ಮನ್ಸುಖ್ ಮಾಂಡವಿಯಾ 
ದೇಶ

ಈಗ ನೀವೂ ಟಿಬಿ ರೋಗಿಯನ್ನು ದತ್ತು ಪಡೆಯಬಹುದು; ಚಿಕಿತ್ಸೆ ನೆರವಾಗಬಹುದು: 40 ಕ್ಷಯ ರೋಗಿಗಳನ್ನು ದತ್ತು ಪಡೆದ ಮಾಂಡವಿಯಾ

ಕ್ಷಯ ರೋಗಿಗಳಿಗೆ ಸಮುದಾಯ ಬೆಂಬಲ' ಕಾರ್ಯಕ್ರಮದ ಮೂಲಕ ಕ್ಷಯ ರೋಗಿಗಳನ್ನು ದಾನಿಗಳು ದತ್ತು ಪಡೆಯಬೇಕು. ಈ ಮೂಲಕ ಪ್ರಧಾನ ಮಂತ್ರಿ ಟಿಬಿ-ಮುಕ್ತ್ ಭಾರತ್ ಅಭಿಯಾನದ ಭಾಗವಾಗಿ 'ನಿಕ್ಷಯ ಮಿತ್ರ' ಆಗಬೇಕೆಂದು...

ಬೆಂಗಳೂರು: 'ಕ್ಷಯ ರೋಗಿಗಳಿಗೆ ಸಮುದಾಯ ಬೆಂಬಲ' ಕಾರ್ಯಕ್ರಮದ ಮೂಲಕ ಕ್ಷಯ ರೋಗಿಗಳನ್ನು ದಾನಿಗಳು ದತ್ತು ಪಡೆಯಬೇಕು. ಈ ಮೂಲಕ ಪ್ರಧಾನ ಮಂತ್ರಿ ಟಿಬಿ-ಮುಕ್ತ್ ಭಾರತ್ ಅಭಿಯಾನದ ಭಾಗವಾಗಿ 'ನಿಕ್ಷಯ ಮಿತ್ರ' ಆಗಬೇಕೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಕರೆ ನೀಡಿದ್ದಾರೆ.

2025ರ ವೇಳೆಗೆ ಭಾರತ ಕ್ಷಯರೋಗ ಮುಕ್ತವಾಗುವ ಗುರಿ ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಾದ್ಯಂತದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಕಾರ್ಪೊರೇಟ್‌ಗಳು, ಎನ್‌ಜಿಒಗಳು, ಸಾರ್ವಜನಿಕ ಮತ್ತು ಚುನಾಯಿತ ಪ್ರತಿನಿಧಿಗಳು ನಿಕ್ಷಯ್ 2.0 ವೆಬ್‌ಸೈಟ್ (ಸಮುದಾಯ ಬೆಂಬಲ.nikshay.in) ಮೂಲಕ ಟಿಬಿ ರೋಗಿಯನ್ನು ಅಥವಾ ಟಿಬಿ ರೋಗಿಗಳ ಗುಂಪನ್ನು ದತ್ತು ಪಡೆದು ಅವರ ಚಿಕಿತ್ಸೆಗೆ ನೆರವಾಗಬಹುದು ಎಂದು ಹೇಳಿದ್ದರೆ.

ಆರು ತಿಂಗಳು, ಒಂದು ವರ್ಷ, ಎರಡು ಅಥವಾ ಮೂರು ವರ್ಷಗಳವರೆಗೆ ರೋಗಿಗಳನ್ನು ದತ್ತು ಪಡೆಯಬಹುದು. ದೇಶದ 13.51 ಲಕ್ಷ ಟಿಬಿ ರೋಗಿಗಳಲ್ಲಿ 9.42 ಲಕ್ಷ ಕ್ಷಯ ರೋಗಿಗಳು ದತ್ತು ಸ್ವೀಕಾರಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ʻಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ನಾನು ನನ್ನ ಜನ್ಮಸ್ಥಳ ಪಾಲಿತಾನಾದಿಂದ 40 ಕ್ಷಯರೋಗಿಗಳನ್ನು ದತ್ತು ಪಡೆದಿದ್ದೇನೆ. ನಾವೆಲ್ಲರೂ ಮೋದಿಜಿಯವರ ಈ ಮಾನವೀಯತೆಯ ಸೇವಾ ಕಾರ್ಯಕ್ಕೆ ಕೈಜೋಡಿಸೋಣ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಟಿಬಿ ಮುಕ್ತ ಭಾರತವನ್ನು ನಿರ್ಮಿಸೋಣ. ನೀವೂ ಸಹ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಿʼ ಮಾಂಡವಿಯಾ ಅವರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ