ಸಿನಿಮಾ ಪೋಸ್ಟರ್ 
ದೇಶ

33 ವರ್ಷಗಳ ನಂತರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮತ್ತೆ ಕಾಣಿಸಿಕೊಂಡ ಸಿನಿಮಾ ಪೋಸ್ಟರ್‌ಗಳು!

ಯಾವುದೇ ಒಂದು ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪೋಸ್ಟರ್ ಗಳನ್ನು ಪ್ರಮುಖ ಜಾಗಗಳ ರಸ್ತೆ ಪಕ್ಕದ ಗೋಡೆಗಳ ಮೇಲೆ ಅಂಟಿಸಲಾಗುತ್ತದೆ. ಈ ಮೂಲಕ ಜನರನ್ನು ಗಮನವನ್ನು ಸೆಳೆಯುವುದು ಚಿತ್ರತಂಡದ ಉದ್ದೇಶ. ದೇಶಾದ್ಯಂತ ಇಂತಹ ಸಿನಿಮಾ ಪೋಸ್ಟರ್ ಗಳನ್ನು ಕಾಣಬಹುದು. ಆದರೆ ಇದು ಶ್ರೀನಗರಕ್ಕೆ ಹೊಸದಾಗಿದೆ.

ಶ್ರೀನಗರ: ಯಾವುದೇ ಒಂದು ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪೋಸ್ಟರ್ ಗಳನ್ನು ಪ್ರಮುಖ ಜಾಗಗಳ ರಸ್ತೆ ಪಕ್ಕದ ಗೋಡೆಗಳ ಮೇಲೆ ಅಂಟಿಸಲಾಗುತ್ತದೆ. ಈ ಮೂಲಕ ಜನರನ್ನು ಗಮನವನ್ನು ಸೆಳೆಯುವುದು ಚಿತ್ರತಂಡದ ಉದ್ದೇಶ. ದೇಶಾದ್ಯಂತ ಇಂತಹ ಸಿನಿಮಾ ಪೋಸ್ಟರ್ ಗಳನ್ನು ಕಾಣಬಹುದು. ಆದರೆ ಇದು ಶ್ರೀನಗರಕ್ಕೆ ಹೊಸದಾಗಿದೆ. 

1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಉಗ್ರಗಾಮಿಗಳ ಏಕಾಏಕಿ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪೋಸ್ಟರ್ ಸಂಸ್ಕೃತಿ ಕಡಿಮೆಯಾಗಿತ್ತು. ಹಿಂದಿ ಸಿನಿಮಾ ಭೋಲಾದೊಂದಿಗೆ ಪೋಸ್ಟರ್ ಸಂಸ್ಕೃತಿಯು ಇಲ್ಲಿ ಪುನರಾವರ್ತನೆಯಾಗಿದೆ. ದಾಲ್ ಸರೋವರದ ಬೌಲೆವಾರ್ಡ್ ರಸ್ತೆಯಲ್ಲಿ, ಪ್ರವಾಸಿ ಸ್ವಾಗತ ಕೇಂದ್ರದ ಬಳಿ ಮತ್ತು ಶ್ರೀನಗರದ ಅಪ್‌ಟೌನ್‌ನಲ್ಲಿರುವ ಇತರ ಪ್ರದೇಶಗಳಲ್ಲಿ ಪೋಸ್ಟರ್ ಗಳನ್ನು ಕಾಣಬಹುದು. 

ಬೌಲೆವಾರ್ಡ್ ರಸ್ತೆಯು ಪ್ರವಾಸಿ ಚಟುವಟಿಕೆಯ ತಾಣ. ಕಳೆದ ಸೆಪ್ಟೆಂಬರ್‌ನಲ್ಲಿ ತೆರೆಕಂಡ INOX ಮಲ್ಟಿಪ್ಲೆಕ್ಸ್‌ನಲ್ಲಿ ಭೋಲಾ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, 33 ವರ್ಷಗಳ ನಂತರ ಮತ್ತೆ ಕಾಶ್ಮೀರದಲ್ಲಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಜಾವೇದ್ ಅಹ್ಮದ್, ಕಾಶ್ಮೀರದಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ನೋಡಿದ್ದು ಜೀವನದಲ್ಲಿ ಮೊದಲ ಬಾರಿಗೆ ಎಂದಿದ್ದಾರೆ. 'ನಾನು ದೊಡ್ಡ ಸಿನಿಮಾ ಪ್ರೇಮಿಯಲ್ಲದಿದ್ದರೂ, ಈ ಪೋಸ್ಟರ್ ಗಳು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಲನಚಿತ್ರಗಳಿಗೆ ತೆರಳಲು ಜನರಿಗೆ ಸಹಾಯವಾಗುತ್ತದೆ. ಇದು ಪ್ರವಾಸಿಗರನ್ನೂ ಸೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕರಾದ ಅಬ್ದುಲ್ ಅಜೀಜ್ ಅವರು 33 ವರ್ಷಗಳ ನಂತರ ಪೋಸ್ಟರ್‌ಗಳು ಮತ್ತೆ ಕಾಣಿಸಿಕೊಂಡ ಬಗ್ಗೆ ಖುಷಿಪಟ್ಟರು. 'ಉಗ್ರವಾದ ಸ್ಫೋಟಗೊಳ್ಳುವ ಮೊದಲು, ನಟರ ದೊಡ್ಡ ಚಲನಚಿತ್ರ ಪೋಸ್ಟರ್‌ಗಳನ್ನು ಗೋಡೆಗಳಿಗೆ ಅಂಟಿಸುತ್ತಿದದ್ದನ್ನು ನೆನಪಿಸಿಕೊಂಡರು.

ಕಾಶ್ಮೀರಿ ಪಂಡಿತ್ ವಿಜಯ್ ಧರ್ ಒಡೆತನದ INOX ಮಲ್ಟಿಪ್ಲೆಕ್ಸ್, 522 ಆಸನ ಸಾಮರ್ಥ್ಯದೊಂದಿಗೆ ಮೂರು ಚಲನಚಿತ್ರ ಮಂದಿರಗಳನ್ನು ಹೊಂದಿದೆ. ಇದು ಅಪ್ಟೌನ್ ಶ್ರೀನಗರದ ಶಿವಪೋರಾ ಪ್ರದೇಶದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT