ಅಯೋಧ್ಯ ರಾಮ ಮಂದಿರದ ಪ್ರದೇಶ (ಸಂಗ್ರಹ ಚಿತ್ರ) 
ದೇಶ

ರಾಮ ಮಂದಿರದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಬೇಡಿಕೆ: ಅಯೋಧ್ಯೆಯಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿಯರ ಆಸಕ್ತಿ

ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ ಆಗಿದ್ದೇ ಆಗಿದ್ದು, ಜಿಲ್ಲೆ ಹಾಗೂ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಬೇಡಿಕೆ ಬಂದಿದೆ. 

ಲಖನೌ: ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ ಆಗಿದ್ದೇ ಆಗಿದ್ದು, ಜಿಲ್ಲೆ ಹಾಗೂ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಬೇಡಿಕೆ ಬಂದಿದೆ. 

ರಾಮ ಜನ್ಮಭೂಮಿ ಅಯೋಧ್ಯೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದು, 5-6 ದೇಶಗಳನ್ನು ಪ್ರತಿನಿಧಿಸುತ್ತಿರುವ ವಿದೇಶಿ ಹೂಡಿಕೆದಾರರ ನಿಯೋಗ ಇತ್ತೀಚೆಗಷ್ಟೇ ಉದ್ಯಮ ಸಾಧ್ಯತೆಗಳನ್ನು ಪರಿಶೀಲಿಸುವುದಕ್ಕೆ ಅಯೋಧ್ಯೆಗೆ ಭೇಟಿ ನೀಡಿತ್ತು. 12 ಸದಸ್ಯರ ನಿಯೋಗಕ್ಕೆ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ರಾಮಜನ್ಮಭೂಮಿ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ತೋರಿಸಿದ್ದು, ವಿದೇಶಿ ನಿಯೋಗ ಭಗವಾನ್ ರಾಮನ ದರ್ಶನವನ್ನೂ ಪಡೆದಿದ್ದಾರೆ. 

ಅಮೆರಿಕದ ಫ್ಯಾನ್‌ಕಾನ್ ಫೀನಿಕ್ಸ್ ಗ್ರೂಪ್‌ನ ಸಿಇಒ ಮಾಲಿ ಫಾಕ್ನರ್ ನೇತೃತ್ವದ ನಿಯೋಗದಲ್ಲಿ ಜಪಾನ್‌ನ ತಕಿತಾ ಯೋಶಿನೋರಿ, ರಿಪಬ್ಲಿಕ್ ಆಫ್ ಕೊರಿಯಾದ ಹಿಲೆನ್-ಜಂಗ್-ಹೀ, ಫ್ರಾನ್ಸಿಸ್ ಆಲಿವರ್ ಮತ್ತು ಗಯಾನಾದ ಕಂಬರ್ ಬಾಚ್, ವಿಯೆಟ್ನಾಂನ ಅಲೆಕ್ಸ್ ಆಂಡ್ರೆ, ಕ್ಯಾಲಿಫೋರ್ನಿಯಾದ ಶಾಂಡಲ್ ಪ್ಯಾಟ್ರಿಕ್, ಪೆರುವಿನ ಜೆಸ್ಸಿಕಾ ವಲ್ಕನ್, ಈಕ್ವೆಡಾರ್‌ನ ಮರಿಯಾ ಏಂಜೆಲ್ ಲಡೋರಾ ನೇತೃತ್ವದಲ್ಲಿ ಈ ನಿಯೋಗ ಅಯೋಧ್ಯೆಗೆ ಭೇಟಿ ನೀಡಿದೆ. ಅಯೋಧ್ಯೆ ದಾಟುವ ಲಖನೌ-ಗೋರಖ್ ಪುರ ಹೆದ್ದಾರಿಯ ಬಳಿ ಇರುವ ಭೂಮಿಗಳನ್ನು ಈ ನಿಯೋಗಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, 2023 ರ ಜನವರಿಯಲ್ಲಿ ಲಖನೌ ನಲ್ಲಿ ನಡೆಯಲಿರುವ ಹೂಡಿಕೆದಾರರ ಶೃಂಗಸಭೆಯಲ್ಲಿ ವಿವಿಧ ಯೋಜನೆಗಳಿಗೆ ಎಂಒಯು ಸಹಿ ಆಗುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆಯಾಗುವ ಸಾಧ್ಯತೆ ಇದೆ, ಇದಕ್ಕಾಗಿ ವಿದೇಶಿ ಹೂಡಿಕೆದಾರರಿಗೆ ಅಯೋಧ್ಯೆ ಹಾಗೂ ರಾಜ್ಯದ ಇತರ ನಗರಗಳನ್ನು ಪರಿಚಯಿಸಲಾಗುತ್ತಿದೆ. 

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ, ನಿಯೋಗದ ಸದಸ್ಯರು ಥೀಮ್ ಪಾರ್ಕ್, ಲೈಟ್ ಶೋ, ರೆಸಾರ್ಟ್ ನಿರ್ಮಾಣ, ವೆಲ್ ನೆಸ್ ಕೇಂದ್ರಗಳು, ನವೀಕರಿಸಬಹುದಾದ ಶಕ್ತಿ, ಕೌಶಲ್ಯ ಅಭಿವೃದ್ಧಿ ಕೇಂದ್ರಗಳು, ಎಫ್ಎಂಜಿಸಿ, ಫಿಲ್ಮ್ ಮೀಡಿಯಾ ಸೇರಿದಂತೆ ಹಲವು ಯೋಜನೆಗಳತ್ತ ಆಸಕ್ತಿ ತೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT