ಪ್ರಧಾನಿ ಮೋದಿ. 
ದೇಶ

74ನೇ ಗಣರಾಜ್ಯೋತ್ಸವ: ರಾಜಸ್ಥಾನಿ ಪೇಟ ತೊಟ್ಟ ಪ್ರಧಾನಿ ಮೋದಿ, ಇದರ ವಿಶೇಷತೆ ಏನು?

74ನೇ ಗಣರಾಜ್ಯೋತ್ಸವದ ನಿಮಿತ್ತ ನವದೆಹಲಿಯ ಕರ್ತವ್ಯಪಥಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಡುಗೆಯ ಶೈಲಿ ಎಲ್ಲರನ್ನು ಆಕರ್ಷಿಸಿತು. ಅವರು ರಾಜಸ್ಥಾನಿ ಪೇಟ ಧರಿಸಿ ಆಗಮಿಸಿದ್ದು, ವಿಶೇಷವಾಗಿತ್ತು.

ನವದೆಹಲಿ: 74ನೇ ಗಣರಾಜ್ಯೋತ್ಸವದ ನಿಮಿತ್ತ ನವದೆಹಲಿಯ ಕರ್ತವ್ಯಪಥಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಡುಗೆಯ ಶೈಲಿ ಎಲ್ಲರನ್ನು ಆಕರ್ಷಿಸಿತು. ಅವರು ರಾಜಸ್ಥಾನಿ ಪೇಟ ಧರಿಸಿ ಆಗಮಿಸಿದ್ದು, ವಿಶೇಷವಾಗಿತ್ತು.

ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಗುರುವಾರದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಮೋದಿ ಅವರು. ಮೋದಿಯವರು ಭಾರತದ ವೈವಿಧ್ಯತೆಯನ್ನು ಸಂಕೇತಿಸುವ ಬಹುವರ್ಣದ ರಾಜಸ್ಥಾನಿ ಪೇಟವನ್ನು ಧರಿಸಿದ್ದರು. ಜೊತೆಗೆ, ಕೆನೆ ಬಣ್ಣದ ಕುರ್ತಾ ಮತ್ತು ಬಿಳಿ ಶಾಲು ಧರಿಸಿದ್ದರು. ಪರೇಡ್'ಗೂ ಮುನ್ನ ಮೋದಿಯವರು ಯುದ್ಧ ಸ್ಮಾರಕವನ್ನು ತಲುಪಿದಾಗ ಅವರ ಈ ವರ್ಷದ ಉಡುಗೆಯ ಮೊದಲ ನೋಟವು ಎಲ್ಲರ ಗಮನ ಸೆಳೆಯಿತು.

ಬಿಳಿ ಕುರ್ತಾ ಮತ್ತು ಕಪ್ಪು ಕೋಟ್, ಪ್ಯಾಂಟ್ ಧರಿಸಿರುವ ಪ್ರಧಾನಿ ಮೋದಿ ಬಿಳಿ ಸ್ಟೋಲ್ ಧರಿಸಿದ್ದರು. ಕಪ್ಪು ಮತ್ತು ಬಿಳಿ ಉಡುಗೆ ಜೊತೆ ಬಹುವರ್ಣದ ಪೇಟವು ಅವರ ಲುಕ್​ ಅನ್ನು ಹೆಚ್ಚಿಸಿತ್ತು.

ಕಳೆದ ವರ್ಷ, ಉತ್ತರಾಖಂಡ್‌ನಿಂದ ಬ್ರಹ್ಮಕಮಲ್ ಕ್ಯಾಪ್ ಧರಿಸಿ ಮಣಿಪುರದಿಂದ ಲಿರಂ ಫೈ ತೊಟ್ಟಿದ್ದರು, ಪ್ರಧಾನಿ ಮೋದಿ ಅವರ ಉಡುಗೆಯು ಉತ್ತರಾಖಂಡ ಮತ್ತು ಮಣಿಪುರದ ವಿಶಿಷ್ಟ ಸ್ಪರ್ಶವನ್ನು ಹೊಂದಿತ್ತು.

ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ಎರಡು ಸಂದರ್ಭಗಳಲ್ಲಿ ಪಿಎಂ ಮೋದಿಯವರ ಉಡುಗೆ ಆಯ್ಕೆಯ ಹೆಚ್ಚಿನ ಕುತೂಹಲ ಮೂಡುತ್ತದೆ. ಪ್ರಧಾನಿ ಮೋದಿ ಅವರು ನಿರ್ದಿಷ್ಟ ಬುಡಕಟ್ಟು ಅಥವಾ ಪ್ರದೇಶದ ಸಾಂಪ್ರದಾಯಿಕ ಬಟ್ಟೆಗಳನ್ನು ಇತರ ಸಂದರ್ಭಗಳಲ್ಲಿಯೂ ಧರಿಸುತ್ತಾರೆ.

2022 ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿಯವರ ಪೇಟದಲ್ಲಿ ತ್ರಿವರ್ಣ ಧ್ವಜದ ಒಂದು ನೋಟ ಕಂಡುಬಂದಿತ್ತು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಈ ಪೇಟ ಆಕರ್ಷಣೆಯ ಕೇಂದ್ರವಾಗಿತ್ತು. ಈ ಬಾರಿ ಅವರು ವಿಶೇಷ ಬಹುವರ್ಣದ ರಾಜಸ್ಥಾನಿ ಪೇಟದೊಂದಿಗೆ ಜನರ ಮನ ಗೆದ್ದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT