ಮೃತಯೋಧ ಪ್ರಭು 
ದೇಶ

ತಮಿಳುನಾಡು: ಯೋಧನನ್ನೇ ಹತ್ಯೆ ಮಾಡಿದ ಗುಂಪು; ಡಿಎಂಕೆ ಕೌನ್ಸಿಲರ್ ಭಾಗಿ ಆರೋಪ

ತಮಿಳುನಾಡಿನಲ್ಲಿ ದೇಶವೇ ಬೆಚ್ಚಿ ಬೀಳುವ ದುರಂತ ಸಂಭವಿಸಿದ್ದು, ಆಡಳಿತಾ ರೂಢ ಡಿಎಂಕೆ ಕೌನ್ಸಿಲರ್ ಮತ್ತು ಇತರರ ಗುಂಪು ಯೋಧನನ್ನೇ ಹತ್ಯೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚೆನ್ನೈ: ತಮಿಳುನಾಡಿನಲ್ಲಿ ದೇಶವೇ ಬೆಚ್ಚಿ ಬೀಳುವ ದುರಂತ ಸಂಭವಿಸಿದ್ದು, ಆಡಳಿತಾ ರೂಢ ಡಿಎಂಕೆ ಕೌನ್ಸಿಲರ್ ಮತ್ತು ಇತರರ ಗುಂಪು ಯೋಧನನ್ನೇ ಹತ್ಯೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಮಿಳುನಾಡಿನ ಕೃಷ್ಣಗಿರಿಯಲ್ಲಿ ನೀರಿನ ಟ್ಯಾಂಕ್ ಬಳಿ ಬಟ್ಟೆ ಒಗೆಯುವ ವಿವಾದದ ಹಿನ್ನೆಲೆಯಲ್ಲಿ 33 ವರ್ಷದ ಸೇನಾ ಯೋಧನನ್ನು ಡಿಎಂಕೆ ಕೌನ್ಸಿಲರ್ ಮತ್ತು ಇತರರು ಹೊಡೆದು ಕೊಂದಿದ್ದಾರೆ ಎಂದು ಹೇಳಲಾಗಿದೆ. 

ಏನಿದು ಘಟನೆ
ಪೊಲೀಸರ ಪ್ರಕಾರ, ವೆಲಂಪಟ್ಟಿಯ ಸೇನಾಧಿಕಾರಿ ಎಂ ಪ್ರಭಾಕರನ್ (31) ಅವರ ಪತ್ನಿ ಪ್ರಿಯಾ ಕಳೆದ ಬುಧವಾರ ಸಾರ್ವಜನಿಕ ನಲ್ಲಿಯ ಕೆಳಗೆ ಬಟ್ಟೆ ತೊಳೆಯುತ್ತಿದ್ದರು. ಡಿಎಂಕೆಯಿಂದ ನಾಗೋಜನಹಳ್ಳಿ ಪಟ್ಟಣದ ವಾರ್ಡ್ 1ರ ಕೌನ್ಸಿಲರ್ ಆರ್.ಚಿನ್ನಸಾಮಿ (58) ಅವರು ಬಟ್ಟೆ ತೊಳೆದಿದ್ದನ್ನು ಪ್ರಶ್ನಿಸಿದ್ದು, ಅವರ ನಡುವೆ ವಾಗ್ವಾದ ನಡೆದಿದೆ. ಬಳಿಕ ಚಿನ್ನಸಾಮಿ ಇತರ ಎಂಟು ಮಂದಿಯೊಂದಿಗೆ ಪ್ರಭಾಕರನ ಮನೆಗೆ ತೆರಳಿ, ಆತನ ಸಹೋದರ ಪ್ರಭು(28) ಹಾಗೂ ಸೇನೆಯಲ್ಲಿದ್ದ ತಂದೆ ಕೆ.ಮಾದಯ್ಯನ(60) ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಭು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಪ್ರಭಾಕರನ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಚಿನ್ನಸಾಮಿ ಪುತ್ರ ರಾಜಪಾಂಡಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಿ ಗುರುಸೂರ್ಯ ಮೂರ್ತಿ (27), ಚೆನ್ನೈನ ಗ್ರೇಡ್ II ಪೊಲೀಸ್, 19 ವರ್ಷ ವಯಸ್ಸಿನ ಕಾಲೇಜು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಅಂತೆಯೇ ಸಿ ರಾಜಪಾಂಡಿ (30), ಎಂ ಮಣಿಕಂದನ್ (32), ಆರ್ ಮಾದಯ್ಯನ್ (60) ಮತ್ತು ಕೆ ವೇದಿಯಪ್ಪನ್ (55) ಕಳೆದ ಗುರುವಾರ ಪ್ರಕರಣಕ್ಕೆ ಸಂಬಂಧಿಸಿದಂತೆ. ಚಿನ್ನಸಾಮಿ ಹಾಗೂ ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಏತನ್ಮಧ್ಯೆ, ಮಂಗಳವಾರ ಸಂಜೆ ಪ್ರಭು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದು, ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಲಾಗಿದೆ. ತಲೆಮರೆಸಿಕೊಂಡಿದ್ದವರನ್ನು ಬುಧವಾರ ಮಧ್ಯಾಹ್ನ ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT