ಸಭಾಪತಿ ಜಗದೀಪ್ ಧನಕರ್, ಮಲ್ಲಿಕಾರ್ಜುನ ಖರ್ಗೆ 
ದೇಶ

'ನನಗೆ ಮದುವೆಯಾಗಿ 45 ವರ್ಷಗಳಾಗಿವೆ, ಎಂದಿಗೂ ಕೋಪಗೊಂಡಿಲ್ಲ': ಸ್ವಾರಸ್ಯಕರ ಚರ್ಚೆಗೆ ಕಾರಣವಾದ ಸಭಾಪತಿ!

ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನ ವಿಪಕ್ಷಗಳ ಪ್ರತಿಭಟನೆ, ಪದೇ ಪದೇ ಅಡ್ಡಿಪಡಿಸುವುದು, ಕೋಲಾಹಲದಿಂದಾಗಿ ಇಲ್ಲಿಯವರೆಗೂ ಸರಿಯಾಗಿ ಕಲಾಪ ನಡೆಯದೇ ಮುಂದೂಡಲಾಗುತ್ತಿದೆ.ಈ ಮಧ್ಯೆ ಇಂದು ರಾಜ್ಯಸಭೆ ಸ್ವಾರಸ್ಯಕರ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು.

ನವದೆಹಲಿ: ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನ ವಿಪಕ್ಷಗಳ ಪ್ರತಿಭಟನೆ, ಪದೇ ಪದೇ ಅಡ್ಡಿಪಡಿಸುವುದು, ಕೋಲಾಹಲದಿಂದಾಗಿ ಇಲ್ಲಿಯವರೆಗೂ ಸರಿಯಾಗಿ ಕಲಾಪ ನಡೆಯದೇ ಮುಂದೂಡಲಾಗುತ್ತಿದೆ.ಈ ಮಧ್ಯೆ ಇಂದು ರಾಜ್ಯಸಭೆ ಸ್ವಾರಸ್ಯಕರ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು.

ನಿನ್ನೆ ಸಭಾಪತಿಯನ್ನು ಭೇಟಿಯಾದಾಗ ಸ್ವಲ್ಪ ಕೋಪಗೊಂಡಿದ್ದರು ಎಂಬ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಕ್ಕೆ ಸಭಾಪತಿ ಜಗದೀಪ್ ಧನಕರ್ ಹಾಸ್ಯ ಚಟಾಕಿ ಉತ್ತರದ ಮೂಲಕ ಸದನ ನಗೆ ಗಡಲಲ್ಲಿ ತೇಲುವಂತೆ ಮಾಡಿದರು. 

ಖರ್ಗೆಯವರಿಗೆ ಉತ್ತರಿಸಿದ ಸಭಾಪತಿ" ನನಗೆ ಮದುವೆಯಾಗಿ 45 ವರ್ಷ ಆಗಿದೆ. ನನ್ನನ್ನು ನಂಬಿರಿ, ಸಾರ್, ನಾನು ಎಂದಿಗೂ ಕೋಪಗೊಳ್ಳುವುದಿಲ್ಲ. ಚಿದಂಬರಂ ಹಿರಿಯ ವಕೀಲರು, ಹಿರಿಯ ವಕೀಲರು ಎಂಬುದು ತಿಳಿಯುತ್ತದೆ. ನಾವು ಕೋಪ ಮಾಡಿಕೊಳ್ಳುವ ಹಕ್ಕನ್ನು ಹೊಂದಿಲ್ಲ. ನಿಮಗೆ ಆಡಳಿತಾತ್ಮಕ ಹಕ್ಕಿದೆ ಸರ್, ಎಂದಿಗೂ ನಾನು ಕೋಪಗೊಳ್ಳುವುದಿಲ್ಲ, ದಯವಿಟ್ಟು ನಿಮ್ಮ ಹೇಳಿಕೆಯನ್ನು ಮಾರ್ಪಡಿಸಿಕೊಳ್ಳಿ ಎಂದರು. 

ಧನಕರ್ ಅವರ ಹಾಸ್ಯಭರಿತ ಉತ್ತರಕ್ಕೆ ಸದಸ್ಯರೆಲ್ಲರೂ ನಗುವಿನಲ್ಲಿ ತೇಲಾಡಿದರು. ಕೂಡಲೇ ಪ್ರತಿಕ್ರಿಯಿಸಿದ ಖರ್ಗೆ, ನಿಮ್ಮ ಕೋಪವನ್ನು ತೋರಿಸುವುದಿಲ್ಲ, ಆದರೆ, ಕೋಪ ಒಳಗೆ ಇರುತ್ತದೆ ಎಂದರು. ಖರ್ಗೆ ಅವರ ಉತ್ತರಕ್ಕೆ ನಗುತ್ತಾ, ತಮ್ಮ ಪತ್ನಿಯನ್ನು ಉಲ್ಲೇಖಿಸಿದ ಸಭಾಪತಿ, ಅವರು ಈ ಸದನದ ಸದಸ್ಯರಲ್ಲ. ಈ ಸಂಬಂಧ ಸದನದ ಸದಸ್ಯರಲ್ಲದವರ ಬಗ್ಗೆ ನಾವು ಚರ್ಚಿಸಲು ಸಾಧ್ಯವಿಲ್ಲ. ಇಲ್ಲದಿದ್ದರೆ ನಾವು ಚರ್ಚಿಸಬಹುದು ಎಂದು ಹೇಳಿದರು.

ನಂತರ ಮಣಿಪುರ ಸಮಸ್ಯೆ ಕುರಿತು ಸಂಸತ್ತಿನಲ್ಲಿ ನಿಯಮ 267ರ ಅಡಿಯಲ್ಲಿ ಚರ್ಚಿಸಬೇಕೆಂಬ ಬೇಡಿಕೆಯ ಕುರಿತು ಸಭಾಪತಿಯವರ ಮೇಲೆ ಕೋಪ ವ್ಯಕ್ತಪಡಿಸಿದ ಖರ್ಗೆ, ಈ ನಿಯಮದಡಿ ಚರ್ಚೆಗೆ ಒಪ್ಪದ ಸರ್ಕಾರ ಯಾಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT