ಬಿಜೆಪಿ ಸಾಂದರ್ಭಿಕ ಚಿತ್ರ 
ದೇಶ

ಕಾಂಗ್ರೆಸ್ ನಡೆಸುತ್ತಿರುವುದು ಸತ್ಯಾಗ್ರಹ ಅಲ್ಲ, ದುರಾಗ್ರಹ: ಕೈ ಪಾಳಯದ ವಿರುದ್ಧ ಬಿಜೆಪಿ ವಾಗ್ದಾಳಿ

ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಭಾನುವಾರದಂದು ಕೈ ಪಾಳಯ ನಡೆಸುತ್ತಿರುವ ಸತ್ಯಾಗ್ರಹವನ್ನು ದುರಾಗ್ರಹ ಎಂದು ಕರೆದಿದೆ. ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ದೆಹಲಿಯ ರಾಜ್‌ಘಾಟ್‌ನಲ್ಲಿ 'ಸಂಕಲ್ಪ ಸತ್ಯಾಗ್ರಹ' ನಡೆಸುತ್ತಿದೆ.

ನವದೆಹಲಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಭಾನುವಾರದಂದು ಕೈ ಪಾಳಯ ನಡೆಸುತ್ತಿರುವ ಸತ್ಯಾಗ್ರಹವನ್ನು ದುರಾಗ್ರಹ ಎಂದು ಕರೆದಿದೆ.

ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ದೆಹಲಿಯ ರಾಜ್‌ಘಾಟ್‌ನಲ್ಲಿ 'ಸಂಕಲ್ಪ ಸತ್ಯಾಗ್ರಹ' ನಡೆಸುತ್ತಿದೆ.

ಐಎಎನ್‌ಎಸ್ ಜೊತೆ ಮಾತನಾಡಿದ ಬಿಜೆಪಿ ನಾಯಕ ಆರ್.ಪಿ. ಸಿಂಗ್, 'ಕಾಂಗ್ರೆಸ್ ಯಾವ ರೀತಿಯ ಸತ್ಯಾಗ್ರಹ ಮಾಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸಿಖ್ಖರ ಹಂತಕ (ಜಗದೀಶ್ ಟೈಟ್ಲರ್) ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಟೈಟ್ಲರ್ ಇಲ್ಲದೆ ಕಾಂಗ್ರೆಸ್ ಉಳಿಯಲು ಸಾಧ್ಯವಿಲ್ಲ. ಪಕ್ಷವು ಅವರನ್ನು ಪ್ರತಿಯೊಂದಕ್ಕೂ ಕಾರ್ಯಕ್ರಮಕ್ಕೂ ಆಹ್ವಾನಿಸುತ್ತದೆ' ಎಂದಿದ್ದಾರೆ. 

'ಇದು ಸತ್ಯಾಗ್ರಹವಲ್ಲ. ಸಿಖ್ಖರನ್ನು ಕೊಂದ ಆರೋಪ ಹೊತ್ತಿರುವ ಜಗದೀಶ್ ಟೈಟ್ಲರ್ ಅವರನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಸಿಂಗ್ ಆರೋಪಿಸಿದ್ದಾನೆ. ಈ ವರ್ಷದ ಫೆಬ್ರುವರಿಯಲ್ಲಿ ಟೈಟ್ಲರ್ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಕಾಂಗ್ರೆಸ್ ನಡೆಸುತ್ತಿರುವ ಸತ್ಯಾಗ್ರಹವು ಒಬಿಸಿಗಳು ಮತ್ತು ನ್ಯಾಯಾಲಯಗಳ ವಿರುದ್ಧದ 'ದುರಾಗ್ರಹ'. ಏಕೆಂದರೆ, ಇದು ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದ್ದು ನ್ಯಾಯಾಲಯ. ಇಂತಹ ಹೇಳಿಕೆಯನ್ನು ಬೆಂಬಲಿಸುವುದು ಒಬಿಸಿ ಸಮಾಜದ ವಿರುದ್ಧದ ದುರಾಗ್ರಹವಾಗಿದೆ ಎಂದರು.

ಜಗದೀಶ್ ಟೈಟ್ಲರ್ ಈ ಸತ್ಯಾಗ್ರಹದ ಭಾಗವಾಗಲು ಅವಕಾಶ ನೀಡುವ ಮೂಲಕ ಸಿಖ್ ಸಮುದಾಯದ ವಿರುದ್ಧವೂ ಆಗಿತ್ತು. ಸಿಖ್ ಸಮುದಾಯದ ಗಾಯಗಳಿಗೆ ಕಾಂಗ್ರೆಸ್ ಪದೇ ಪದೆ ಉಪ್ಪು ಸವರುತ್ತಿದೆ. ಎಂಸಿಡಿ ಚುನಾವಣೆ ಮತ್ತು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಟೈಟ್ಲರ್ ಅವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದಿದ್ದಾರೆ.

ಮಹಾತ್ಮ ಗಾಂಧಿ ಅವರು ಭಾರತವನ್ನು ಒಗ್ಗೂಡಿಸಲು ಹೋರಾಡಿದರು, ಅಲ್ಲಿ "ರಾಹುಲ್ ಗಾಂಧಿ ಭಾರತವನ್ನು ಅವಮಾನಿಸುತ್ತಾರೆ. ಬಡ ಮತ್ತು ದುರ್ಬಲ ಸಮುದಾಯಗಳು ಮತ್ತು ಒಬಿಸಿ ಸಮಾಜವನ್ನು ಅವಮಾನಿಸುತ್ತಾರೆ. ಸಿಖ್ ಸಮುದಾಯ ಮತ್ತು ಸಂವಿಧಾನವನ್ನು ಅವಮಾನಿಸುತ್ತಾರೆ ಎಂದು ಪೂನಾವಾಲಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT