ಸಂಜಯ್ ರಾವುತ್ 
ದೇಶ

ಶರದ್ ಪವಾರ್ ಬಿಜೆಪಿ ಜೊತೆ ಕೈಜೋಡಿಸಿ ತಪ್ಪು ಮಾಡುವುದಿಲ್ಲ: ಸಂಜಯ್ ರಾವುತ್

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ಅಳಿಯ ಅಜಿತ್ ಪವಾರ್‌ ಅವರಂತೆ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಕೈಜೋಡಿಸುವ 'ತಪ್ಪು' ಮಾಡುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.

ಮುಂಬೈ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ಅಳಿಯ ಅಜಿತ್ ಪವಾರ್‌ ಅವರಂತೆ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಕೈಜೋಡಿಸುವ 'ತಪ್ಪು' ಮಾಡುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.

ಎನ್‌ಸಿಪಿ ನಾಯಕ ಅಜಿತ್ ಪವಾರ್ ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ-ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇರ್ಪಡೆಗೊಂಡರು. ಇವರೊಂದಿಗೆ ಇತರ ಎಂಟು ಎನ್‌ಸಿಪಿ ಶಾಸಕರು ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶರದ್ ಪವಾರ್ ಅವರ ಪಕ್ಷ ಎನ್‌ಸಿಪಿಯು ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಜೊತೆಗೆ ರಾಜ್ಯದಲ್ಲಿ ವಿರೋಧ ಪಕ್ಷವಾದ 'ಮಹಾ ವಿಕಾಸ್ ಅಘಾಡಿ'ಯ ಒಂದು ಘಟಕವಾಗಿದೆ.

'ಅಜಿತ್ ಪವಾರ್ ಅವರು ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಅವರು ನಿಜವಾಗಿಯೂ ದೊಡ್ಡ ನಾಯಕರಾಗಿ ಹೊರಹೊಮ್ಮಬಹುದು. ಏಕನಾಥ್ ಶಿಂಧೆ ಮಾಡಿದಂತೆ ಬಿಜೆಪಿ ನೆರವಿನಿಂದ ಏನಾದರೂ ಮಾಡಿದರೆ ಅಜಿತ್ ಪವಾರ್ ಅವರ ರಾಜಕೀಯ ಮರಳು ಕೋಟೆಯಂತೆ ಕುಸಿಯುತ್ತದೆ. ರಾಜಕೀಯದಲ್ಲಿ ಎತ್ತರಕ್ಕೇರುವುದು ಮುಖ್ಯವೇ ಹೊರತು ಮರಳು ಕೋಟೆಗಳಲ್ಲ' ಎಂದು ರಾವುತ್ ಶಿವ ಸೇನೆಯ (ಯುಬಿಟಿ) ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣದಲ್ಲಿ ಬರೆದಿದ್ದಾರೆ.

ಅಜಿತ್ ಪವಾರ್ ಅವರು ತಮ್ಮ ಸೋದರಮಾವನಿಂದ ರಾಜಕೀಯವಾಗಿ ಬೆಳೆದಿದ್ದಾರೆ ಮತ್ತು ಈಗ ಅವರ (ಶರದ್ ಪವಾರ್) ರಾಜಕೀಯ ಜೀವನವನ್ನು ಮುಗಿಸಲು ಕೆಲಸ ಮಾಡುತ್ತಿದ್ದಾರೆ ಎಂದು ರಾವುತ್ ಆರೋಪಿಸಿದ್ದಾರೆ.

ಅಜಿತ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಶರದ್ ಪವಾರ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೃಢವಾದ ನಿಲುವು ತೆಗೆದುಕೊಂಡಿದ್ದಾರೆ.

'ನರೇಂದ್ರ ಮೋದಿಯನ್ನು ಬೆಂಬಲಿಸುವುದು ಪ್ರತಿಗಾಮಿ ಶಕ್ತಿಗಳನ್ನು ಬೆಂಬಲಿಸಿದಂತೆ ಮತ್ತು ತಮ್ಮ ಪಕ್ಷವನ್ನು (ಎನ್‌ಸಿಪಿ) ತೊರೆದವರು ತಮ್ಮ ರಾಜಕೀಯ ವೃತ್ತಿಜೀವನವನ್ನು ಭವಿಷ್ಯದಲ್ಲಿ ಕೊನೆಗೊಳಿಸುತ್ತಾರೆ ಎಂದು ಶರದ್ ಪವಾರ್ ಭಾವಿಸುತ್ತಾರೆ. ಹೀಗಾಗಿ, ಅವರು ಬಿಜೆಪಿ ಜೊತೆ ಕೈ ಜೋಡಿಸುವ ತಪ್ಪು ಮಾಡುವುದಿಲ್ಲ. ವಿವಾದವು ಯಾವುದೇ ವ್ಯಕ್ತಿಗಳ ಬಗೆಗೆ ಅಲ್ಲ, ಆದರೆ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ಬಗ್ಗೆ' ಎಂದು ಅವರು ಪ್ರತಿಪಾದಿಸಿದರು.

ಕೃಷಿ, ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹಲವಾರು ಸಂಸ್ಥೆಗಳ ಮುಖ್ಯಸ್ಥರಾಗಿರುವ ಶರದ್ ಪವಾರ್ ಅವರು ತಮ್ಮ ಸೋದರಳಿಯನಿಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದರಿಂದ ಅಜಿತ್ ಮತ್ತು ಶರದ್ ಅವರ ನಡುವಿನ ಸಭೆ (ಆಗಸ್ಟ್ 5 ರಂದು) ರಾಜಕೀಯವಾಗಿರದೆ ಇರಬಹುದು. ಸಭೆಯು ಈ ಸಂಸ್ಥೆಗಳ ಭವಿಷ್ಯವನ್ನು ನಿರ್ಧರಿಸಬಹುದು ಎಂದು ರಾವುತ್ ಹೇಳಿದ್ದಾರೆ.

ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕುರ್ಚಿಗೆ 'ರಂಧ್ರ ಕೊರೆಯುವ' 'ಮರಕುಟಿಕ ಹಕ್ಕಿಗೆ' ಹೋಲಿಸಿದ ರಾವುತ್, ದೇವೇಂದ್ರ ಫಡ್ನವಿಸ್ ಅವರು ಈ ಪಕ್ಷಿಗೆ ಬಲ ನೀಡುವುದು ಖಚಿತ ಎಂದು ಹೇಳಿದ್ದಾರೆ.

'ಅಜಿತ್ ಪವಾರ್ ಮುಖ್ಯಮಂತ್ರಿಯಾಗಲು ಬಯಸುತ್ತಾರೆ ಮತ್ತು ಫಡ್ನವಿಸ್ ಅವರನ್ನು ಬೆಂಬಲಿಸುವ ಬಿಜೆಪಿ ಶಾಸಕರು ಶಿಂಧೆ ಈಗ ಹೊರೆಯಾಗಿದ್ದಾರೆ ಮತ್ತು ಪಕ್ಷ (ಬಿಜೆಪಿ) ನಷ್ಟದಲ್ಲಿದೆ ಎಂದು ಭಾವಿಸುತ್ತಾರೆ. 2024ರ ತಾವು ಮುಖ್ಯಮಂತ್ರಿಯಾಗುವುದು ಖಚಿತ ಎಂಬ ಶಿಂಧೆ ಅವರ ಹೇಳಿಕೆ ನಿಜವಲ್ಲ. ಏಕೆಂದರೆ, ಒಂದು ವೇಳೆ ಅದು ನಿಜವಾಗಿದ್ದರೆ ಅಜಿತ್ ಪವಾರ್ ಅವರನ್ನು ಕರೆತರುತ್ತಿರಲಿಲ್ಲ' ಎಂದು ರಾವುತ್ ಪ್ರತಿಪಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT