ಬಿಜೆಪಿ ನಾಯಕಿ ರೂಬಿ ಖಾನ್ 
ದೇಶ

ಉತ್ತರ ಪ್ರದೇಶ: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬಿಜೆಪಿ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ ಜಾರಿ

ಗಣೇಶ ಚತುರ್ಥಿ ದಿನದಿಂದು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿದ್ದಕ್ಕಾಗಿ ಆಲಿಘಡದ ಮುಸ್ಲಿಂ ನಾಯಕಿ ರೂಬಿ ಆಶಿಫ್ ಖಾನ್ ವಿರುದ್ಧ ದೇವಬಂದ್ ಮುಫ್ತಿ ಅರ್ಷದ್ ಫಾರೂಕಿ ಫತ್ವಾ ಹೊರಡಿಸಿದ್ದಾರೆ. ರೂಬಿ ಆಸಿಫಾ ನಡವಳಿಕೆ ಇಸ್ಲಾಮಿಕ್ ವಿರುದ್ಧವಾಗಿದೆ ಎಂದು ಮುಫ್ತಿ ಹೇಳಿದ್ದಾರೆ. ರೂಬಿ ಆಲಿಘಡದ ಬಿಜೆಪಿ ಮಹಿಳಾ ಮೋರ್ಚಾದ  ಉಪಾಧ್ಯಕ್ಷರಾಗಿದ್ದಾರೆ.

ಲಖನೌ:  ಗಣೇಶ ಚತುರ್ಥಿ ದಿನದಿಂದು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿದ್ದಕ್ಕಾಗಿ ಆಲಿಘಡದ ಮುಸ್ಲಿಂ ನಾಯಕಿ ರೂಬಿ ಆಶಿಫ್ ಖಾನ್ ವಿರುದ್ಧ ದೇವಬಂದ್ ಮುಫ್ತಿ ಅರ್ಷದ್ ಫಾರೂಕಿ ಫತ್ವಾ ಹೊರಡಿಸಿದ್ದಾರೆ. ರೂಬಿ ಆಸಿಫಾ ನಡವಳಿಕೆ ಇಸ್ಲಾಮಿಕ್ ವಿರುದ್ಧವಾಗಿದೆ ಎಂದು ಮುಫ್ತಿ ಹೇಳಿದ್ದಾರೆ. ರೂಬಿ ಆಲಿಘಡದ ಬಿಜೆಪಿ ಮಹಿಳಾ ಮೋರ್ಚಾದ  ಉಪಾಧ್ಯಕ್ಷರಾಗಿದ್ದಾರೆ.

ರೂಬಿ ಆಸಿಫ್ ಖಾನ್ ಧಾರ್ಮಿಕ ಸೌಹಾರ್ದತೆಯ ಉದಾಹರಣೆಯಾಗಿ, ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಇಸ್ಲಾಮಿಕ್ ಧಾರ್ಮಿಕ ಗುರುಗಳ ಗಮನ ಸೆಳೆದಿದ್ದರು. ಗಣೇಶನನ್ನು ಹಿಂದೂಗಳು ಹೆಚ್ಚಾಗಿ ಪೂಜಿಸುತ್ತಾರೆ ಮತ್ತು ಅವರು ಜ್ಞಾನದಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾರೆ ಎಂದು ತಿಳಿದುಬಂದಿದೆ, ಆದರೆ ಇಸ್ಲಾಂನಲ್ಲಿ ವಿಗ್ರಹ ಪೂಜೆಯನ್ನು ಅನುಮತಿಸಲಾಗುವುದಿಲ್ಲ ಎಂದು ದೇವಬಂದ್‌ನ ಮುಫ್ತಿ ಅರ್ಷದ್ ಫಾರೂಕಿ ಹೇಳಿದ್ದಾರೆ.

ಇಸ್ಲಾಂ ಧರ್ಮದಲ್ಲಿ ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಪೂಜಿಸಲಾಗುವುದಿಲ್ಲ. ಈ ರೀತಿ ಮಾಡುವವರು ಇಸ್ಲಾಂ ವಿರೋಧಿಗಳು. ವಿಗ್ರಹವನ್ನು ಪೂಜಿಸುವವರ ವಿರುದ್ಧ, ಇಸ್ಲಾಂ ಧರ್ಮಕ್ಕೆ ವಿರುದ್ಧವಾದವರಿಗೆ ಫತ್ವಾ ಹೊರಡಿಸಲಾಗುವುದು ಎಂದು ಮುಫ್ತಿ ಹೇಳಿದ್ದಾರೆ. 

ಫತ್ವಾ ಕುರಿತಂತೆ ಪ್ರತಿಕ್ರಿಯಿಸಿರುವ ರೂಬಿ ಖಾನ್, ಇಂತಹ ಧರ್ಮಗುರುಗಳು ಮತ್ತು ಮುಫ್ತಿಗಳು ನಿಜವಾದ ಮುಸ್ಲಿಮರಲ್ಲ ಮತ್ತು ಅವರು ಕೇವಲ ಧಾರ್ಮಿಕ ಆಧಾರದ ಮೇಲೆ ಸಮಾಜ ವಿಭಜನೆಯಲ್ಲಿ ತೊಡಗಿದ್ದಾರೆ .ಈ ಹಿಂದೆಯೂ ತಾನು ಇಂತಹ ಹಲವು ಫತ್ವಾಗಳನ್ನು ಎದುರಿಸಿದ್ದು, ಇದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT