ಸ್ಫೋಟಗೊಂಡಿರುವ ಎಟಿಎಂ 
ದೇಶ

ಸಿಸಿಟಿವಿಗೆ ಕಪ್ಪು ಬಣ್ಣ ಬಳಿದು ಎಟಿಎಂ ಸ್ಫೋಟಿಸಿದ ದರೋಡೆಕೋರರು, ಹಣ ದೋಚಿ ಪರಾರಿ

ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.

ಮುಂಬೈ: ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.

ಸ್ಫೋಟಕ್ಕೂ ಮುನ್ನ ದರೋಡೆಕೋರರು ಎಟಿಎಂ ಕ್ಯಾಬಿನ್‌ನ ಒಳಗಿದ್ದ ಭದ್ರತಾ ಸಿಸಿಟಿವಿ ಕ್ಯಾಮೆರಾಗೆ ಕಪ್ಪು ಬಣ್ಣವನ್ನು ಎರಚಿದ್ದಾರೆ.

ಕ್ಯಾಬಿನ್ ಒಳಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎರಡು ಎಟಿಎಂ ಯಂತ್ರಗಳಿದ್ದು, ಅವುಗಳಲ್ಲಿ ಒಂದು ಸ್ಫೋಟದಲ್ಲಿ ಸಂಪೂರ್ಣ ನಾಶವಾಗಿದೆ. ಯಂತ್ರದಲ್ಲಿ ಎಷ್ಟು ನಗದು ಇತ್ತು ಮತ್ತು ಕಳ್ಳರು ಎಷ್ಟು ಹಣವನ್ನು ಕದ್ದೊಯ್ದಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ.

ಹೀಗಾಗಿ, ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದಾಗ್ಯೂ, ಸ್ಫೋಟಕ್ಕೆ ಮುಂಚಿನ ದೃಶ್ಯಾವಳಿಗಳ ಪ್ರಕಾರ, ಘಟನೆಯು ಬುಧವಾರ ಮುಂಜಾನೆ 2:30 ರ ಸುಮಾರಿಗೆ ಸಂಭವಿಸಿದೆ ಎಂದು ಊಹಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ ಜಿಲ್ಲೆಯ ಕರಡ ಸಮೀಪದ ವಿದ್ಯಾನಗರದಲ್ಲಿ ಇದೇ ರೀತಿ ದರೋಡೆ ಯತ್ನ ನಡೆದಿತ್ತು. ಆದರೆ, ಸ್ಫೋಟಕ್ಕೂ ಮುನ್ನವೇ ದರೋಡೆಕೋರರನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT