ಸಾಂದರ್ಭಿಕ ಚಿತ್ರ 
ದೇಶ

ಮೋದಿ-ಯೋಗಿಯನ್ನು ಹೊಗಳಿದ್ದಕ್ಕೆ ಪ್ರಯಾಣಿಕನ ಮೇಲೆ ಬೊಲೆರೋ ಕಾರು ಹತ್ತಿಸಿ ಕೊಂದ ಚಾಲಕ!

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ಕಾರಣಕ್ಕೆ ಚಾಲಕನೊಬ್ಬ ವ್ಯಕ್ತಿಯನ್ನು ಬೊಲೆರೊ ಕಾರು ಹತ್ತಿಸಿ ಕೊಂದಿದ್ದಾನೆ.

ಮಿರ್ಜಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ಕಾರಣಕ್ಕೆ ಚಾಲಕನೊಬ್ಬ ವ್ಯಕ್ತಿಯನ್ನು ಬೊಲೆರೊ ಕಾರು ಹತ್ತಿಸಿ ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಸಹಚರರೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದನು. ಸತತ 6 ಗಂಟೆಗಳ ಕಠಿಣ ಪರಿಶ್ರಮದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವಾಸ್ತವವಾಗಿ, ವಿಂಧ್ಯಾಚಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲಾಹಿ ಗ್ರಾಮದ ನಿವಾಸಿ 52 ವರ್ಷದ ರಾಜೇಶ್ ದುಬೆ ಭಾನುವಾರ ತನ್ನ ಸೋದರಳಿಯನ ಮದುವೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ಮೆರವಣಿಗೆ ಮುಗಿಸಿ ಹಿಂತಿರುಗಲು ಬೊಲೆರೊ ಹತ್ತಿದರು. ಕಾರಿನಲ್ಲಿ ರಾಜಕೀಯ ಚರ್ಚೆ ಶುರುವಾಯಿತು. ಇದು ತ್ವರಿತವಾಗಿ ವಾದಕ್ಕೆ ತಿರುಗಿತು.

ಕಾರು ಚಾಲಕ ಅಮ್ಜದ್ ಮೋದಿ-ಯೋಗಿ ಬಗ್ಗೆ ಕೆಟ್ಟದಾಗಿ ಮಾತನಾಡಿದ
ವಾಸ್ತವವಾಗಿ, ರಾಜೇಶ್ ದುಬೆ ಅವರು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿಯನ್ನು ಹೊಗಳುತ್ತಿದ್ದರು. ಇದು ಚಾಲಕ ಅಮ್ಜದ್‌ಗೆ ಇಷ್ಟವಾಗಲಿಲ್ಲ. ಇದಕ್ಕೆ ಒಪ್ಪದ ಚಾಲಕ ಆತನೊಂದಿಗೆ ಜಗಳ ಆರಂಭಿಸಿದ. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಬಗ್ಗೆ ಕೆಟ್ಟದಾಗಿ ಮಾತನಾಡಲು ಆರಂಭಿಸಿದನು. ವಿಷಯ ವಾಗ್ವಾದಕ್ಕೆ ತಿರುಗುತ್ತಿರುವುದನ್ನು ಕಂಡ ಕಾರಿನಲ್ಲಿದ್ದ ಮಹೋಖರ್ ಗ್ರಾಮದ ಮಾಜಿ ಮುಖ್ಯಸ್ಥ ಧೀರೇಂದ್ರ ಪಾಂಡೆ ಸಮಾಧಾನಪಡಿಸಿದರು. ಇದಾದ ಬಳಿಕ ಧೀರೇಂದ್ರ ತಮ್ಮ ಮನೆ ಬಂದ ನಂತರ ಕಾರಿನಿಂದ ಕೆಳಗಿಳಿದು ಹೋಗಿದ್ದರು.

ಬಲವಂತವಾಗಿ ಕಾರಿನಿಂದ ಕೆಳಗಿಳಿಸಿ ಕಾರು ಹತ್ತಿಸಿದ್ದಾನೆ
ಇದಾದ ನಂತರ ಅಮ್ಜದ್, ರಾಜೇಶ್ ದುಬೆಯನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿದ್ದಾನೆ. ದುಬೆ ಮನೆಗೆ ನೋಡುಕೊಂಡು ಹೋಗುತ್ತಿದ್ದಾಗ ಚಾಲಕ ಕಾರನ್ನು ಅವರ ಮೇಲೆ ಹತ್ತಿಸಿ, 29 ಮೀಟರ್ ವರೆಗೆ ಎಳೆದೊಯ್ದಿದ್ದಾನೆ. ಇದರಿಂದ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನು ನೋಡಿದ ಕುಟುಂಬಸ್ಥರು ಗಲಾಟೆ ಶುರು ಮಾಡಿದ್ದು ಇದನ್ನು ಕಂಡ ಅಮ್ಜದ್ ಸಹಚರನ ಬೈಕ್‌ನಲ್ಲಿ ಪರಾರಿಯಾಗಿದ್ದನು.

ವಾಸ್ತವವಾಗಿ ಬೊಲೆರೊವನ್ನು ಮದುವೆಯ ಅತಿಥಿಗಳಿಗಾಗಿ ಬಾಡಿಗೆಗೆ ಪಡೆಯಲಾಗಿತ್ತು. ಸದ್ಯ ಪೊಲೀಸರು ಆರೋಪಿ ಅಮ್ಜದ್ ನನ್ನು ಬಂಧಿಸಿದ್ದಾರೆ. ಬೊಲೆರೋ ಸವಾರರ ಹೇಳಿಕೆ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್