ಪ್ರಭಾಸ್ 
ದೇಶ

ನವದೆಹಲಿ: ಈ ಬಾರಿ ಸೂಪರ್ ಸ್ಟಾರ್ ಪ್ರಭಾಸ್ ರಿಂದ ರಾವಣ ಪ್ರತಿಕೃತಿ ದಹನ

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ. ಪ್ರತಿ ವರ್ಷದಂತೆ  ಲವ ಕುಶ ರಾಮಲೀಲಾ ಸಮಿತಿಯು ಸೆಪ್ಟೆಂಬರ್ 26 ರಿಂದ ದೆಹಲಿಯಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿ ರಾವಣ ಪ್ರತಿಕೃತಿ ದಹನವನ್ನು ಆಯೋಜಿಸಲಿದೆ.  

ಈ ವರ್ಷ ಕೆಂಪು ಕೋಟೆಯ ಹುಲ್ಲುಹಾಸುಗಳಲ್ಲಿ  ಅಯೋಧ್ಯೆಯ ರಾಮಮಂದಿರ-ವಿಷಯದ ಮೇಲೆ ವೇದಿಕೆ ಮಾಡಲು ಸಮಿತಿ ಹೊರಟಿದೆ. ಅಕ್ಟೋಬರ್ 5 ರಂದು ಬರುವ ವಿಜಯದಶಮಿಯಂದು ಪ್ರಭಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲವ ಕುಶ ರಾಮಲೀಲಾ ಸಮಿತಿಯ ಮುಖ್ಯಸ್ಥ ಅರ್ಜುನ್ ಕುಮಾರ್, ಈ ವರ್ಷದ ಯೋಜನೆಗಳ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಈಗಾಗಲೇ ಮುಂಬರುವ ಆದಿಪುರುಷ ಚಿತ್ರದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಈ ಬಾರಿಯ ದಸರಾದಲ್ಲಿ ರಾವಣನ ಪ್ರತಿಕೃತಿ ದಹಿಸಲು ಅವರೇ ಉತ್ತಮರು ಎಂದರು. 

ಯಾವಾಗಲೂ ರಾವಣ, ಕುಂಭಕರ್ಣ ಮತ್ತು ಮೇಘನಾದ್ ಅವರ ಮೂರು ಪ್ರತಿಕೃತಿಗಳನ್ನು ಇಡಲಾಗುತ್ತದೆ.  ಪ್ರಭಾಸ್ ಪ್ರತಿಯೊಂದಕ್ಕೂ ತನ್ನ ಬಾಣದಿಂದ ಸುಡಲಿದ್ದಾರೆ. ಈ ವರ್ಷ ಪ್ರತಿಕೃತಿಗಳು 100 ಅಡಿ ಎತ್ತರದಲ್ಲಿರುತ್ತವೆ ಎಂದು ಅವರು ತಿಳಿಸಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT