ಜನವರಿ 9ರಂದು ದೆಹಲಿಯಲ್ಲಿ ತೀವ್ರ ಚಳಿಯಲ್ಲಿ ಮಂಜಿನ ದಟ್ಟವಾದ ಪದರದ ಕಾರಣದಿಂದಾಗಿ ಕಡಿಮೆ ಗೋಚರತೆಯ ನಡುವೆ ರೈಲ್ವೆ ನಿಲ್ದಾಣಕ್ಕೆ ಬಂದ ರೈಲು 
ದೇಶ

ತೀವ್ರ ಚಳಿ, ದಟ್ಟ ಮಂಜು ಮುಸುಕಿದ ಹವಾಮಾನದಿಂದ ಉತ್ತರ ಭಾರತ ತತ್ತರ: ಮುಂದಿನ ದಿನಗಳು ಇನ್ನಷ್ಟು ಕಠಿಣ

ಉತ್ತರ ಮತ್ತು ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು ಒಂದರಿಂದ ಮೂರು ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದು, ನಿನ್ನೆಯಿಂದ ಈ ಪ್ರದೇಶದಾದ್ಯಂತ ಶೀತ ಅಲೆ ಹೆಚ್ಚಾಗಿದೆ. ಹಿಮಾಲಯದಿಂದ ತಣ್ಣನೆಯ ವಾಯುವ್ಯ ಮಾರುತಗಳು ಬಯಲು ಸೀಮೆಯ ಮೇಲೆ ಬರುವುದರಿಂದ ಮುಂದಿನ ಒಂದೆರಡು ದಿನಗಳು ಇನ್ನಷ್ಟು ಚಳಿಯಾಗುವ ಸಂಭವವಿದೆ.

ನವದೆಹಲಿ: ಉತ್ತರ ಮತ್ತು ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು ಒಂದರಿಂದ ಮೂರು ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದು, ನಿನ್ನೆಯಿಂದ ಈ ಪ್ರದೇಶದಾದ್ಯಂತ ಶೀತ ಅಲೆ ಹೆಚ್ಚಾಗಿದೆ. ಹಿಮಾಲಯದಿಂದ ತಣ್ಣನೆಯ ವಾಯುವ್ಯ ಮಾರುತಗಳು ಬಯಲು ಸೀಮೆಯ ಮೇಲೆ ಬರುವುದರಿಂದ ಮುಂದಿನ ಒಂದೆರಡು ದಿನಗಳು ಇನ್ನಷ್ಟು ಚಳಿಯಾಗುವ ಸಂಭವವಿದೆ.

ದೆಹಲಿಯಲ್ಲಿ ನಿನ್ನೆ ನಸುಕಿನ ವೇಳೆಯಲ್ಲಿ 1.4 ° ಸೆಲ್ಸಿಯಸ್‌ ಗೆ ತಾಪಮಾನ ಇಳಿದಿತ್ತು. ಇದು ಈ ಋತುವಿನ ಅತ್ಯಂತ ಕಡಿಮೆ ತಾಪಮಾನವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೇವಲ ಎರಡು ದಿನಗಳಲ್ಲಿ ಕನಿಷ್ಠ ತಾಪಮಾನವು ಸುಮಾರು ಒಂಬತ್ತು ಹಂತಗಳಷ್ಟು ಕಡಿಮೆಯಾಗಿದೆ. ಕಳೆದ ಶನಿವಾರ 10.2 ಡಿಗ್ರಿ ಸೆಲ್ಸಿಯಸ್ ಮತ್ತು ಭಾನುವಾರ 4.7 ಡಿಗ್ರಿ ಸೆಲ್ಸಿಯಸ್ ಇತ್ತು. ಉತ್ತರ ಭಾರತದ ಹಲವೆಡೆ ಇಂದಿನಿಂದ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ. ನಿನ್ನೆಯಿಂದ ಉತ್ತರ ರೈಲ್ವೆ ಪ್ರದೇಶದಲ್ಲಿ 13 ರೈಲುಗಳು ತಡವಾಗಿ ಓಡುತ್ತಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ದೆಹಲಿಯ ಮೂಲ ನಿಲ್ದಾಣವಾದ ಸಫ್ದರ್‌ಜಂಗ್ ನಲ್ಲಿ ಕನಿಷ್ಠ ತಾಪಮಾನವು 1.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ, ಇದು ಜನವರಿ 1, 2021 ರಿಂದ ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಈ ವರ್ಷದ ಜನವರಿ 8 ರಂದು ಕನಿಷ್ಠ 1.9 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ಕಚೇರಿ ಇರುವ ದೆಹಲಿಯ ಲೋಧಿ ರಸ್ತೆಯಲ್ಲಿರುವ ಹವಾಮಾನ ಕೇಂದ್ರವು ಕನಿಷ್ಠ 1.6 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ. ನೈಋತ್ಯ ದೆಹಲಿಯ ಅಯಾನಗರದಲ್ಲಿ ಕನಿಷ್ಠ ತಾಪಮಾನ 2.8 ಡಿಗ್ರಿ ಸೆಲ್ಸಿಯಸ್, ಮಧ್ಯ ದೆಹಲಿಯ ರಿಡ್ಜ್ನಲ್ಲಿ ಎರಡು ಡಿಗ್ರಿ ಸೆಲ್ಸಿಯಸ್ ಮತ್ತು ಪಶ್ಚಿಮ ದೆಹಲಿಯ ಜಾಫರ್ಪುರದಲ್ಲಿ 2.2 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. IMD ಅಂಕಿಅಂಶಗಳ ಪ್ರಕಾರ, ದೆಹಲಿಯು ಜನವರಿ 5 ರಿಂದ ಜನವರಿ 9 ರವರೆಗೆ ತೀವ್ರವಾದ ಶೀತ ಅಲೆಯನ್ನು ಎದುರಿಸಿದೆ.  ಇದು ಒಂದು ದಶಕದಲ್ಲಿ ತಿಂಗಳಲ್ಲಿ ಎರಡನೇ ಅತಿ ಉದ್ದವಾಗಿದೆ. ಇದು ಈ ತಿಂಗಳು ಇಲ್ಲಿಯವರೆಗೆ 50 ಗಂಟೆಗಳ ದಟ್ಟವಾದ ಮಂಜನ್ನು ದಾಖಲಿಸಿದೆ, ಇದು 2019 ರಿಂದ ಅತಿ ಹೆಚ್ಚು.

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮುಂಬರುವ ತೀವ್ರ ಶೀತ ಅಲೆಯಿಂದಾಗಿ ಮುಂದಿನ ಆರು ದಿನಗಳವರೆಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. "ವಾಯುವ್ಯ ಭಾರತದ ಮೇಲಿನ ಶೀತ ಅಲೆಗಳ ಪರಿಸ್ಥಿತಿಗಳು ಜನವರಿ 19 ರಿಂದ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT