ಐಡಿಯಾ ಸೆಲ್ಯೂಲರ್-ವೋಡಾಫೋನ್ 
ದೇಶ

ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯಾಗಿ ಪರಿವರ್ತಿಸಿದ ಕೇಂದ್ರ

ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯನ್ನಾಗಿ ಕೇಂದ್ರ ಪರಿವರ್ತಿಸಲಿದ್ದು ಶೇ.33 ರಷ್ಟು ಈಕ್ವಿಟಿಯನ್ನು ತಾನು ಹೊಂದಲಿದೆ. 

ನವದೆಹಲಿ: ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯನ್ನಾಗಿ ಕೇಂದ್ರ ಪರಿವರ್ತಿಸಲಿದ್ದು ಶೇ.33 ರಷ್ಟು ಈಕ್ವಿಟಿಯನ್ನು ತಾನು ಹೊಂದಲಿದೆ. 

ಈ ಪ್ರಕ್ರಿಯೆಗಳ ಬಳಿಕ ಈ ಟೆಲಿಕಾಮ್ ಸಂಸ್ಥೆಯಲ್ಲಿ ಅತಿ ಹೆಚ್ಚು ಪಾಲನ್ನು ಕೇಂದ್ರ ಸರ್ಕಾರ ಹೊಂದಿರಲಿದೆ. 16,133 ಕೋಟಿ ರೂಪಾಯಿಗಳ ಬಾಕಿ ಸಾಲದ ಮೊತ್ತವನ್ನು ಈಕ್ವಿಟಿಯನ್ನಾಗಿ ಪರಿವರ್ತಿಸಲಾಗುತ್ತಿದೆ. 

ಬ್ರಿಟನ್ ನ ವೋಡಾಫೋನ್ ಹಾಗೂ ಭಾರತದ ಐಡಿಯಾ ಸೆಲ್ಯುಲರ್ ನ ವಿಲೀನವಾದ ಬಳಿಕ ಈ ಸಂಸ್ಥೆ ವೋಡಫೋನ್ ಐಡಿಯಾ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿತ್ತು. 

ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಜಿಯೋ ಪ್ರವೇಶದಿಂದ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಬಹುದೊಡ್ದ ಬದಲಾವಣೆಯಾಗಿತ್ತು, ಪ್ರತಿಸ್ಪರ್ಧಿಗಳು ಮಾರುಕಟ್ಟೆಯಿಂದ ಹೊರನಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಪರಿಣಾಮ ಸರ್ಕಾರಕ್ಕೆ ಅಂತಹ ಸಂಸ್ಥೆಗಳು ಸಾಲ, ಬಡ್ಡಿಯ ಬಾಕಿ ಮೊತ್ತವನ್ನೂ ಹಿಂತಿರುಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಕಳೆದ ವರ್ಷದ ಜನವರಿಯಲ್ಲಿ ವೋಡಾಫೋನ್ ಐಡಿಯಾದ ಮಂಡಳಿ ತಾನು ಸರ್ಕಾರಕ್ಕೆ ವಾಪಸ್ ನೀಡಬೇಕಿದ್ದ ಸಾಲದ ಬಾಕಿ ಮೊತ್ತವನ್ನು ಈಕ್ವಿಟಿಯನ್ನಾಗಿ ಪರಿವರ್ತಿಸುವುದಕ್ಕೆ ಅನುಮೋದನೆ ನೀಡಿತ್ತು. ಈಗ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದೆ. 

ಬಿಎಸ್ಇ ನಲ್ಲಿ ವೋಡಾಫೋನ್ ಐಡಿಯಾ ಷೇರುಗಳು 6.89 ರೂಪಾಯಿಗಳಿಗೆ ಕೊನೆಗೊಂಡಿದೆ ಈ ಹಿಂದೆ ಅಂತ್ಯಗೊಂಡ ವಹಿವಾಟಿನ ಬೆಲೆಗಿಂತಲೂ ಇದು ಶೇ.1.03 ರಷ್ಟು ಹೆಚ್ಚಳವಾಗಿದೆ. 

ಆದಿತ್ಯ ಬಿರ್ಲಾ ಸಮೂಹದಿಂದ ಈ ಸಂಸ್ಥೆಯನ್ನು ನಡೆಸುವ ಹಾಗೂ ಅಗತ್ಯವಿರುವ ಹೂಡಿಕೆಯನ್ನು ಆಕರ್ಷಿಸುವ ಬದ್ಧತೆ ಸಿಕ್ಕ ನಂತರವೇ ಸರ್ಕಾರ ಬಡ್ಡಿಯ ಬಾಕಿಯನ್ನು ಈಕ್ವಿಟಿಯನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ ಎಂದು ಟೆಲಿಕಾಮ್ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT