ದೇಶ

ರಾಜಸ್ಥಾನ: ಐವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ದಂಪತಿ ಆತ್ಮಹತ್ಯೆ

Lingaraj Badiger

ಜಲೋರ್: ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಬುಧವಾರ ದಂಪತಿಗಳು ತಮ್ಮ ಐದು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕರಲಾಲ್ (32) ಮತ್ತು ಅವರ ಪತ್ನಿ ಬದ್ಲಿ(30) ಅವರು ತಮ್ಮ ಐವರು ಮಕ್ಕಳೊಂದಿಗೆ ಸಿದ್ಧೇಶ್ವರ ಪಾಲ್ಡಿ ಬಳಿ ನರ್ಮದಾ ಮುಖ್ಯ ಕಾಲುವೆಗೆ ಹಾರಿದ್ದಾರೆ ಎಂದು ಸಂಚೋರ್ ಪೊಲೀಸ್ ಠಾಣೆ ಎಸ್‌ಎಚ್‌ಒ ನಿರಂಜನ್ ಪ್ರತಾಪ್ ಸಿಂಗ್ ಅವರು ಹೇಳಿದ್ದಾರೆ.

ಸ್ಥಳೀಯ ಡೈವರ್‌ಗಳ ಸಹಾಯದಿಂದ ಪೊಲೀಸ್ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ಇದುವರೆಗೆ ಅವರ ಎಂಟು ವರ್ಷದ ಮಗನ ಶವ ಮಾತ್ರ ಹೊರ ತೆಗೆಯಲಾಗಿದೆ.

SCROLL FOR NEXT