ದೇಶ

ಎದೆ ನೋವಿನಿಂದ ಆರ್ ಜೆಡಿಯ ತೇಜ್ ಪ್ರತಾಪ್ ಆಸ್ಪತ್ರೆಗೆ ದಾಖಲು

Srinivas Rao BV

ಪಾಟ್ನ: ಬಿಹಾರ ಸಚಿವ ಹಾಗೂ ರಾಷ್ಟ್ರೀಯ ಜನತಾದಳ ನಾಯಕ ತೇಜ್ ಪ್ರತಾಪ್ ಯಾದವ್ ಗೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಮೆಡಿವರ್ಸಲ್ ಆಸ್ಪತ್ರೆಗೆ ತೇಜ್ ಪ್ರತಾಪ್ ಯಾದವ್ ಅವರನ್ನು ದಾಖಲಿಸಲಾಗಿದೆ. 2022 ರ ಆಗಸ್ಟ್ 16 ರಂದು ತೇಜ್ ಪ್ರತಾಪ್ ಯಾದವ್ ಹಾಗೂ ಆತನ ಸಹೋದರ ಸಿಎಂ ತೇಜಸ್ವಿ ಯಾದವ್ ಬಿಹಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. 

ಬಿಹಾರದ ಸರ್ಕಾರದಲ್ಲಿ ತೇಜ್ ಪ್ರತಾಪ್ ಯಾದವ್, ಪರಿಸರ ಹಾಗೂ ಅರಣ್ಯ, ಹವಾಮಾನ ಬದಲಾವಣೆಯ ಸಚಿವರಾಗಿದ್ದು, ಸೈಕಲ್ ನಲ್ಲಿ ಸಂಚರಿಸುವ ಮೂಲಕ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಬದ್ಧತೆ ತೋರಿ ಸುದ್ದಿಯಾಗಿದ್ದರು. 

SCROLL FOR NEXT