ಸ್ಫೋಟಗೊಂಡಿರುವ ಎಟಿಎಂ 
ದೇಶ

ಸಿಸಿಟಿವಿಗೆ ಕಪ್ಪು ಬಣ್ಣ ಬಳಿದು ಎಟಿಎಂ ಸ್ಫೋಟಿಸಿದ ದರೋಡೆಕೋರರು, ಹಣ ದೋಚಿ ಪರಾರಿ

ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.

ಮುಂಬೈ: ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.

ಸ್ಫೋಟಕ್ಕೂ ಮುನ್ನ ದರೋಡೆಕೋರರು ಎಟಿಎಂ ಕ್ಯಾಬಿನ್‌ನ ಒಳಗಿದ್ದ ಭದ್ರತಾ ಸಿಸಿಟಿವಿ ಕ್ಯಾಮೆರಾಗೆ ಕಪ್ಪು ಬಣ್ಣವನ್ನು ಎರಚಿದ್ದಾರೆ.

ಕ್ಯಾಬಿನ್ ಒಳಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎರಡು ಎಟಿಎಂ ಯಂತ್ರಗಳಿದ್ದು, ಅವುಗಳಲ್ಲಿ ಒಂದು ಸ್ಫೋಟದಲ್ಲಿ ಸಂಪೂರ್ಣ ನಾಶವಾಗಿದೆ. ಯಂತ್ರದಲ್ಲಿ ಎಷ್ಟು ನಗದು ಇತ್ತು ಮತ್ತು ಕಳ್ಳರು ಎಷ್ಟು ಹಣವನ್ನು ಕದ್ದೊಯ್ದಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ.

ಹೀಗಾಗಿ, ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದಾಗ್ಯೂ, ಸ್ಫೋಟಕ್ಕೆ ಮುಂಚಿನ ದೃಶ್ಯಾವಳಿಗಳ ಪ್ರಕಾರ, ಘಟನೆಯು ಬುಧವಾರ ಮುಂಜಾನೆ 2:30 ರ ಸುಮಾರಿಗೆ ಸಂಭವಿಸಿದೆ ಎಂದು ಊಹಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ ಜಿಲ್ಲೆಯ ಕರಡ ಸಮೀಪದ ವಿದ್ಯಾನಗರದಲ್ಲಿ ಇದೇ ರೀತಿ ದರೋಡೆ ಯತ್ನ ನಡೆದಿತ್ತು. ಆದರೆ, ಸ್ಫೋಟಕ್ಕೂ ಮುನ್ನವೇ ದರೋಡೆಕೋರರನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT