ತ್ರಿವರ್ಣ ಧ್ವಜ 
ದೇಶ

ಶೇ. 95ರಷ್ಟು ಭಾರತೀಯರಿಗೆ ʻತ್ರಿವರ್ಣ ಧ್ವಜʼದ ಬಗ್ಗೆ ಸರಿಯಾದ ಜ್ಞಾನವಿಲ್ಲ: ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ

ಭಾರತದ ಶೇ. 95ರಷ್ಟು ಮಂದಿಗೆ ರಾಷ್ಟ್ರಧ್ವಜದ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ ಎಂದು ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ ಹೇಳಿದೆ.

ಗುವಾಹತಿ: ಭಾರತದ ಶೇ. 95ರಷ್ಟು ಮಂದಿಗೆ ರಾಷ್ಟ್ರಧ್ವಜದ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ ಎಂದು ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ ಹೇಳಿದೆ.

ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾದ ಸಿಇಒ ಮೇಜರ್ ಜನರಲ್ (ನಿವೃತ್ತ) ಆಶಿಮ್ ಕೊಹ್ಲಿ ಈ ಬಗ್ಗೆ ಮಾತನಾಡಿದ್ದು, 'ಭಾರತದಲ್ಲಿ 95 ಪ್ರತಿಶತ ಜನರಿಗೆ ತ್ರಿವರ್ಣ ಧ್ವಜದ ಬಗ್ಗೆ ಸರಿಯಾದ ಜ್ಞಾನವಿಲ್ಲ ಎಂದು ನಾನು ಹೇಳುತ್ತೇನೆ. ಇದನ್ನು ಹಗಲು ಅಥವಾ ರಾತ್ರಿ ಹಾರಿಸಬಹುದೇ ಮತ್ತು ಅದನ್ನು ಖಾದಿ ಅಥವಾ ಹತ್ತಿಯಿಂದ ಮಾಡಬೇಕೇ ಎಂಬ ಬಗ್ಗೆ ಅವರಿಗೆ ಜ್ಞಾನವಿಲ್ಲ ಎಂದು ಹೇಳಿದ್ದಾರೆ.

ದೆಹಲಿ ಮೂಲದ ಎನ್‌ಜಿಒ ಸಂಸ್ಥೆ ಗುವಾಹಟಿಯಲ್ಲಿರುವ ಸೇನೆಯ ನರೇಂಗಿ ಮಿಲಿಟರಿ ಠಾಣೆಯಲ್ಲಿ ತನ್ನ 107ನೇ 'ಸ್ಮರಣಾರ್ಥ ಧ್ವಜ'ವನ್ನು ಸ್ಥಾಪಿಸಿದೆ. ಪ್ರತಿಷ್ಠಾನವು ತ್ರಿವರ್ಣ ಧ್ವಜದ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತದೆ ಮತ್ತು ಅದನ್ನು ಹಾರಿಸಲು ಪ್ರೇರೇಪಿಸುತ್ತದೆ. ಧ್ವಜವನ್ನು ಹತ್ತಿ, ಖಾದಿ, ರೇಷ್ಮೆ ಮತ್ತು ಪಾಲಿಯೆಸ್ಟರ್‌ನಿಂದ ಮಾಡಬಹುದಾಗಿದ್ದು, 3:2 ಅನುಪಾತದಲ್ಲಿರಬೇಕು ಎಂದು ಪ್ರತಿಷ್ಠಾನದ ಸಿಇಒ ಹೇಳಿದರು.

ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯ ಕೊನೆಯಲ್ಲಿ ನಾನು ಧ್ವಜವನ್ನು ಕೆಳಗಿಳಿಸಿದ್ದೇನೆ ಎಂದು ಕೆಲವು 'ಶಿಕ್ಷಿತ ಮತ್ತು ಹಿರಿಯ' ಜನರು ಹೇಳಿದಾಗ ನನಗೆ ನೋವಾಗಿದೆ. ಸರಕಾರದ ಆದೇಶ ಸ್ಪಷ್ಟವಾಗಿದೆ. ವರ್ಷದ 365 ದಿನವೂ ಅದನ್ನು ಎತ್ತಿ ಧ್ವಜವನ್ನು ಹಾರಿಸುವುದು ನಿಮ್ಮ ಹಕ್ಕು' ಎಂದು ಮೇಜರ್ ಜನರಲ್ ಕೊಹ್ಲಿ ಹೇಳಿದ್ದಾರೆ.

'ಅಮೆರಿಕಕ್ಕೆ ಹೋಗು ಎಂದು ನಾವು ಹೇಳುತ್ತೇವೆ, ಎಲ್ಲೆಂದರಲ್ಲಿ ದೇಶದ ಧ್ವಜ ಹಾರಾಡುವುದನ್ನು ನೀವು ಅದ್ಭುತವಾಗಿ ಕಾಣುತ್ತೀರಿ, ಭಾರತದಲ್ಲಿ ಯಾಕೆ ಹೀಗಿಲ್ಲ? ಒಂದೇ ಕಾರಣವೆಂದರೆ ಸರಿಯಾದ ಮಾಹಿತಿ ಯಾವುದೇ ಮಾರ್ಗದಿಂದ ಜನರಿಗೆ ತಲುಪುತ್ತಿಲ್ಲ.' ಎಂದು ಹೇಳಿದ್ದಾರೆ.

1980 ರ ಸೊಸೈಟೀಸ್ ನೋಂದಣಿ ಕಾಯಿದೆ ಅಡಿಯಲ್ಲಿ ನೋಂದಾಯಿಸಲಾದ ಫೌಂಡೇಶನ್, CSR (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಧಿಯಿಂದ ನಡೆಸಲ್ಪಡುತ್ತದೆ. ಮೊದಲು, ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯಿದೆ 1971 ರ ಪ್ರಕಾರ ಭಾರತೀಯರು ಲ್ಯಾಪಲ್ ಪಿನ್ ಅಥವಾ ತ್ರಿವರ್ಣದ ಬ್ಯಾಡ್ಜ್ ಅನ್ನು ಧರಿಸಲು ಅನುಮತಿಸಲಿಲ್ಲ. ಕಾಯಿದೆಯ ತಿದ್ದುಪಡಿಯ ನಂತರ, ಈಗ ಅದನ್ನು ಸೊಂಟದ ಮೇಲೆ ಧರಿಸಬಹುದು ಆದರೆ ಅದನ್ನು ಗೌರವಯುತವಾಗಿ ಧರಿಸಬೇಕು" ಎಂದು ಮೇಜರ್ ಜನರಲ್ ಕೊಹ್ಲಿ ಹೇಳಿದರು, "ನೀವು ಮನೆಯಲ್ಲಿ ದೇವರ ವಿಗ್ರಹಕ್ಕೆ ನೀಡುವ ಗೌರವವನ್ನು ನೀವು ಧ್ವಜಕ್ಕೆ ನೀಡಬೇಕು. ಅದು ಸಾಮಾನ್ಯ ತತ್ವ ಎಂದು ಕೊಹ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

ಚುನಾವಣೆಗೂ ಮುನ್ನ ಯೋಗಿ ಸರ್ಕಾರದಲ್ಲಿ ಮಹತ್ತರ ಬದಲಾವಣೆ: ಸಂಪುಟ ಪುನಾರಚನೆ; 6 ಹೊಸ ಸಚಿವರ ಸೇರ್ಪಡೆ

ಅತ್ತ ವಿಜಯ್ ಪದಗ್ರಹಣ, ಇತ್ತ ಚಂದ್ರಬಾಬು ನಾಯ್ಡು, Pawan Kalyan ಮನೆಗೆ ಪ್ರಧಾನಿ ಮೋದಿ ದಿಢೀರ್ ಭೇಟಿ: ರಾಜಕೀಯ ವಲಯದಲ್ಲಿ ಸಂಚಲನ!

IPL 2026: ನಿರ್ಣಾಯಕ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದ CSK; ಪ್ಲೇ ಆಫ್ ಕನಸು ಜೀವಂತ!

IPL 2026, RCB vs MI: MS Dhoni ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ

SCROLL FOR NEXT