ಬೆಂಕಿ (ಸಾಂಕೇತಿಕ ಚಿತ್ರ) 
ದೇಶ

ಗುರುಗ್ರಾಮದಲ್ಲಿ ಮಾಜಾರ್ ಗೆ ಬೆಂಕಿ, ಸ್ಥಳದಲ್ಲಿದ್ದ ಹಿಂದೂ ಉಸ್ತುವಾರಿಯಿಂದ ಎಫ್ಐಆರ್

ಗುರುಗ್ರಾಮದಲ್ಲಿರುವ ಮಾಜಾರ್ ಒಂದಕ್ಕೆ ಸೋಮವಾರ ಬೆಳಿಗ್ಗೆ ಅನಾಮಿಕ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ. 

ಗುರುಗ್ರಾಮ: ಗುರುಗ್ರಾಮದಲ್ಲಿರುವ ಮಾಜಾರ್ ಒಂದಕ್ಕೆ ಸೋಮವಾರ ಬೆಳಿಗ್ಗೆ ಅನಾಮಿಕ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ. 

ಸ್ಥಳದ ಉಸ್ತುವಾರಿಯಾಗಿದ್ದ ಘಾಸಿತೆ ರಾಮ್, ಈ ಬಗ್ಗೆ ಮಾತನಾಡಿದ್ದು,  ಖಂಡ್ಸಾ ಗ್ರಾಮದಲ್ಲಿನ ಮಾಜಾರ್ ನಲ್ಲಿ ತಾನು ಭಾನುವಾರ ರಾತ್ರಿ 8:30 ಕ್ಕೆ ಮನೆಗೆ ಹೊರಡುವಾಗ ಎಲ್ಲವೂ ಸಹಜವಾಗಿತ್ತು.  ಘಾಸಿತೆ ರಾಮ್ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ನಿವಾಸಿಯಾಗಿದ್ದಾನೆ. 

ಮಧ್ಯರಾತ್ರಿ 1:30 ವೇಳೆಗೆ ಮಾಜಾರ್ ಬಳಿ ವಾಸಿಸುವ ವ್ಯಕ್ತಿಯೋರ್ವರು ಕರೆ ಮಾಡಿ, ಗುರುತು ಹಿಡಿಯಲಾಗದ ವ್ಯಕ್ತಿಗಳು ಮಜಾರ್ ಗೆ ಬೆಂಕಿ ಹಾಕಿದ್ದಾರೆ ಎಂಬ ಮಾಹಿತಿ ನೀಡಿದರು. ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ಘಾಸಿತೆ ರಾಮ್ ತಿಳಿಸಿದ್ದಾರೆ.

ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ತಹಬದಿಗೆ ತರಲು ಸಾಧ್ಯವಾಯಿತು ಎಂದು ಘಾಸಿತೆ ರಾಮ್ ಮಾಹಿತಿ ನೀಡಿದ್ದಾರೆ. "ನಾನು ಅಲ್ಲಿಗೆ ಹೋಗಿ ನೋಡಿದಾಗ, ಮಜಾರ್‌ನ ಬಾಗಿಲಿನೊಳಗೆ ಇಟ್ಟಿದ್ದ ಕಾಣಿಕೆಗಳು ಸುಟ್ಟುಹೋಗಿವೆ. ಈ ಘಟನೆಯಿಂದಾಗಿ ಜನರ ನಂಬಿಕೆಗಳಿಗೆ ಘಾಸಿ ಉಂಟಾಗಿದ್ದು, ಸಮಾಜದಲ್ಲಿ ಗಲಭೆಗೆ ಕಾರಣವಾಗಬಹುದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದು ಪೀರ್ ಬಾಬಾರ ದಶಕಗಳ ಹಿಂದಿನ ಮಾಜರ್ ಆಗಿದ್ದು, ಗ್ರಾಮಸ್ಥರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವ ಪದ್ಧತಿ ಹೊಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT