ಥಿಗಳು ಈ ವರೆಗೂ ಚೇತರಿಸಿಕೊಂಡಿದ್ದರೆ, ಇನ್ನೂ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಜೇವರ್ಗಿ: ಕಲುಷಿತ ನೀರು ಕುಡಿದು 23 ಮಂದಿ ಅಸ್ವಸ್ಥ
ಕೋಟಾದ ಸಿಎಂಹೆಚ್ಒ ಡಾ. ಜಗದೀಷ್ ಸೋನಿ ಪಿಟಿಐ ಗೆ ಹೇಳಿಕೆ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಚಿಂಗ್ ಸಂಸ್ಥೆಗಳು, ಹೋಟೆಲ್ ಗಳು, ಕ್ಯಾಂಟೀನ್ ಗಳಿಗೆ ನೀರು ಪೂರೈಸುತ್ತಿರುವ 3 ನೀರು ಪೂರೈಕೆ ವ್ಯವಸ್ಥೆಯಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದೇ ಈ ಘಟನೆಗೆ ಕಾರಣವಿರಬಹುದು ಎಂದು ಹೇಳಿದ್ದಾರೆ.