ದೇಶ

ಎನ್‌ಸಿಪಿ ಶಾಸಕರೊಂದಿಗೆ ಅಜಿತ್ ಪವಾರ್ ಬಿಜೆಪಿ ಸೇರಿದರೆ ನಾವು ಸರ್ಕಾರದ ಭಾಗವಾಗುವುದಿಲ್ಲ: ಶಿವಸೇನೆ ವಾರ್ನಿಂಗ್

Vishwanath S

ಮುಂಬೈ: ಎನ್‌ಸಿಪಿ ಶಾಸಕರೊಂದಿಗೆ ಅಜಿತ್ ಪವಾರ್ ಬಿಜೆಪಿ ಸೇರಿದರೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರದ ಭಾಗವಾಗುವುದಿಲ್ಲ ಎಂದು ಶಿವಸೇನೆ ವಕ್ತಾರ ಸಂಜಯ್ ಶಿರ್ಸಾತ್ ಹೇಳಿದ್ದಾರೆ.

ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಜಯ್ ಶಿರ್ಸಾತ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಬಿಜೆಪಿಯೊಂದಿಗೆ ನೇರವಾಗಿ ಹೋಗುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಈ ಬಗ್ಗೆ ನಮ್ಮ ನೀತಿ ಸ್ಪಷ್ಟವಾಗಿದೆ. ಎನ್‌ಸಿಪಿ ದ್ರೋಹ ಮಾಡುವ ಪಕ್ಷ. ನಾವು ಅಧಿಕಾರದಲ್ಲಿದ್ದರೂ ಎನ್‌ಸಿಪಿ ಜೊತೆ ಇರುವುದಿಲ್ಲ. ಬಿಜೆಪಿ ತನ್ನೊಂದಿಗೆ ಎನ್‌ಸಿಪಿಯನ್ನು ತೆಗೆದುಕೊಂಡರೆ ಮಹಾರಾಷ್ಟ್ರಕ್ಕೆ ಅದು ಇಷ್ಟವಾಗುವುದಿಲ್ಲ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಹೋಗುವುದನ್ನು ಜನರು ಇಷ್ಟಪಟ್ಟಿಲ್ಲ ಎಂದು ಅವರು ಹೇಳಿದರು.

ಅಜಿತ್ ಪವಾರ್ ಏನನ್ನೂ ಹೇಳಿಲ್ಲ ಎಂದರೆ ಅವರು ಎನ್‌ಸಿಪಿಯಲ್ಲಿ ಇರಲು ಬಯಸುತ್ತಿಲ್ಲ ಎಂದು ಸಂಜಯ್ ಶಿರ್ಸಾತ್ ಹೇಳಿದ್ದಾರೆ. ನಾವು ಕಾಂಗ್ರೆಸ್-ಎನ್‌ಸಿಪಿ ಜೊತೆ ಇರಲು ಬಯಸದ ಕಾರಣ ನಾವು ತೊರೆದಿದ್ದೇವೆ. ಅಲ್ಲಿ ಅಜಿತ್‌ ಪವಾರ್‌ಗೆ ಸ್ವತಂತ್ರವಿಲ್ಲ. ಹಾಗಾಗಿ ಅವರು ಎನ್‌ಸಿಪಿ ತೊರೆದರೆ ಸ್ವಾಗತಿಸುತ್ತೇವೆ. ಅವರು ಎನ್‌ಸಿಪಿ (ನಾಯಕರು) ಗುಂಪಿನೊಂದಿಗೆ ಬಂದರೆ, ನಾವು ಸರ್ಕಾರದಲ್ಲಿ ಇರುವುದಿಲ್ಲ ಎಂದು ಹೇಳಿದರು.

ಅಜಿತ್ ಪವಾರ್ ಅವರ ಅಸಮಾಧಾನಕ್ಕೆ ಕಾರಣ ಅವರ ಪುತ್ರ ಪಾರ್ಥ್ ಪವಾರ್ ಈ ಹಿಂದೆ ಚುನಾವಣೆಯಲ್ಲಿ ಸೋತಿರುವುದು. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಶಿವಸೇನೆಯ 16 ಶಾಸಕರ ಅನರ್ಹತೆ ಅರ್ಜಿಯ ವಿಷಯಕ್ಕೂ ಅವರ ಅಸಮಾಧಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ವಕ್ತಾರರಾಗಿ ಶಿರ್ಸತ್ ಅವರನ್ನು ಇತ್ತೀಚೆಗೆ ನೇಮಿಸಲಾಗಿತ್ತು. 

ಅಜಿತ್ ಪವಾರ್ ಅವರೊಂದಿಗೆ ಸಂಪರ್ಕದಲ್ಲಿರದೇ ಇರುವುದು ಹೊಸ ವಿಷಯವೇನಲ್ಲ, ಆದರೆ ಮಾಧ್ಯಮಗಳು ತೋರಿಸುತ್ತಿರುವ ಅವರ ಅಸಮಾಧಾನಕ್ಕೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ನಮ್ಮ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಿರ್ಸತ್ ಹೇಳಿದರು. ತಮ್ಮ ಪುತ್ರ ಪಾರ್ಥ್ ಪವಾರ್ ಚುನಾವಣೆಯಲ್ಲಿ ಸೋತಿದ್ದರಿಂದ ಅಜಿತ್ ಪವಾರ್ ಅಸಮಾಧಾನಗೊಂಡಿದ್ದಾರೆ ಎಂದರು. 

2019ರ ನವೆಂಬರ್ ನಲ್ಲಿ ಅವರು ದೇವೇಂದ್ರ ಫಡ್ನವಿಸ್ ಅವರೊಂದಿಗೆ ರಹಸ್ಯವಾಗಿ ಸರ್ಕಾರ ರಚಿಸುವ ಯತ್ನ ಮಾಡಿದ್ದರು. ಅಜಿತ್ ಪವಾರ್ ದೊಡ್ಡ ನಾಯಕರಾಗಿದ್ದು, ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ಸುಲಭವಾಗಿ ಹೇಳುವುದಿಲ್ಲ ಎಂದು ಶಿರ್ಸತ್ ಹೇಳಿದರು.

SCROLL FOR NEXT