ರಾಂಚಿ: ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ ನಡೆದಿದ್ದು, ದಾಂತೇವಾಡ ಜಿಲ್ಲೆಯಲ್ಲಿ ಮಾಜಿ ಸರ್ಪಂಚ್ ನ್ನು ಹತ್ಯೆ ಮಾಡಲಾಗಿದೆ.
ಮಾಜಿ ಸರ್ಪಂಚ್ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ನಕ್ಸಲರು ಅವರನ್ನು ಹತ್ಯೆ ಮಾಡಿದ್ದಾರೆ.
ಥುಲ್ಥುಲಿ ಎಂಬ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ಬರ್ಸೂರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮಾಜಿ ಸರ್ಪಂಚ್ ರಾಮ್ಧರ್ ಅಲಾಮಿ ಮೃತ ಸರ್ಪಂಚ್ ಆಗಿದ್ದು, ಈತ ಪೊಲೀಸ್ ಮಾಹಿತಿದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಹಣಕ್ಕಾಗಿ ಬೋಧ್ಘಾಟ್ ಅಣೆಕಟ್ಟು ಯೋಜನೆಯನ್ನು ಉತ್ತೇಜಿಸುತ್ತಿದ್ದರು.
ಅಲಾಮಿಗೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು ಎಂದು ನಕ್ಸಲ್ ಕರಪತ್ರದಲ್ಲಿ ತಿಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲರ ಚಟುವಟಿಕೆ ತೀವ್ರಗೊಂಡಿದ್ದು ರಾಜಕಾರಣಿಗಳ ಹತ್ಯೆ, ಹತ್ಯೆ ಯತ್ನಗಳು ವರದಿಯಾಗಿವೆ.