ದೇಶ

ಐದು ವರ್ಷದಲ್ಲಿ ಚರಂಡಿ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ 339 ಜನರು ಸಾವು: ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಚರಂಡಿ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ 339 ಜನರು ಸಾವನ್ನಪ್ಪಿರುವುದಾಗಿ ಕೇಂದ್ರ ಸರ್ಕಾರದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಲೋಕಸಭೆಯಲ್ಲಿ ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ, 2023 ರಲ್ಲಿ ಒಂಬತ್ತು, 2022 ರಲ್ಲಿ 66, 2021 ರಲ್ಲಿ 58, 2020 ರಲ್ಲಿ 22, 2019 ರಲ್ಲಿ 117 ಮತ್ತು 2018 ರಲ್ಲಿ 67 ಜನರು ಸಾವನ್ನಪ್ಪಿರುವುದು ದಾಖಲಾಗಿದೆ ಎಂದು ಹೇಳಿದರು.

ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಮತ್ತು ಅವರ ಪುನರ್ವಸತಿ (PEMSR) ಕಾಯ್ದೆ 2013 ರ ಅಡಿಯಲ್ಲಿ  ಹಸ್ತಚಾಲಿತ ಕಸ ವಿಲೇವಾರಿ ನಿಷೇಧಿತ ಅಭ್ಯಾಸವಾಗಿದೆ. 

SCROLL FOR NEXT